<p><strong>ಯಾದಗಿರಿ: </strong>ನಗರದಲ್ಲಿ ಒಂದು ಕಾಲದಲ್ಲಿ 12ಕ್ಕೂ ಹೆಚ್ಚು ಬೀಡಿ ಕಾರ್ಖಾನೆಗಳಿದ್ದವು. ಈಗ ಅವು ಮುಚ್ಚಿದ್ದು, ಒಂದೆರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೀಡಿ ಸುತ್ತುವ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.</p>.<p>ಒಂದು ಬೀಡಿ ಕಟ್ಟಿನಲ್ಲಿ 24 ಬೀಡಿಗಳು ಇರುತ್ತವೆ. ಒಬ್ಬೊಬ್ಬರು ಸಾವಿರ ಬೀಡಿ ಸುತ್ತುತ್ತಾರೆ. ಪ್ರತಿದಿನ ಮಧ್ಯಾಹ್ನ 1ಕ್ಕೆ ಕಾರ್ಖಾನೆಗೆ ಕೊಟ್ಟು ಬರುತ್ತಾರೆ. ಕೆಲ ಸಂದರ್ಭಗಳಲ್ಲಿ ಕಾರ್ಖಾನೆಯವರು ಬೀಡಿ ತೆಗೆದುಕೊಳ್ಳುವುದಿಲ್ಲ. ಆಗ ಕಾರ್ಮಿಕರ ಶ್ರಮವೆಲ್ಲ ವ್ಯರ್ಥವಾಗುತ್ತದೆ.</p>.<p>ಬೀಡಿ ಸಿದ್ಧಪಡಿಸಲು ದಾರ, ಒಂದು ಕಡ್ಡಿ, ತಂಬಾಕು ಪುಡಿ ಮತ್ತು ಎಲೆ ಬೇಕು. 1 ಸಾವಿರ ಬೀಡಿ ಸುತ್ತಿದರೆ ₹ 120ರವರೆಗೆ ದಿನಗೂಲಿ ಸಿಗುತ್ತದೆ. ಪ್ರತಿ ಶುಕ್ರವಾರ ರಜೆಯಿದ್ದು, ಶನಿವಾರ ಕೂಲಿ ಹಣ ಸಿಗುತ್ತದೆ. ಪುರುಷರು ಎಲೆ ಕತ್ತರಿಸಿದರೆ, ಮಹಿಳೆಯರು ಬೀಡಿ ಸುತ್ತುತ್ತಾರೆ. ಪ್ರತಿದಿನ ಕಟ್ಟಿದರೆ ಕೂಲಿ. ಇಲ್ಲದಿದ್ದರೆ ಕೂಲಿ ಸಿಗುವುದಿಲ್ಲ’ ಎಂದು ಕಾರ್ಮಿಕರು ಹೇಳುತ್ತಾರೆ.</p>.<p>‘ಸರ್ಕಾರದಿಂದಬೀಡಿ ಸುತ್ತುವ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಆದರೂ ಕಾಯಕ ಮುಂದುವರೆಸಿದ್ದೇವೆ’ ಎನ್ನುತ್ತಾರೆ ಕಾರ್ಮಿಕ ಮಹಮ್ಮದ್ ಇಕ್ಬಾಲ್.</p>.<p>‘ಬೀಡಿ ಕಾರ್ಮಿಕರಿಗೆಸಾವಿರ ಬೀಡಿ ಸುತ್ತಿದರೆ ₹224 ದಿನಗೂಲಿ ನೀಡಬೇಕು. ಆದರೆ, ನಗರದಲ್ಲಿ ₹110 ರಿಂದ ₹120 ನೀಡಲಾಗುತ್ತಿದೆ. ಇದರಿಂದ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕಂತೆ ಕೂಲಿ ಪಡೆಯುತ್ತಿಲ್ಲ. ಹೆಚ್ಚು ಒತ್ತಡ ಹಾಕಿ ಕೇಳಲು ಕಾರ್ಮಿಕರಿಗೆ ಆಗುತ್ತಿಲ್ಲ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.</p>.<p>ಮಾಲೀಕರೆ ಏಜೆಂಟ್:</p>.<p>ಬೀಡಿ ಕಾರ್ಖಾನೆಗಳು ಬಂದ್ ಆಗಿರುವ ಕಾರಣ ಮಾಲೀಕರೇ ಕಮಿಷನ್ ಎಜೆಂಟರಾಗಿದ್ದಾರೆ. ಇದರಿಂದ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಬೋನಸ್ ಇಲ್ಲ, ಕಾಯಂ ಕೆಲಸ ಇಲ್ಲ. ಚಿಕಿತ್ಸೆ ಪಡೆಯಲು ಬೀಡಿ ಕಾರ್ಮಿಕ ಆಸ್ಪತ್ರೆ ಇದೆ. ಕೆಲವರಿಗೆ ಕಾರ್ಡ್ ಇದೆ. ಇನ್ನೂ ಕೆಲವರಿಗೆ ಇಲ್ಲ.</p>.<p>***</p>.