<p><strong>ಯಾದಗಿರಿ: </strong>ಸುಕ್ಷೇತ್ರ ಸೂಗೂರು (ಎನ್) ಭೋಜಲಿಂಗೇಶ್ವರ ಸಿದ್ಧಿ ಸಂಸ್ಥಾನ ಮಠದಲ್ಲಿ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತಾನವರ ನೇತೃತ್ವದಲ್ಲಿ ಭೋಜಲಿಂಗೇಶ್ವರರ ರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.</p>.<p>ಜಾತ್ರೆ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರವಂತರು ಸೇವೆ ನಡೆಸಿಕೊಟ್ಟರು. ಹಲಗೆ, ಭಾಜಾ-ಭಜಂತ್ರಿ, ಡೊಳ್ಳು ಮುಂತಾದ ವಾದ್ಯಗಳ ಸದ್ದು ಭಕ್ತರ ಸಡಗರ, ಸಂಭ್ರಮ ಇಮ್ಮಡಿಗೊಳಿಸಿತು.</p>.<p>ರಥೋತ್ಸವದ ಮುಂಚೆ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ಪೀಠಾಧಿಪತಿ ಹಿರಗಪ್ಪ ತಾತನವರು ಮಹಾ ರುಧ್ರಾಭಿಶೇಕ, ಮಹಾ ಮಂಗಳಾರತಿ, ವಿಶೇಷ ಪೂಜೆ ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಹೂವುಗಳಿಂದ ಅಲಂಕರಿಸಿದ್ದ ರಥವನ್ನು ಭಕ್ತರು ‘ಭೋಜಲಿಂಗೇಶ್ವರ ಮಹಾರಾಜಕೀ ಜೈ’ ಎಂಬ ಜೈಕಾರ ಹಾಕುತ್ತ ಎಳೆದರು. ರಥದ ಮೇಲೆ ಭಕ್ತರು ಫಲ, ಪುಷ್ಪಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಭೋಜಲಿಂಗೇಶ್ವರರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಶಿವ ಕೀರ್ತನೆಯೊಂದಿಗೆ ಆರಂಭವಾಗಿದ್ದವು. ರಾತ್ರಿ 10 ಗಂಟೆಗೆ ದಾವಲ್ ಮಲ್ಲಿಕ್ ದರ್ಗಾಕ್ಕೆ ಗಂಧ ಮೆರವಣಿಗೆ ನಡೆಸಲಾಯಿತು.</p>.<p>ಶುಕ್ರವಾರ ಬೆಳಿಗ್ಗೆ ಭೋಜಲಿಂಗೇಶ್ವರರ 28ನೇ ಪುಣ್ಯಾರಾಧನೆ, ಶನಿವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು.</p>.<p>ಮುಂಬೈ ಉದ್ಯಮಿ ಲಾಲಶೇಠ್ ಅವರ ತಂಡದಿಂದಭಾನುವಾರ ಸಂಜೆ ಮದ್ದು ಸುಡುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ನಂತರ ರಾತ್ರಿ 8 ಗಂಟೆಗೆ ಧರ್ಮ ಸಭೆಯು ಪೀಠಾಧಿಪತಿ ಹಿರಗಪ್ಪ ತಾತನವರ ಅಧ್ಯಕ್ಷತೆಯಲ್ಲಿ ಜರುಗಿತು.ಜಮಖಂಡಿಯ ಓಲೇಮಠದ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಹಾಗೂ ಶಹಾಪುರದ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಸುಕ್ಷೇತ್ರ ಸೂಗೂರು (ಎನ್) ಭೋಜಲಿಂಗೇಶ್ವರ ಸಿದ್ಧಿ ಸಂಸ್ಥಾನ ಮಠದಲ್ಲಿ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತಾನವರ ನೇತೃತ್ವದಲ್ಲಿ ಭೋಜಲಿಂಗೇಶ್ವರರ ರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.</p>.<p>ಜಾತ್ರೆ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರವಂತರು ಸೇವೆ ನಡೆಸಿಕೊಟ್ಟರು. ಹಲಗೆ, ಭಾಜಾ-ಭಜಂತ್ರಿ, ಡೊಳ್ಳು ಮುಂತಾದ ವಾದ್ಯಗಳ ಸದ್ದು ಭಕ್ತರ ಸಡಗರ, ಸಂಭ್ರಮ ಇಮ್ಮಡಿಗೊಳಿಸಿತು.</p>.<p>ರಥೋತ್ಸವದ ಮುಂಚೆ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ಪೀಠಾಧಿಪತಿ ಹಿರಗಪ್ಪ ತಾತನವರು ಮಹಾ ರುಧ್ರಾಭಿಶೇಕ, ಮಹಾ ಮಂಗಳಾರತಿ, ವಿಶೇಷ ಪೂಜೆ ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಹೂವುಗಳಿಂದ ಅಲಂಕರಿಸಿದ್ದ ರಥವನ್ನು ಭಕ್ತರು ‘ಭೋಜಲಿಂಗೇಶ್ವರ ಮಹಾರಾಜಕೀ ಜೈ’ ಎಂಬ ಜೈಕಾರ ಹಾಕುತ್ತ ಎಳೆದರು. ರಥದ ಮೇಲೆ ಭಕ್ತರು ಫಲ, ಪುಷ್ಪಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಭೋಜಲಿಂಗೇಶ್ವರರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಶಿವ ಕೀರ್ತನೆಯೊಂದಿಗೆ ಆರಂಭವಾಗಿದ್ದವು. ರಾತ್ರಿ 10 ಗಂಟೆಗೆ ದಾವಲ್ ಮಲ್ಲಿಕ್ ದರ್ಗಾಕ್ಕೆ ಗಂಧ ಮೆರವಣಿಗೆ ನಡೆಸಲಾಯಿತು.</p>.<p>ಶುಕ್ರವಾರ ಬೆಳಿಗ್ಗೆ ಭೋಜಲಿಂಗೇಶ್ವರರ 28ನೇ ಪುಣ್ಯಾರಾಧನೆ, ಶನಿವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು.</p>.<p>ಮುಂಬೈ ಉದ್ಯಮಿ ಲಾಲಶೇಠ್ ಅವರ ತಂಡದಿಂದಭಾನುವಾರ ಸಂಜೆ ಮದ್ದು ಸುಡುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ನಂತರ ರಾತ್ರಿ 8 ಗಂಟೆಗೆ ಧರ್ಮ ಸಭೆಯು ಪೀಠಾಧಿಪತಿ ಹಿರಗಪ್ಪ ತಾತನವರ ಅಧ್ಯಕ್ಷತೆಯಲ್ಲಿ ಜರುಗಿತು.ಜಮಖಂಡಿಯ ಓಲೇಮಠದ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಹಾಗೂ ಶಹಾಪುರದ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>