<p>ಖಾನಹಳ್ಳಿ (ಯರಗೊಳ): ‘ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಮತ್ತು ದೃಢೀಕರಿಸಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು’ ಕ್ಷೇತ್ರ ಶಿಕ್ಷಣಾಧಿಕಾರಿ<br> ವೀರಪ್ಪ ಜಿ ಕನ್ನಳ್ಳಿ ಹೇಳಿದರು.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26 ನೇ ಸಾಲಿನ ಅಲ್ಲಿಪೂರ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಪ್ರಾಸ್ತಾವಿಕವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಣಬಸಪ್ಪ ಪಾಕರೆಡ್ಡಿ ಮಾತನಾಡಿ, ‘ನಿವೃತ್ತ ಶಿಕ್ಷಕರು ನಮ್ಮ ಹಬ್ಬಕ್ಕೆ ಬಂದಿದ್ದು ಸಂತಸದಾಯಕವಾಗಿದೆ, ನಿರ್ಣಾಯಕರಾಗಿ ನಿಷ್ಪಕ್ಷಪಾತವಾಗಿ ಫಲಿತಾಂಶ ನೀಡುತ್ತಾರೆ’ ಎಂದರು. </p>.<p>ಶಿಕ್ಷಣ ಸೊಯೋಜಕರು ದೇವೇಂದ್ರಪ್ಪ ಈಟಿ ಮಾತನಾಡಿ, ‘ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ’ ಎಂದರು.</p>.<p>ಕಲಿಕಾ ಹಬ್ಬದಲ್ಲಿ ಮಕ್ಕಳು ಮೆರವಣಿಗೆಯ ಮೂಲಕ ಕಲಿಕಾ ಹಬ್ಬದ ವಿಶೇಷತೆ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆಯ ನಂತರ ಕಥೆ ಕಟ್ಟುವ , ಸಂತಸದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕಥೆ ಹೇಳುವುದು, ಕೈ ಬರಹ ಮತ್ತು ಕ್ಯಾಲಿಗ್ರಫಿ, ಚಿತ್ರ ನೋಡಿ ವಿವರಿಸು, ಗಟ್ಟಿ ಓದು ಈ ರೀತಿಯಾ ವಿವಿಧ ಸ್ಪರ್ಧೆಗಳಲ್ಲಿ ಕ್ಲಸ್ಟರ್ನ ಒಂದರಿಂದ ಐದನೇ ತರಗತಿಯ ಎಫ್ಎಲ್ಎನ್ ಕಲಿಕಾ ಮಟ್ಟವನ್ನು ಆಧರಿಸಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು.</p>.<p>ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.<br /> ಕಾರ್ಯಕ್ರಮದಲ್ಲಿ ಹಫೀಸ್ ಪಟೇಲ್ , ಚಂದ್ರಪ್ಪ ಗುಂಜನೂರ್, ಮರೆಪ್ಪ, ಸಿದ್ದರಾಮಪ್ಪ ದುಪ್ಪಲಿ, ಎಲ್ಲಪ್ಪ ಮಾಳಿಕೇರಿ, ಶಿವಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖಾನಹಳ್ಳಿ (ಯರಗೊಳ): ‘ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಮತ್ತು ದೃಢೀಕರಿಸಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು’ ಕ್ಷೇತ್ರ ಶಿಕ್ಷಣಾಧಿಕಾರಿ<br> ವೀರಪ್ಪ ಜಿ ಕನ್ನಳ್ಳಿ ಹೇಳಿದರು.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26 ನೇ ಸಾಲಿನ ಅಲ್ಲಿಪೂರ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಪ್ರಾಸ್ತಾವಿಕವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಣಬಸಪ್ಪ ಪಾಕರೆಡ್ಡಿ ಮಾತನಾಡಿ, ‘ನಿವೃತ್ತ ಶಿಕ್ಷಕರು ನಮ್ಮ ಹಬ್ಬಕ್ಕೆ ಬಂದಿದ್ದು ಸಂತಸದಾಯಕವಾಗಿದೆ, ನಿರ್ಣಾಯಕರಾಗಿ ನಿಷ್ಪಕ್ಷಪಾತವಾಗಿ ಫಲಿತಾಂಶ ನೀಡುತ್ತಾರೆ’ ಎಂದರು. </p>.<p>ಶಿಕ್ಷಣ ಸೊಯೋಜಕರು ದೇವೇಂದ್ರಪ್ಪ ಈಟಿ ಮಾತನಾಡಿ, ‘ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ’ ಎಂದರು.</p>.<p>ಕಲಿಕಾ ಹಬ್ಬದಲ್ಲಿ ಮಕ್ಕಳು ಮೆರವಣಿಗೆಯ ಮೂಲಕ ಕಲಿಕಾ ಹಬ್ಬದ ವಿಶೇಷತೆ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆಯ ನಂತರ ಕಥೆ ಕಟ್ಟುವ , ಸಂತಸದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕಥೆ ಹೇಳುವುದು, ಕೈ ಬರಹ ಮತ್ತು ಕ್ಯಾಲಿಗ್ರಫಿ, ಚಿತ್ರ ನೋಡಿ ವಿವರಿಸು, ಗಟ್ಟಿ ಓದು ಈ ರೀತಿಯಾ ವಿವಿಧ ಸ್ಪರ್ಧೆಗಳಲ್ಲಿ ಕ್ಲಸ್ಟರ್ನ ಒಂದರಿಂದ ಐದನೇ ತರಗತಿಯ ಎಫ್ಎಲ್ಎನ್ ಕಲಿಕಾ ಮಟ್ಟವನ್ನು ಆಧರಿಸಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು.</p>.<p>ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.<br /> ಕಾರ್ಯಕ್ರಮದಲ್ಲಿ ಹಫೀಸ್ ಪಟೇಲ್ , ಚಂದ್ರಪ್ಪ ಗುಂಜನೂರ್, ಮರೆಪ್ಪ, ಸಿದ್ದರಾಮಪ್ಪ ದುಪ್ಪಲಿ, ಎಲ್ಲಪ್ಪ ಮಾಳಿಕೇರಿ, ಶಿವಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>