ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರ ಧ್ವನಿಯಾಗಿದ್ದ ಚೌಡಯ್ಯ

ಅಯ್ಯಣ್ಣ ಕನ್ಯಾಕೊಳ್ಳುರ ಅಭಿಮತ
Last Updated 22 ಜನವರಿ 2022, 4:26 IST
ಅಕ್ಷರ ಗಾತ್ರ

ಶಹಾಪುರ: ‘12ನೇ ಶತಮಾನದಲ್ಲಿ ಜನ ಸಾಮಾನ್ಯರಿಗೆ ಗಟ್ಟಿ ಧ್ವನಿಯಾಗಿ ಸಾಮಾಜಿಕ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಕಳಕಳಿ ಮೆಚ್ಚುವಂತದ್ದು. ಶ್ರೇಷ್ಠ ಅನುಭವವನ್ನು ಸಮಾಜಕ್ಕೆ ಸಮರ್ಪಿಸಿದ್ದಾರೆ’ ಎಂದು ಕೋಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಯ್ಯಣ್ಣ ಕನ್ಯಾಕೊಳ್ಳುರ ತಿಳಿಸಿದರು.

ನಗರದ ಹಳಿಸಗರ ಬಡಾವಣೆ ಚೌಡಯ್ಯನವರ ಮಠದಲ್ಲಿ ಶುಕ್ರವಾರ ಕೋಲಿ ಕಬ್ಬಲಿಗ ಸಮಾಜದಿಂದ ಸರಳವಾಗಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಘದ ಕಾರ್ಯದರ್ಶಿ ಸಣ್ಣನಿಂಗಣ್ಣ ನಾಯ್ಕೋಡಿ ಹಾಗೂ ಸಮುದಾಯದ ಮುಖಂಡರಾದ ರವೀಂದ್ರನಾಥ ನರಸನಾಯಕ, ಮರೆಣ್ಣ ಮಿಲ್ಟ್ರಿ, ಈರಣ್ಣ ಜಮಾದಾರ್, ಬಸವರಾಜ ಕಂದಳ್ಳಿ, ಸಣ್ಣಮಾನಯ್ಯ,ಭೀಮಣ್ಣ ತಿಪ್ಪನಟಗಿ, ಬಸವರಾಜ ರತ್ತಾಳ, ಗೋಪಾಲಸುರಪುರ, ನಾಗೇಂದ್ರಪ್ಪ ಇಟಗಿ, ಮಲರೆಡ್ಡಿ ವಿಭೂತಿಹಳ್ಳಿ, ದೇವೇಂದ್ರಪ್ಪ ಕೋನೇರ, ಯಲ್ಲಪ್ಪ ನಾಯ್ಕೋಡಿ, ಚಂದ್ರಾಮಪ್ಪ ಆಪ್ಲೆ ಹಾಗೂ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT