<p>ಕೊಡೇಕಲ್ಲ (ಹುಣಸಗಿ): ಪರೋಪಕಾರ ಹಾಗೂ ಸಮಾಜ ಸೇವೆಯಲ್ಲಿ ತೊಡಗುವುದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಸಂಗಪ್ಪ ಶಿವಪೂರ ಹೇಳಿದರು.</p>.<p>ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ (ಪ್ಯಾಟಿ ಗುಡಿ) ಆವರಣದಲ್ಲಿ ಉದ್ಯಮಿ ಸಂಗನಗೌಡ ಚಿಮ್ಮಲಗಿ ಅವರು ತಮ್ಮ ಪುತ್ರನ ಜನ್ಮ ದಿನದ ಪ್ರಯುಕ್ತ ನಿರ್ಗತಿಕರು ಹಾಗೂ ಬಡವರಿಗೆ ವಸ್ತ್ರದಾನ ಮಾಡಿ, ಬಳಿಕ ಮಾತನಾಡಿದರು.</p>.<p>ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಮಾಡುವ ಕಾರ್ಯ ಹೆಚ್ಚು ಜನರಿಗೆ ತಲುಪುತ್ತದೆ. ಚಿಮ್ಮಲಗಿ ಅವರು ಪ್ರತಿ ವರ್ಷ ನಿರ್ಗತಿಕರು, ಸಾಧು-ಸಂತರು, ಬಡ ಕುಟುಂಬಗಳಿಗೆ ಅನ್ನ, ವಸ್ತ್ರ ನೀಡುವ ಮೂಲಕ ಬಡವರಲ್ಲಿಯೇ ದೇವರ ಸ್ವರೂಪ ಕಾಣುತ್ತಿರುವುದು ಮಾದರಿ ಕಾರ್ಯ ಎಂದರು.</p>.<p>ಈ ವೇಳೆ ಬಸಣ್ಣ ಹಳೇಪೂಜಾರಿ, ಉದ್ಯಮಿ ಸಂಗನಗೌಡ ಚಿಮ್ಮಲಗಿ, ಚಿದಂಬರಗೌಡ, ಬಸವ ಪ್ರಭುಗೌಡ, ರಾಚೋಟಿ ಪೊಲೀಸ್ ಪಾಟೀಲ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ರಾಜವಾಳ, ವೀರೇಶ ಮೂಕಾರ್ತಿಹಾಳ, ರವಿಶಂಕರ ಅಡ್ಡಿ, ಬಸವರಾಜ ಮಾಸ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡೇಕಲ್ಲ (ಹುಣಸಗಿ): ಪರೋಪಕಾರ ಹಾಗೂ ಸಮಾಜ ಸೇವೆಯಲ್ಲಿ ತೊಡಗುವುದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಸಂಗಪ್ಪ ಶಿವಪೂರ ಹೇಳಿದರು.</p>.<p>ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ (ಪ್ಯಾಟಿ ಗುಡಿ) ಆವರಣದಲ್ಲಿ ಉದ್ಯಮಿ ಸಂಗನಗೌಡ ಚಿಮ್ಮಲಗಿ ಅವರು ತಮ್ಮ ಪುತ್ರನ ಜನ್ಮ ದಿನದ ಪ್ರಯುಕ್ತ ನಿರ್ಗತಿಕರು ಹಾಗೂ ಬಡವರಿಗೆ ವಸ್ತ್ರದಾನ ಮಾಡಿ, ಬಳಿಕ ಮಾತನಾಡಿದರು.</p>.<p>ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಮಾಡುವ ಕಾರ್ಯ ಹೆಚ್ಚು ಜನರಿಗೆ ತಲುಪುತ್ತದೆ. ಚಿಮ್ಮಲಗಿ ಅವರು ಪ್ರತಿ ವರ್ಷ ನಿರ್ಗತಿಕರು, ಸಾಧು-ಸಂತರು, ಬಡ ಕುಟುಂಬಗಳಿಗೆ ಅನ್ನ, ವಸ್ತ್ರ ನೀಡುವ ಮೂಲಕ ಬಡವರಲ್ಲಿಯೇ ದೇವರ ಸ್ವರೂಪ ಕಾಣುತ್ತಿರುವುದು ಮಾದರಿ ಕಾರ್ಯ ಎಂದರು.</p>.<p>ಈ ವೇಳೆ ಬಸಣ್ಣ ಹಳೇಪೂಜಾರಿ, ಉದ್ಯಮಿ ಸಂಗನಗೌಡ ಚಿಮ್ಮಲಗಿ, ಚಿದಂಬರಗೌಡ, ಬಸವ ಪ್ರಭುಗೌಡ, ರಾಚೋಟಿ ಪೊಲೀಸ್ ಪಾಟೀಲ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ರಾಜವಾಳ, ವೀರೇಶ ಮೂಕಾರ್ತಿಹಾಳ, ರವಿಶಂಕರ ಅಡ್ಡಿ, ಬಸವರಾಜ ಮಾಸ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>