<p><strong>ಸುರಪುರ:</strong> ‘ಮಾರುಕಟ್ಟೆಯ ವ್ಯಾಪ್ತಿಯ ಹುಣಸಗಿ, ಹಸನಾಪುರ ಸೇರಿದಂತೆ ಉಪ ಮಾರುಕಟ್ಟೆ ವ್ಯಾಪ್ತಿಯಲ್ಲಿ 2018-19ನೇ ಸಾಲಿನ ₹7 ಕೋಟಿ 65 ಲಕ್ಷ ವೆಚ್ಚದ 11 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ’ ಎಂದು ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಹೇಳಿದರು.</p>.<p>ಪಟ್ಟಣದಲ್ಲಿ ಎಪಿಎಂಪಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಗುತ್ತೇದಾರರು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಏಜೆನ್ಸಿ ಯವರಿಗೆ ಸುತ್ತೋಲೆ ಕಳುಹಿಸುವಂತೆ’ ಸಮಿತಿ ಕಾರ್ಯದರ್ಶಿ ಸುರೇಶ ಬಾಬು ಅವರಿಗೆ ಸೂಚಿಸಿದರು.</p>.<p>ಪ್ರಸಕ್ತ ಸಾಲಿನಲ್ಲಿ ಖಾನಾಪುರ ಮಾರುಕಟ್ಟೆಯ ಮುಖ್ಯದ್ವಾರದದಲ್ಲಿ ಕಬ್ಬಿಣದ ಕಮಾನು ಮತ್ತು ಗೇಟ್ ನಿರ್ಮಾಣ, ಅತಿಥಿ ಗೃಹದ ಶೌಚಾಲಯಕ್ಕೆ ಟ್ಯಾಂಕ್, ನೀರಿನ ವ್ಯವಸ್ಥೆಗಾಗಿ ಹೊಸ ಕೊಳವೆಬಾವಿ, ಕಾಂಪೌಂಡ ಗೋಡೆ, ಹುಣಸಗಿ ಉಪ ಮರುಕಟ್ಟೆ ಮುಖ್ಯದ್ವಾರಕ್ಕೆ 2 ಬದಿಯ ಗೇಟ್ ಮತ್ತು ಕಬ್ಬಿಣದ ಕಮಾನು ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು.</p>.<p>ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಸದಸ್ಯರಾದ ದೇವಣ್ಣ ಮಲಗಲದಿನ್ನಿ, ದುರ್ಗಪ್ಪ ಗೋಗಿಕರ್, ಅಪ್ಪಾಸಾಹೇಬಗೌಡ ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ಆರ್ಯಶಂಕರ, ಮಲ್ಲಿಕಾರ್ಜುನ, ಶಂಕ್ರಮ್ಮ ಪೂಜಾರಿ, ಮಲ್ಲಣ್ಣ ಸಾಹು, ಅಮರೇಶ ಸಾಹು ಕಟ್ಟಿಮನಿ, ಸಣ್ಣಕ್ಕೆಪ್ಪ ಸಾಹು ಮಾಲಗತ್ತಿ,, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಮಾರುಕಟ್ಟೆಯ ವ್ಯಾಪ್ತಿಯ ಹುಣಸಗಿ, ಹಸನಾಪುರ ಸೇರಿದಂತೆ ಉಪ ಮಾರುಕಟ್ಟೆ ವ್ಯಾಪ್ತಿಯಲ್ಲಿ 2018-19ನೇ ಸಾಲಿನ ₹7 ಕೋಟಿ 65 ಲಕ್ಷ ವೆಚ್ಚದ 11 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ’ ಎಂದು ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಹೇಳಿದರು.</p>.<p>ಪಟ್ಟಣದಲ್ಲಿ ಎಪಿಎಂಪಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಗುತ್ತೇದಾರರು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಏಜೆನ್ಸಿ ಯವರಿಗೆ ಸುತ್ತೋಲೆ ಕಳುಹಿಸುವಂತೆ’ ಸಮಿತಿ ಕಾರ್ಯದರ್ಶಿ ಸುರೇಶ ಬಾಬು ಅವರಿಗೆ ಸೂಚಿಸಿದರು.</p>.<p>ಪ್ರಸಕ್ತ ಸಾಲಿನಲ್ಲಿ ಖಾನಾಪುರ ಮಾರುಕಟ್ಟೆಯ ಮುಖ್ಯದ್ವಾರದದಲ್ಲಿ ಕಬ್ಬಿಣದ ಕಮಾನು ಮತ್ತು ಗೇಟ್ ನಿರ್ಮಾಣ, ಅತಿಥಿ ಗೃಹದ ಶೌಚಾಲಯಕ್ಕೆ ಟ್ಯಾಂಕ್, ನೀರಿನ ವ್ಯವಸ್ಥೆಗಾಗಿ ಹೊಸ ಕೊಳವೆಬಾವಿ, ಕಾಂಪೌಂಡ ಗೋಡೆ, ಹುಣಸಗಿ ಉಪ ಮರುಕಟ್ಟೆ ಮುಖ್ಯದ್ವಾರಕ್ಕೆ 2 ಬದಿಯ ಗೇಟ್ ಮತ್ತು ಕಬ್ಬಿಣದ ಕಮಾನು ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು.</p>.<p>ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಸದಸ್ಯರಾದ ದೇವಣ್ಣ ಮಲಗಲದಿನ್ನಿ, ದುರ್ಗಪ್ಪ ಗೋಗಿಕರ್, ಅಪ್ಪಾಸಾಹೇಬಗೌಡ ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ಆರ್ಯಶಂಕರ, ಮಲ್ಲಿಕಾರ್ಜುನ, ಶಂಕ್ರಮ್ಮ ಪೂಜಾರಿ, ಮಲ್ಲಣ್ಣ ಸಾಹು, ಅಮರೇಶ ಸಾಹು ಕಟ್ಟಿಮನಿ, ಸಣ್ಣಕ್ಕೆಪ್ಪ ಸಾಹು ಮಾಲಗತ್ತಿ,, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>