<p><strong>ಯಾದಗಿರಿ: </strong>ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದ್ದು, ಹಣತೆ, ಪಟಾಕಿ ಭರ್ಜರಿ ಮಾರಾಟವಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ.</p>.<p>ನವೆಂಬರ್ 3ರಂದು ನರಕ ಚತುರ್ದಶಿ, 4ರಂದು ದೀಪಾವಳಿ ಅಮಾವಾಸ್ಯೆ, 5ರಂದು ದೀಪಾವಳಿ ಪಾಡ್ಯ ಇದೆ. ಹೀಗಾಗಿ ಮೂರು ದಿನ ಸೇರಿದಂತೆ ಈ ವಾರವೆಲ್ಲ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.</p>.<p class="Subhead"><strong>ವಿವಿಧ ಕಡೆ ಹಣತೆ ಮಾರಾಟ: </strong>ನಗರದ ವಿವಿಧ ಕಡೆ ಹಣತೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಮೆಥೋಡಿಸ್ಟ್ ಚರ್ಚ್ ಮುಂಭಾಗ, ಲೋಕೋಪಯೋಗಿ ಇಲಾಖೆ ಕಚೇರಿ ಸಮೀಪ, ವಿದ್ಯಾಮಂಗಲ ಕಾರ್ಯಾಲಯ ಮುಂಭಾಗ, ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಹಣತೆಗಳ ಮಾರಾಟ ನಡೆಯುತ್ತಿದೆ.</p>.<p><strong>₹60ಗೆ ಡಜನ್ ಹಣತೆಗಳು:</strong> ನಗರದ ವಿವಿಧ ಕಡೆ ಹಣತೆಗಳ ದರದಲ್ಲಿ ವ್ಯಾತ್ಯಾಸವಿದೆ. ಚರ್ಚ್ ಮುಂಭಾಗದ ರಸ್ತೆ ಬಳಿ ₹60ಗೆ 12 ಹಣತೆಗಳು ಮಾರಾಟ ಮಾಡಲಾಗಿದೆ. ಸಣ್ಣ ಗಾತ್ರದ ಹಣತೆ, ದೊಡ್ಡ ಗಾತ್ರದ ಹಣತೆಗಳು ಇವೆ. ದೊಡ್ಡ ಗಾತ್ರದು ₹20ಕ್ಕೆ ಒಂದು ಮಾರಾಟಕ್ಕೆ ಇಡಲಾಗಿದೆ.</p>.<p>‘ಕಳೆದ ಬಾರಿ ಕೋವಿಡ್ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಹಣತೆಗಳು ಹೆಚ್ಚು ಮಾರಾಟವಾಗಿರಲಿಲ್ಲ. ಈಗ ಎರಡು ದಿನಗಳಿಂದ ಬೇಡಿಕೆ ಹೆಚ್ಚಾಗಿದೆ. ಬುಧವಾರ, ಗುರುವಾರ ಮತ್ತಷ್ಟು ಹಣತೆಗಳು ಮಾರಾಟವಾಗುತ್ತವೆ. ಕಳೆದ ಬಾರಿಗಿಂತ ಈ ಬಾರಿ ಮಾರಾಟದಲ್ಲಿ ಚೇತರಿಕೆ ಕಂಡಿದೆ’ ಎನ್ನುತ್ತಾರೆ ಹಣತೆ ವ್ಯಾಪಾರಿ ವಿಜಯಲಕ್ಷ್ಮೀ ಕುಂಬಾರ.</p>.<p>ಸ್ಥಳೀಯ ಮಣ್ಣಿನ ಹಣತೆಗಳ ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ಹಣತೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿ ಮಾಡುತ್ತಿದ್ದಾರೆ.</p>.<p class="Subhead"><strong>13 ಪಟಾಕಿ ಮಳಿಗೆಗಳು: </strong>ನಗರದ ಎಪಿಎಂಸಿ ಸಮೀಪದ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಸೇರಿದ ಖಾಲಿ ಜಾಗದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. 13 ಜನ ಪಟಾಕಿ ಮಾರಾಟಗಾರರು ಪರವಾನಗಿ ಪಡೆದುಕೊಂಡಿದ್ದು, ಸದ್ಯ 12 ಮಳಿಗೆಗಳಲ್ಲಿ ಪಟಾಕಿ ಮಾರಾಟ ನಡೆಯುತ್ತಿದೆ.</p>.<p class="Subhead"><strong>ಹಸಿರು ಪಟಾಕಿ ಮಾರಾಟ: </strong>ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚು ಶಬ್ದವಿಲ್ಲದ, ಹೊಗೆ ಸೂಸದ ಪಟಾಕಿಗಳಿಗೆ ಹಸಿರು ಪಟಾಕಿ ಎನ್ನಲಾಗುತ್ತಿದೆ. ಅಲ್ಲದೇ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಟಾಕಿ ಅಂಗಡಿಯಲ್ಲಿ ಅವಘಡ ಸಂಭವಿಸದಂತೆ ಅಗ್ನಿನಿರೋಧಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.