ಚಿಕ್ಕಗ್ರಾಮದಲ್ಲಿ ಓದುಗರಿಗೆ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿ ಮಾದರಿಗ್ರಂಥಾಲಯವನ್ನಾಗಿಸಿಸಿಬ್ಬಂದಿ ಸೇವಾ ಪುರಸ್ಕಾರಪಡೆದಿದ್ದಾರೆ.ತಿಂಥಣಿಯಲ್ಲಿ ಇರುವ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹ, ಓದುಗರ ಸದಸ್ಯತ್ವ ಹೆಚ್ಚಿಸಿ ಗ್ರಂಥಾಲಯದ ಪ್ರಗತಿಗೆ ಶ್ರಮಿಸಿದ್ದಾರೆ. ಹೋರಾಟ, ಸಾಂಸ್ಕೃತಿಕ, ಸಮಾಜ ಸೇವೆ ಹೀಗೆಹತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ನನ್ನ ಸೇವೆ ಗುರುತಿಸಿ ಚಾಮರಾಜನಗರದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ 'ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿ' ನೀಡಿ ಗೌರವಿಸಿದ್ದು ಸೇವೆಗೆ ಸಿಕ್ಕ ಗೌರವವಾಗಿದೆ’ ಎನ್ನುತ್ತಾರೆ ಗಂಗಾಧರನಾಯಕ ಅವರು.
ಗ್ರಂಥಾಲಯ ಸೇವೆ ಅಲ್ಲದೆ ಕರ್ನಾಟಕ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯಿಂದ ಮಕ್ಕಳಿಗೆ ವಿವಿಧ ಕ್ರೀಡಾ ತರಬೇತಿ, ಪ್ರೋತ್ಸಾಹ ಹಾಗೂ ಕ್ರೀಡಾ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ.