ವಡಗೇರಾ (ಯಾದಗಿರಿ): ತಾಲ್ಲೂಕಿನ ಕ್ಯಾತನಾಳ ಗ್ರಾಮದ ನಿವಾಸಿ ಭೀಮರಾಯ ತೆಕರಾಳ (75) ಬುಧವಾರ ನಿಧನರಾದರು.
ಅವರಿಗೆ ವಡಗೇರಾದ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ದೇವೀಂದ್ರಪ್ಪ ಕ್ಯಾತನಾಳ ಸೇರಿ 6 ಜನ ಪುತ್ರರು ಮತ್ತು ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಕ್ಯಾತನಾಳ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.