</p>.<p>ಸುರಸುರ ಬತ್ತಿ ₹10ರಿಂದ 60, ಹೂವಿನ ಬತ್ತಿ ₹30ರಿಂದ 80, ಗಿಮ್ಮಿ ಚಕ್ಕರ್ ₹60ರಿಂದ 120, ಮಿರ್ಚಿ ಪಟಾಕಿ ₹30ಗೆ ಒಂದು ಪಾಕೀಟು, ಆಕಾಶ ಬಾಣ ₹150 ಇದೆ.</p>.<p>‘ಸೋಮವಾರದಿಂದ ಮಳಿಗೆ ಹಾಕಿಕೊಂಡಿದ್ದೇವೆ. ಅಧಿಕಾರಿಗಳು ಬಂದು ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ಮಾಡಿದ್ದಾರೆ. ಹಬ್ಬದ ದಿನ ಹೆಚ್ಚು ಪಟಾಕಿ ಮಾರಾಟವಾಗುತ್ತವೆ. ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ವಿಶ್ವನಾಥ ನೀಲಂಗೆ.</p>.<p>***</p>.<p>ದೀಪಾವಳಿ ಹಬ್ಬಕ್ಕಾಗಿ ಹಣತೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾರಾಟವಾಗುತ್ತಿದೆ</p>.<p><strong>- ವಿಜಯಲಕ್ಷ್ಮಿ ಕುಂಬಾರ, ಹಣತೆ ವ್ಯಾಪಾರಿ</strong></p>.<p>***</p>.<p>ಈ ಬಾರಿ ಎಲ್ಲ ಕಡೆ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆ. ₹10 ನಿಂದ 500 ರ ತನಕ ಪಟಾಕಿಗಳು ಲಭ್ಯವಿದ್ದು, ಮಾರಾಟವಾಗುತ್ತಿದೆ</p>.<p><strong>- ವಿಶ್ವನಾಥ ನೀಲಂಗೆ, ಪಟಾಕಿ ವ್ಯಾಪಾರಿ</strong></p>.<p>***</p>.<p>ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹೆಚ್ಚು ಸದ್ದು ಮಾಡುವ ಪಟಾಕಿಗಳ ನಿಯಂತ್ರಣಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ</p>.<p><strong>- ಸಣ್ಣ ವೆಂಕಟೇಶ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದ್ದು, ಹಣತೆ, ಪಟಾಕಿ ಭರ್ಜರಿ ಮಾರಾಟವಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ.</p>.<p>ನವೆಂಬರ್ 3ರಂದು ನರಕ ಚತುರ್ದಶಿ, 4ರಂದು ದೀಪಾವಳಿ ಅಮಾವಾಸ್ಯೆ, 5ರಂದು ದೀಪಾವಳಿ ಪಾಡ್ಯ ಇದೆ. ಹೀಗಾಗಿ ಮೂರು ದಿನ ಸೇರಿದಂತೆ ಈ ವಾರವೆಲ್ಲ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.</p>.<p class="Subhead"><strong>ವಿವಿಧ ಕಡೆ ಹಣತೆ ಮಾರಾಟ: </strong>ನಗರದ ವಿವಿಧ ಕಡೆ ಹಣತೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಮೆಥೋಡಿಸ್ಟ್ ಚರ್ಚ್ ಮುಂಭಾಗ, ಲೋಕೋಪಯೋಗಿ ಇಲಾಖೆ ಕಚೇರಿ ಸಮೀಪ, ವಿದ್ಯಾಮಂಗಲ ಕಾರ್ಯಾಲಯ ಮುಂಭಾಗ, ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಹಣತೆಗಳ ಮಾರಾಟ ನಡೆಯುತ್ತಿದೆ.</p>.<p><strong>₹60ಗೆ ಡಜನ್ ಹಣತೆಗಳು:</strong> ನಗರದ ವಿವಿಧ ಕಡೆ ಹಣತೆಗಳ ದರದಲ್ಲಿ ವ್ಯಾತ್ಯಾಸವಿದೆ. ಚರ್ಚ್ ಮುಂಭಾಗದ ರಸ್ತೆ ಬಳಿ ₹60ಗೆ 12 ಹಣತೆಗಳು ಮಾರಾಟ ಮಾಡಲಾಗಿದೆ. ಸಣ್ಣ ಗಾತ್ರದ ಹಣತೆ, ದೊಡ್ಡ ಗಾತ್ರದ ಹಣತೆಗಳು ಇವೆ. ದೊಡ್ಡ ಗಾತ್ರದು ₹20ಕ್ಕೆ ಒಂದು ಮಾರಾಟಕ್ಕೆ ಇಡಲಾಗಿದೆ.</p>.<p>‘ಕಳೆದ ಬಾರಿ ಕೋವಿಡ್ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಹಣತೆಗಳು ಹೆಚ್ಚು ಮಾರಾಟವಾಗಿರಲಿಲ್ಲ. ಈಗ ಎರಡು ದಿನಗಳಿಂದ ಬೇಡಿಕೆ ಹೆಚ್ಚಾಗಿದೆ. ಬುಧವಾರ, ಗುರುವಾರ ಮತ್ತಷ್ಟು ಹಣತೆಗಳು ಮಾರಾಟವಾಗುತ್ತವೆ. ಕಳೆದ ಬಾರಿಗಿಂತ ಈ ಬಾರಿ ಮಾರಾಟದಲ್ಲಿ ಚೇತರಿಕೆ ಕಂಡಿದೆ’ ಎನ್ನುತ್ತಾರೆ ಹಣತೆ ವ್ಯಾಪಾರಿ ವಿಜಯಲಕ್ಷ್ಮೀ ಕುಂಬಾರ.</p>.<p>ಸ್ಥಳೀಯ ಮಣ್ಣಿನ ಹಣತೆಗಳ ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ಹಣತೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿ ಮಾಡುತ್ತಿದ್ದಾರೆ.</p>.<p class="Subhead"><strong>13 ಪಟಾಕಿ ಮಳಿಗೆಗಳು: </strong>ನಗರದ ಎಪಿಎಂಸಿ ಸಮೀಪದ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಸೇರಿದ ಖಾಲಿ ಜಾಗದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. 13 ಜನ ಪಟಾಕಿ ಮಾರಾಟಗಾರರು ಪರವಾನಗಿ ಪಡೆದುಕೊಂಡಿದ್ದು, ಸದ್ಯ 12 ಮಳಿಗೆಗಳಲ್ಲಿ ಪಟಾಕಿ ಮಾರಾಟ ನಡೆಯುತ್ತಿದೆ.</p>.<p class="Subhead"><strong>ಹಸಿರು ಪಟಾಕಿ ಮಾರಾಟ: </strong>ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚು ಶಬ್ದವಿಲ್ಲದ, ಹೊಗೆ ಸೂಸದ ಪಟಾಕಿಗಳಿಗೆ ಹಸಿರು ಪಟಾಕಿ ಎನ್ನಲಾಗುತ್ತಿದೆ. ಅಲ್ಲದೇ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಟಾಕಿ ಅಂಗಡಿಯಲ್ಲಿ ಅವಘಡ ಸಂಭವಿಸದಂತೆ ಅಗ್ನಿನಿರೋಧಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.</p>.<p>ಸುರಸುರ ಬತ್ತಿ ₹10ರಿಂದ 60, ಹೂವಿನ ಬತ್ತಿ ₹30ರಿಂದ 80, ಗಿಮ್ಮಿ ಚಕ್ಕರ್ ₹60ರಿಂದ 120, ಮಿರ್ಚಿ ಪಟಾಕಿ ₹30ಗೆ ಒಂದು ಪಾಕೀಟು, ಆಕಾಶ ಬಾಣ ₹150 ಇದೆ.</p>.<p>‘ಸೋಮವಾರದಿಂದ ಮಳಿಗೆ ಹಾಕಿಕೊಂಡಿದ್ದೇವೆ. ಅಧಿಕಾರಿಗಳು ಬಂದು ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ಮಾಡಿದ್ದಾರೆ. ಹಬ್ಬದ ದಿನ ಹೆಚ್ಚು ಪಟಾಕಿ ಮಾರಾಟವಾಗುತ್ತವೆ. ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ವಿಶ್ವನಾಥ ನೀಲಂಗೆ.</p>.<p>***</p>.<p>ದೀಪಾವಳಿ ಹಬ್ಬಕ್ಕಾಗಿ ಹಣತೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾರಾಟವಾಗುತ್ತಿದೆ</p>.<p><strong>- ವಿಜಯಲಕ್ಷ್ಮಿ ಕುಂಬಾರ, ಹಣತೆ ವ್ಯಾಪಾರಿ</strong></p>.<p>***</p>.<p>ಈ ಬಾರಿ ಎಲ್ಲ ಕಡೆ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆ. ₹10 ನಿಂದ 500 ರ ತನಕ ಪಟಾಕಿಗಳು ಲಭ್ಯವಿದ್ದು, ಮಾರಾಟವಾಗುತ್ತಿದೆ</p>.<p><strong>- ವಿಶ್ವನಾಥ ನೀಲಂಗೆ, ಪಟಾಕಿ ವ್ಯಾಪಾರಿ</strong></p>.<p>***</p>.<p>ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹೆಚ್ಚು ಸದ್ದು ಮಾಡುವ ಪಟಾಕಿಗಳ ನಿಯಂತ್ರಣಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ</p>.<p><strong>- ಸಣ್ಣ ವೆಂಕಟೇಶ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>