‘ಗ್ರಾಮದಲ್ಲಿ 6 ತಿಂಗಳಿಂದಲೂ ಚಿರತೆ ಕಾಟವಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿವೇಳೆ ತೋಟಗಳಿಗೆ ನೀರು ಹರಿಸಲು ಗ್ರಾಮಸ್ಥರು ಭಯಪಡುವಂತಾಗಿದೆ. ಕಳೆದ ಬಾರಿ ಎಮ್ಮೆ, ನಾಯಿಯನ್ನು ಚಿರತೆ ಬಲಿ ಪಡೆದಿತ್ತು. ಪಿಡಿಒ ಸೇರಿದಂತೆ ಅಧಿಕಾರಿಗಳು ಬಂದು ಹೋಗಿದ್ದರು. ಮತ್ತೆ ಈಗ ಚಿರತೆ ಭಯ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ’ ಎಂದು ಗ್ರಾಮದ ನಿವಾಸಿಗಳು ತಿಳಿಸಿದರು.