<p><strong>ಸುರಪುರ:</strong> ಕಳೆದ ಒಂದು ವಾರದಿಂದ ನಗರದಲ್ಲಿ ಚಳಿ ತನ್ನ ಮೇರೆ ಮೀರಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಕನಿಷ್ಠ ಉಷ್ಣಾಂಶ ಇರುತ್ತದೆ. ಮೈಕೊರೆಯುವ ಚಳಿಗೆ ಚಿಕ್ಕಮಕ್ಕಳು, ವೃದ್ಧರು ಹೈರಾಣಾಗಿದ್ದಾರೆ.</p>.<p>ಬೆಳಿಗ್ಗೆ 6 ಗಂಟೆವರೆಗೆ 19 ಡಿಸೆಗಿಂತ ಕಡಿಮೆ ಉಷ್ಣಾಂಶ ಇರುತ್ತದೆ. ಸೂರ್ಯೋದಯವಾಗುತ್ತಿದ್ದಂತೆ ತಾಪಮಾನ ಕೊಂಚ ಏರಿಕೆಯಾಗುತ್ತದೆ. ಆದರೂ ಚಳಿ ಇರುತ್ತದೆ. ಬಿಸಿಲು ಏರುತ್ತಿದ್ದಂತೆ ಕ್ರಮೇಣ ಉಷ್ಣಾಂಶ 25 ಡಿಸೆವರೆಗೂ ಏರುತ್ತದೆ.</p>.<p>ಇದುವರೆಗೂ ಮನೆಯ ಕಪಾಟಿನಲ್ಲಿದ್ದ ಸ್ವೇಟರ್, ಮಂಕಿಕ್ಯಾಪ್ ಇತರ ಬೆಚ್ಚನೆಯ ಉಡುಗಳು ಹೊರಗೆ ಬಂದಿವೆ. ಸಂಜೆಯಾಗುತ್ತಿದ್ದಂತೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸುತ್ತಾರೆ. ರಾತ್ರಿ 8 ಗಂಟೆ ಹೊತ್ತಿಗೆ ಮಾರುಕಟ್ಟೆಯಲ್ಲಿ ಜನರು ಇರುವುದಿಲ್ಲ.</p>.<p>ವಿವಿಧ ಬಡಾವಣೆಗಳಲ್ಲಿ ಯುವಕರು, ಜನರು ಬೆಂಕಿ ಹಚ್ಚಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ 7 ಗಂಟೆವರೆಗೂ ಹಾಸಿಗೆ ಬಿಟ್ಟು ಮೇಲಕ್ಕೆ ಏಳದ ಪರಿಸ್ಥಿತಿ ಇದೆ. ಹೀಗಾಗಿ ವಾಯುವಿಹಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.</p>.<p>ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಶನಿವಾರ ಬೆಳಿಗ್ಗೆ 8 ಗಂಟೆ ಬದಲಿಗೆ 10 ಗಂಟೆಗೆ ಶಾಲೆ ಆರಂಭಿಸಲು ಸೂಚನೆ ನೀಡಿದೆ. ಮನೆಯಲ್ಲಿ ನೆಲಹಾಸು, ಬಾಂಡೆ ಸಾಮಾನುಗಳು ತಣ್ಣಗೆ ಆಗಿರುತ್ತವೆ. ನೀರು ತಣ್ಣಗೆ ಆಗಿದ್ದು ಕೈ ಕಾಲು ತೊಳೆದುಕೊಂಡರೆ ನಡುಗುವಂತಾಗುತ್ತದೆ.</p>.<p>ನಡುಗುವ ಚಳಿಗೆ ಮೈಚರ್ಮ ಒಡೆಯುತ್ತಿದೆ. ಔಷಧಿ ಅಂಗಡಿಗಳಲ್ಲಿ ವೈಟ್ ಪೆಟ್ರೋಲಿಯಂ ಜಲ್ಲಿ ವ್ಯಾಪಾರ ಭರ್ಜರಿಯಾಗಿದೆ. ಬೆಚ್ಚನೆಯ ಉಡುಪಿಗೂ ಬೇಡಿಕೆ ಹೆಚ್ಚಿದೆ. ತೊಳೆದ ಬಟ್ಟೆಗಳು ಒಣಗಲು ಎರಡು ದಿನ ಬೇಕು. ಚಳಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.</p>.<p>ಕಳೆದ ಒಂದು ವಾರದಲ್ಲಿ ಸೋಮವಾರ ಬೆಳಗಿನ ಜಾವ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಬೆಳಿಗ್ಗೆ ಬೀಸುವ ಶೀತಗಾಳಿ ಜನರನ್ನು ತತ್ತರಗೊಳಿಸಿದೆ.</p>.<p>ಜನರು ಚಳಿ ತಪ್ಪಿಸಿಕೊಳ್ಳಲು ಮೇಲಿಂದ ಮೇಲೆ ಚಹ, ಕಾಫಿ ಮೊರೆ ಹೋಗುತ್ತಿದ್ದಾರೆ. 8 ಗಂಟೆವರೆಗೂ ಸ್ನಾನ ಮಾಡುವ ಧೈರ್ಯ ಮಾಡುತ್ತಿಲ್ಲ. ಕೆಲವರಲ್ಲಿ ಅತಿ ಚಳಿಯಿಂದ ಬೇಧಿ ಪ್ರಕರಣಗಳು ಕಾಣುತ್ತಿವೆ.</p>.<p> <strong>ಚಳಿಯಿಂದ ರಕ್ಷಿಸಿಕೊಳ್ಳಲು ತಜ್ಞರು ನೀಡಿರುವ ಕೆಲವು ಸಲಹೆಗಳು</strong> </p><p>• ಮೈತುಂಬಾ ಬೆಚ್ಚಗಿನ ಉಡುಪು ಧರಿಸಿ </p><p>• ಸಾಕಷ್ಟು ನೀರು (ಬಿಸಿ ನೀರು) ಸೇವಿಸಿ </p><p>• ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ</p><p> • ನಿಯಮಿತ ಮತ್ತು ಸರಳ ವ್ಯಾಯಾಮ ಮಾಡಿ</p><p> • ಲವಂಗ ಶುಂಠಿ ಅರಿಶಿನ ಆಹಾರದಲ್ಲಿ ಇರಲಿ</p><p> • ಕೊರೆಯುವ ಚಳಿಯಲ್ಲಿ ಹೊರಗೆ ಬರಬೇಡಿ • ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ಕಳೆದ ಒಂದು ವಾರದಿಂದ ನಗರದಲ್ಲಿ ಚಳಿ ತನ್ನ ಮೇರೆ ಮೀರಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಕನಿಷ್ಠ ಉಷ್ಣಾಂಶ ಇರುತ್ತದೆ. ಮೈಕೊರೆಯುವ ಚಳಿಗೆ ಚಿಕ್ಕಮಕ್ಕಳು, ವೃದ್ಧರು ಹೈರಾಣಾಗಿದ್ದಾರೆ.</p>.<p>ಬೆಳಿಗ್ಗೆ 6 ಗಂಟೆವರೆಗೆ 19 ಡಿಸೆಗಿಂತ ಕಡಿಮೆ ಉಷ್ಣಾಂಶ ಇರುತ್ತದೆ. ಸೂರ್ಯೋದಯವಾಗುತ್ತಿದ್ದಂತೆ ತಾಪಮಾನ ಕೊಂಚ ಏರಿಕೆಯಾಗುತ್ತದೆ. ಆದರೂ ಚಳಿ ಇರುತ್ತದೆ. ಬಿಸಿಲು ಏರುತ್ತಿದ್ದಂತೆ ಕ್ರಮೇಣ ಉಷ್ಣಾಂಶ 25 ಡಿಸೆವರೆಗೂ ಏರುತ್ತದೆ.</p>.<p>ಇದುವರೆಗೂ ಮನೆಯ ಕಪಾಟಿನಲ್ಲಿದ್ದ ಸ್ವೇಟರ್, ಮಂಕಿಕ್ಯಾಪ್ ಇತರ ಬೆಚ್ಚನೆಯ ಉಡುಗಳು ಹೊರಗೆ ಬಂದಿವೆ. ಸಂಜೆಯಾಗುತ್ತಿದ್ದಂತೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸುತ್ತಾರೆ. ರಾತ್ರಿ 8 ಗಂಟೆ ಹೊತ್ತಿಗೆ ಮಾರುಕಟ್ಟೆಯಲ್ಲಿ ಜನರು ಇರುವುದಿಲ್ಲ.</p>.<p>ವಿವಿಧ ಬಡಾವಣೆಗಳಲ್ಲಿ ಯುವಕರು, ಜನರು ಬೆಂಕಿ ಹಚ್ಚಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ 7 ಗಂಟೆವರೆಗೂ ಹಾಸಿಗೆ ಬಿಟ್ಟು ಮೇಲಕ್ಕೆ ಏಳದ ಪರಿಸ್ಥಿತಿ ಇದೆ. ಹೀಗಾಗಿ ವಾಯುವಿಹಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.</p>.<p>ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಶನಿವಾರ ಬೆಳಿಗ್ಗೆ 8 ಗಂಟೆ ಬದಲಿಗೆ 10 ಗಂಟೆಗೆ ಶಾಲೆ ಆರಂಭಿಸಲು ಸೂಚನೆ ನೀಡಿದೆ. ಮನೆಯಲ್ಲಿ ನೆಲಹಾಸು, ಬಾಂಡೆ ಸಾಮಾನುಗಳು ತಣ್ಣಗೆ ಆಗಿರುತ್ತವೆ. ನೀರು ತಣ್ಣಗೆ ಆಗಿದ್ದು ಕೈ ಕಾಲು ತೊಳೆದುಕೊಂಡರೆ ನಡುಗುವಂತಾಗುತ್ತದೆ.</p>.<p>ನಡುಗುವ ಚಳಿಗೆ ಮೈಚರ್ಮ ಒಡೆಯುತ್ತಿದೆ. ಔಷಧಿ ಅಂಗಡಿಗಳಲ್ಲಿ ವೈಟ್ ಪೆಟ್ರೋಲಿಯಂ ಜಲ್ಲಿ ವ್ಯಾಪಾರ ಭರ್ಜರಿಯಾಗಿದೆ. ಬೆಚ್ಚನೆಯ ಉಡುಪಿಗೂ ಬೇಡಿಕೆ ಹೆಚ್ಚಿದೆ. ತೊಳೆದ ಬಟ್ಟೆಗಳು ಒಣಗಲು ಎರಡು ದಿನ ಬೇಕು. ಚಳಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.</p>.<p>ಕಳೆದ ಒಂದು ವಾರದಲ್ಲಿ ಸೋಮವಾರ ಬೆಳಗಿನ ಜಾವ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಬೆಳಿಗ್ಗೆ ಬೀಸುವ ಶೀತಗಾಳಿ ಜನರನ್ನು ತತ್ತರಗೊಳಿಸಿದೆ.</p>.<p>ಜನರು ಚಳಿ ತಪ್ಪಿಸಿಕೊಳ್ಳಲು ಮೇಲಿಂದ ಮೇಲೆ ಚಹ, ಕಾಫಿ ಮೊರೆ ಹೋಗುತ್ತಿದ್ದಾರೆ. 8 ಗಂಟೆವರೆಗೂ ಸ್ನಾನ ಮಾಡುವ ಧೈರ್ಯ ಮಾಡುತ್ತಿಲ್ಲ. ಕೆಲವರಲ್ಲಿ ಅತಿ ಚಳಿಯಿಂದ ಬೇಧಿ ಪ್ರಕರಣಗಳು ಕಾಣುತ್ತಿವೆ.</p>.<p> <strong>ಚಳಿಯಿಂದ ರಕ್ಷಿಸಿಕೊಳ್ಳಲು ತಜ್ಞರು ನೀಡಿರುವ ಕೆಲವು ಸಲಹೆಗಳು</strong> </p><p>• ಮೈತುಂಬಾ ಬೆಚ್ಚಗಿನ ಉಡುಪು ಧರಿಸಿ </p><p>• ಸಾಕಷ್ಟು ನೀರು (ಬಿಸಿ ನೀರು) ಸೇವಿಸಿ </p><p>• ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ</p><p> • ನಿಯಮಿತ ಮತ್ತು ಸರಳ ವ್ಯಾಯಾಮ ಮಾಡಿ</p><p> • ಲವಂಗ ಶುಂಠಿ ಅರಿಶಿನ ಆಹಾರದಲ್ಲಿ ಇರಲಿ</p><p> • ಕೊರೆಯುವ ಚಳಿಯಲ್ಲಿ ಹೊರಗೆ ಬರಬೇಡಿ • ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>