ದೋರನಹಳ್ಳಿ (ಶಹಾಪುರ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ರೈತ ಸುಭಾಸ ಶಿವಪ್ಪ ನಾಟೇಕರ್ (35) ಸಾಲಬಾಧೆ ತಾಳಲಾರದೆ ಮಂಗಳವಾರನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
‘ಎರಡು ಎಕರೆ ಜಮೀನಿದೆ. ಎರಡು ವರ್ಷದಿಂದ ಬೆಳೆ ನಷ್ಟ ಸಂಭವಿಸಿತ್ತು. ತೊಂದರೆಯಲ್ಲಿದ್ದರು. ಪಿಕೆಜಿ ಬ್ಯಾಂಕ್ನಲ್ಲಿ ₹50 ಸಾವಿರ, 11 ಲಕ್ಷ ಕೈ ಸಾಲ ಮಾಡಿದ್ದರು’ ಎಂದು ಕುಟುಂಬದವರು ತಿಳಿಸಿದ್ದಾರೆ.