<p>ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡ ಬೀಡಿ ಕಾರ್ಮಿಕರಿಲ್ಲ. ಮನೆಗಳಲ್ಲಿ ಬೀಡಿ ಸುತ್ತುವ ಕೆಲಸ ಮಾಡುತ್ತಾರೆ. ಹೀಗಾಗಿ ಅವರಿಗೆ ಯಾವ ಸೌಲಭ್ಯವೂ ಇಲ್ಲದಾಗಿದೆ<br /><strong>-ಶ್ರೀಹರಿ ದೇಶಪಾಂಡೆ, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ</strong></p>.<p>***</p>.<p>ಭಾರತ್ ಬೀಡಿ ಕಾರ್ಖಾನೆಯಲ್ಲಿ 34 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 3–4 ವರ್ಷಗಳ ಹಿಂದೆ ಬೀಡಿ ಕಾರ್ಮಿಕ ಸಮೀಕ್ಷೆ ಆಗಿತ್ತು. ಉತ್ಪಾದನೆ ಇಲ್ಲದ ಕಾರಣ ಕಾರ್ಖಾನೆಗಳು ಬಂದ್ ಆಗಿವೆ<br /><strong>-ಶಿವಶಂಕರಪ್ಪ ತಳವಾರ, ಕಾರ್ಮಿಕ ನಿರೀಕ್ಷಕ</strong></p>.<p>***</p>.<p>ನಮ್ಮ ಶ್ರಮಕ್ಕೆ ತಕ್ಕಂತೆ ಹಣ ನೀಡುತ್ತಿಲ್ಲ. ಆದರೆ, ಜೀವನ ಸಾಗಿಸಲು ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲೆ ಹಾಳಾದರೂ ನಮಗೆ ನಷ್ಟ ಆಗುತ್ತದೆ<br /><strong>-ಸುಲ್ತಾನ್ ಬೇಗಂ ಅನ್ವರ್ ಹುಸೇನ್, ಬೀಡಿ ಸುತ್ತುವ ಮಹಿಳೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರದಲ್ಲಿ ಒಂದು ಕಾಲದಲ್ಲಿ 12ಕ್ಕೂ ಹೆಚ್ಚು ಬೀಡಿ ಕಾರ್ಖಾನೆಗಳಿದ್ದವು. ಈಗ ಅವು ಮುಚ್ಚಿದ್ದು, ಒಂದೆರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೀಡಿ ಸುತ್ತುವ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.</p>.<p>ಒಂದು ಬೀಡಿ ಕಟ್ಟಿನಲ್ಲಿ 24 ಬೀಡಿಗಳು ಇರುತ್ತವೆ. ಒಬ್ಬೊಬ್ಬರು ಸಾವಿರ ಬೀಡಿ ಸುತ್ತುತ್ತಾರೆ. ಪ್ರತಿದಿನ ಮಧ್ಯಾಹ್ನ 1ಕ್ಕೆ ಕಾರ್ಖಾನೆಗೆ ಕೊಟ್ಟು ಬರುತ್ತಾರೆ. ಕೆಲ ಸಂದರ್ಭಗಳಲ್ಲಿ ಕಾರ್ಖಾನೆಯವರು ಬೀಡಿ ತೆಗೆದುಕೊಳ್ಳುವುದಿಲ್ಲ. ಆಗ ಕಾರ್ಮಿಕರ ಶ್ರಮವೆಲ್ಲ ವ್ಯರ್ಥವಾಗುತ್ತದೆ.</p>.<p>ಬೀಡಿ ಸಿದ್ಧಪಡಿಸಲು ದಾರ, ಒಂದು ಕಡ್ಡಿ, ತಂಬಾಕು ಪುಡಿ ಮತ್ತು ಎಲೆ ಬೇಕು. 1 ಸಾವಿರ ಬೀಡಿ ಸುತ್ತಿದರೆ ₹ 120ರವರೆಗೆ ದಿನಗೂಲಿ ಸಿಗುತ್ತದೆ. ಪ್ರತಿ ಶುಕ್ರವಾರ ರಜೆಯಿದ್ದು, ಶನಿವಾರ ಕೂಲಿ ಹಣ ಸಿಗುತ್ತದೆ. ಪುರುಷರು ಎಲೆ ಕತ್ತರಿಸಿದರೆ, ಮಹಿಳೆಯರು ಬೀಡಿ ಸುತ್ತುತ್ತಾರೆ. ಪ್ರತಿದಿನ ಕಟ್ಟಿದರೆ ಕೂಲಿ. ಇಲ್ಲದಿದ್ದರೆ ಕೂಲಿ ಸಿಗುವುದಿಲ್ಲ’ ಎಂದು ಕಾರ್ಮಿಕರು ಹೇಳುತ್ತಾರೆ.</p>.<p>‘ಸರ್ಕಾರದಿಂದಬೀಡಿ ಸುತ್ತುವ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಆದರೂ ಕಾಯಕ ಮುಂದುವರೆಸಿದ್ದೇವೆ’ ಎನ್ನುತ್ತಾರೆ ಕಾರ್ಮಿಕ ಮಹಮ್ಮದ್ ಇಕ್ಬಾಲ್.</p>.<p>‘ಬೀಡಿ ಕಾರ್ಮಿಕರಿಗೆಸಾವಿರ ಬೀಡಿ ಸುತ್ತಿದರೆ ₹224 ದಿನಗೂಲಿ ನೀಡಬೇಕು. ಆದರೆ, ನಗರದಲ್ಲಿ ₹110 ರಿಂದ ₹120 ನೀಡಲಾಗುತ್ತಿದೆ. ಇದರಿಂದ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕಂತೆ ಕೂಲಿ ಪಡೆಯುತ್ತಿಲ್ಲ. ಹೆಚ್ಚು ಒತ್ತಡ ಹಾಕಿ ಕೇಳಲು ಕಾರ್ಮಿಕರಿಗೆ ಆಗುತ್ತಿಲ್ಲ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.</p>.<p>ಮಾಲೀಕರೆ ಏಜೆಂಟ್:</p>.<p>ಬೀಡಿ ಕಾರ್ಖಾನೆಗಳು ಬಂದ್ ಆಗಿರುವ ಕಾರಣ ಮಾಲೀಕರೇ ಕಮಿಷನ್ ಎಜೆಂಟರಾಗಿದ್ದಾರೆ. ಇದರಿಂದ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಬೋನಸ್ ಇಲ್ಲ, ಕಾಯಂ ಕೆಲಸ ಇಲ್ಲ. ಚಿಕಿತ್ಸೆ ಪಡೆಯಲು ಬೀಡಿ ಕಾರ್ಮಿಕ ಆಸ್ಪತ್ರೆ ಇದೆ. ಕೆಲವರಿಗೆ ಕಾರ್ಡ್ ಇದೆ. ಇನ್ನೂ ಕೆಲವರಿಗೆ ಇಲ್ಲ.</p>.<p>***</p>.<p>ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡ ಬೀಡಿ ಕಾರ್ಮಿಕರಿಲ್ಲ. ಮನೆಗಳಲ್ಲಿ ಬೀಡಿ ಸುತ್ತುವ ಕೆಲಸ ಮಾಡುತ್ತಾರೆ. ಹೀಗಾಗಿ ಅವರಿಗೆ ಯಾವ ಸೌಲಭ್ಯವೂ ಇಲ್ಲದಾಗಿದೆ<br /><strong>-ಶ್ರೀಹರಿ ದೇಶಪಾಂಡೆ, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ</strong></p>.<p>***</p>.<p>ಭಾರತ್ ಬೀಡಿ ಕಾರ್ಖಾನೆಯಲ್ಲಿ 34 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 3–4 ವರ್ಷಗಳ ಹಿಂದೆ ಬೀಡಿ ಕಾರ್ಮಿಕ ಸಮೀಕ್ಷೆ ಆಗಿತ್ತು. ಉತ್ಪಾದನೆ ಇಲ್ಲದ ಕಾರಣ ಕಾರ್ಖಾನೆಗಳು ಬಂದ್ ಆಗಿವೆ<br /><strong>-ಶಿವಶಂಕರಪ್ಪ ತಳವಾರ, ಕಾರ್ಮಿಕ ನಿರೀಕ್ಷಕ</strong></p>.<p>***</p>.<p>ನಮ್ಮ ಶ್ರಮಕ್ಕೆ ತಕ್ಕಂತೆ ಹಣ ನೀಡುತ್ತಿಲ್ಲ. ಆದರೆ, ಜೀವನ ಸಾಗಿಸಲು ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲೆ ಹಾಳಾದರೂ ನಮಗೆ ನಷ್ಟ ಆಗುತ್ತದೆ<br /><strong>-ಸುಲ್ತಾನ್ ಬೇಗಂ ಅನ್ವರ್ ಹುಸೇನ್, ಬೀಡಿ ಸುತ್ತುವ ಮಹಿಳೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>