ಬಸ್ ನಿಲ್ದಾಣದಿಂದ ಹೊರ ಬಂದ ಬಸ್ ಇನ್ನೇನು ಪಟ್ಟಣದ ಹೊರವಲಯಕ್ಕೆ ಹೋಗುವಷ್ಟರಲ್ಲಿ ರಸ್ತೆಯಲ್ಲಿ ಬಿಡಾಡಿ ದನಗಳು ಅಡ್ಡ ಬಂದಿವೆ. ಹೀಗಾಗಿ ಬಸ್ ನಿಲ್ಲಿಸಿದ್ದಾರೆ. ಕೂಡಲೇ ಬಸ್ ಹಿಂಬಾಲಿಸಿ ಬಂದಿದ್ದ ಗುರುಮಠಕಲ್ ಘಟಕದ ಸಿಬ್ಬಂದಿ ಮಧುಸೂದನ್ ಅವರನ್ನು ಬಸ್ನಿಂದ ಕೆಳಗಿಳಿಸಿಕೊಂಡು, ಬಸ್ಸನ್ನು ಮತ್ತೆ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. ಪರಗಿ ಘಟಕದ ಹಿರಿಯ ಅಧಿಕಾರಿಗಳು ಕರೆ ಮಾಡಿ ಸಮಯ ಬದಲಾವಣೆ ಹಾಗೂ ಘಟನೆ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದಾಗ ಬಸ್ ತೆರಳಲು ಇಲ್ಲಿನ ಸಿಬ್ಬಂದಿ ಬಿಟ್ಟಿದ್ದಾರೆ.