ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳ ಹೆಣ್ಣುಮಗು ಕೊಂದ ತಂದೆ

Last Updated 2 ಡಿಸೆಂಬರ್ 2022, 6:01 IST
ಅಕ್ಷರ ಗಾತ್ರ

ಸೈದಾಪುರ: 9 ತಿಂಗಳ ಹೆಣ್ಣುಮಗು ಅಳುತ್ತಿದ್ದ ಕಾರಣ ಬೇಸರಗೊಂಡು ಕುಡಿತದ ಅಮಲಿನಲ್ಲಿ ತಂದೆಯೇ ಆಕೆಯನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಬದ್ದೇಪಲ್ಲಿಯಲ್ಲಿ ಬುಧವಾರ ನಡೆದಿದೆ.

‘ತನುಶ್ರೀ ಕೊಲೆಯಾದ ಮಗು. ರಾಮು ಪಲ್ಲೊರ್ ಕೊಲೆ ಆರೋಪಿ. ಮೂರು ವರ್ಷದ ಹಿಂದೆ ರಾಮು ಮತ್ತು ಸಾವಿತ್ರಮ್ಮ ವಿವಾಹವಾಗಿದ್ದರು. ಕುಡಿದ ಅಮಲಿನಲ್ಲಿ ಇರುತ್ತಿದ್ದ ರಾಮು ಕೆಲಸ ಮಾಡುತ್ತಿರಲಿಲ್ಲ’ ಎಂದು ಸೈದಾಪುರ ಪೊಲೀಸರು ತಿಳಿಸಿದ್ದಾರೆ.

‘ಬಿಸಿಲಿದ್ದ ಕಾರಣ ಪತ್ನಿ ಸಾವಿತ್ರಮ್ಮ ಮಗುವನ್ನು ಕೂಲಿಗೆಲಸ ಸ್ಥಳಕ್ಕೆ ಒಯ್ಯದೇ, ಮನೆಯಲ್ಲೇ ಬಿಟ್ಟಿದ್ದಾರೆ. ಕೆಲ ಹೊತ್ತಿನಲ್ಲೇ ಮಗು ಅಳತೊಡಗಿದೆ. ಅದನ್ನು ಸಹಿಸದೆ ಕುತ್ತಿಗೆಯಲ್ಲಿದ್ದ ತಾಯಿತದ ದಾರದಿಂದ ಮಗುವಿನ ಉಸಿರುಗಟ್ಟಿಸಿ, ಆರೋಪಿ ಕೊಲೆ ಮಾಡಿದ. ಆತನನ್ನು ಬಂಧಿಸಲಾಗಿದೆ’ ಎಂದು ಪ್ರಜಾವಾಣಿಗೆ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT