ಶಾಸಕ ಕಂದಕೂರ ಮಾತನಾಡಿ, ಉದ್ದೇಶಿತ 3,003 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡರೆ, ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್ ಹಾಗೂ ರಾಚನಹಳ್ಳಿ ಗ್ರಾಮಗಳನ್ನು ಜನ ಸಂಪೂರ್ಣವಾಗಿ ತೊರೆಯುವ ಭೀತಿ ಎದುರಾಗಿದೆ. ಸಾವಿರಾರು ವರ್ಷಗಳಿಂದ ಗ್ರಾಮಗಳಲ್ಲಿನ ಜನತೆ ತಮ್ಮ ಭೂಮಿಯೊಂದಿಗೆ ಭಾವನೆಗಳನ್ನೂ ಹೊಸೆದು ಜೀವನ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.ಕಳೆದೊಂದು ದಶಕದ ಹಿಂದೆ ಸರ್ಕಾರ 3,300 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದ ವೇಳೆ, ನಮ್ಮ ಭಾಗ ಅಭಿವೃದ್ಧಿಯಾಗುತ್ತದೆ ಎಂದು ರೈತರು ಹೃದಯವೈಶಾಲ್ಯತೆ ಮೆರೆದು ತಮ್ಮ ಭೂಮಿ ಬಿಟ್ಟುಕೊಟ್ಟಿದ್ದರು. ಆದರೆ, ಅವರ ನಿರೀಕ್ಷೆಯಂತೆ ಸರ್ಕಾರ ಅಲ್ಲಿ ಇನ್ನೂ ಕೈಗಾರಿಕಾ ವಲಯ ಸ್ಥಾಪನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತೊಡಿಸಿದರು.