<p><strong>ಸುರಪುರ: </strong>ತಾಲ್ಲೂಕಿನ ರೈತರಿಗೆ ದಿನಕ್ಕೆ ಕನಿಷ್ಠ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹು ಹಯ್ಯಾಳ ಮಾತನಾಡಿ, ‘ಸದ್ಯ ರೈತರ ಪಂಪ್ಸೆಟ್ಗಳಿಗೆ ದಿನಕ್ಕೆ 7 ತಾಸು ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಅದರಲ್ಲಿ 2 ತಾಸು ವಿದ್ಯುತ್ ಪೂರೈಕೆ ಇರುವುದಿಲ್ಲ. ಇಷ್ಟು ವಿದ್ಯುತ್ ಬಳಸಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯ’ ಎಂದರು.</p>.<p>‘ಮುಂದೆ ಬೇಸಿಗೆ ಆರಂಭವಾಗುತ್ತದೆ. ಜಮೀನು ಶೀಘ್ರದಲ್ಲಿ ಹಸಿ ಆರುತ್ತದೆ. ಹೀಗಾಗಿ ಬೆಳೆಗಳು ಒಣಗಿ ರೈತ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ವಿವರಿಸಿದರು.</p>.<p>‘ಕೆಂಭಾವಿ ಭಾಗದ ರೈತರಿಗೆ ಕೆಂಭಾವಿ ಫೀಡರ್ನ ಬದಲು ತಿಪ್ಪನಟಗಿ ಫೀಡರ್ನಿಂದ ವಿದ್ಯುತ್ ಪೂರೈಸಬೇಕು. ಇದರಿಂದ ಈ ಭಾಗದ ಹೆಗ್ಗನದೊಡ್ಡಿ, ಗೋಡ್ರಿಹಾಳ ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.</p>.<p>ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಈರಣ್ಣ ಅಳ್ಳಿಚಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಮುಖಂಡರಾದ ಎಚ್.ಆರ್. ಬಡಿಗೇರ ಕೇಂಭಾವಿ, ದೇವೇಂದ್ರ ಬನಗುಂಡಿ ಹಾಗೂ ಮಂಜುನಾಥ ಧರಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ತಾಲ್ಲೂಕಿನ ರೈತರಿಗೆ ದಿನಕ್ಕೆ ಕನಿಷ್ಠ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹು ಹಯ್ಯಾಳ ಮಾತನಾಡಿ, ‘ಸದ್ಯ ರೈತರ ಪಂಪ್ಸೆಟ್ಗಳಿಗೆ ದಿನಕ್ಕೆ 7 ತಾಸು ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಅದರಲ್ಲಿ 2 ತಾಸು ವಿದ್ಯುತ್ ಪೂರೈಕೆ ಇರುವುದಿಲ್ಲ. ಇಷ್ಟು ವಿದ್ಯುತ್ ಬಳಸಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯ’ ಎಂದರು.</p>.<p>‘ಮುಂದೆ ಬೇಸಿಗೆ ಆರಂಭವಾಗುತ್ತದೆ. ಜಮೀನು ಶೀಘ್ರದಲ್ಲಿ ಹಸಿ ಆರುತ್ತದೆ. ಹೀಗಾಗಿ ಬೆಳೆಗಳು ಒಣಗಿ ರೈತ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ವಿವರಿಸಿದರು.</p>.<p>‘ಕೆಂಭಾವಿ ಭಾಗದ ರೈತರಿಗೆ ಕೆಂಭಾವಿ ಫೀಡರ್ನ ಬದಲು ತಿಪ್ಪನಟಗಿ ಫೀಡರ್ನಿಂದ ವಿದ್ಯುತ್ ಪೂರೈಸಬೇಕು. ಇದರಿಂದ ಈ ಭಾಗದ ಹೆಗ್ಗನದೊಡ್ಡಿ, ಗೋಡ್ರಿಹಾಳ ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.</p>.<p>ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಈರಣ್ಣ ಅಳ್ಳಿಚಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಮುಖಂಡರಾದ ಎಚ್.ಆರ್. ಬಡಿಗೇರ ಕೇಂಭಾವಿ, ದೇವೇಂದ್ರ ಬನಗುಂಡಿ ಹಾಗೂ ಮಂಜುನಾಥ ಧರಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>