ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಗುರುವಾರ ಮಧ್ಯರಾತ್ರಿ 15 ರಿಂದ 20 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.
ಗುರುವಾರ ಬೆಳಿಗ್ಗೆಯಿಂದಲೂ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇತ್ತು. ಉಷ್ಣಾಂಶವೂ 36 ಡಿಗ್ರಿಯಿಂದ 33 ರ ತನಕ ಇಳಿಕೆಯಾಗಿತ್ತು. ಸಂಜೆ ವೇಳೆ ತಂಪು ವಾತಾವರಣ ಮನೆ ಮಾಡಿತ್ತು. ಮಧ್ಯರಾತ್ರಿ 12 ಗಂಟೆಯಿಂದ ತುಂತುರು ಮಳೆ ಸುರಿಯಿತು.
ಜಿಲ್ಲೆಯ ಶಹಾಪುರ, ಸುರಪುರ, ಕೆಂಭಾವಿ, ಯರಗೋಳ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ.
ಗುರುವಾರದಿಂದ ಮೋಡ ಕವಿದ ವಾತಾವರಣ ಶುಕ್ರವಾರವೂ ಮುಂದುವರಿದೆ. ತಂಪಾದ ಗಾಳಿ ಬೀಸುತ್ತಿದೆ. ಈ ವರ್ಷದ ಮೊದಲ ಮಳೆಯಿಂದ ಇಳೆ ಸ್ವಲ್ಪ ಮಟ್ಟಿಗೆ ತಂಪಾಗಿದೆ.
ಗುರುಮಠಕಲ್ ವರದಿ: ತಾಲ್ಲೂಕಿನ ಚಪೆಟ್ಲಾ, ಯದ್ಲಾಪುರ, ಇಮ್ಲಾಪುರ, ಗಾಜರಕೋಟ, ಕಾಕಲವಾರ ಸೇರಿದಂತೆ ವಿವಿಧೆಡೆ ಗುರುವಾರ ರಾತ್ರಿ ವೇಳೆ ತುಂತುರು ಮಳೆ ಸುರಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.