ಎತ್ತಿನ ಪಾದದಲ್ಲಿ (ಕುರ) ಪಟ್ಟಿ ಬಿಚ್ಚಿ ರಕ್ತ ಹಾಗೂ ಕಿವು ಸೋರಿಕೆಯಾಗುತ್ತಲಿದೆ. ಬಾಯಿ ರೋಗದಿಂದ ಮೇವು ತಿನ್ನುತ್ತಿಲ್ಲ. ಎತ್ತು ಹಾಗೂ ಹೋರಿಗೆ ಸರಿಯಾದ ಔಷಧಿ ಹಾಗೂ ಚಿಕಿತ್ಸೆ ಇಲ್ಲದೆ ತೊಂದರೆ ಅನುಭವಿಸುತ್ತಲಿವೆ. ಪಶು ಆಸ್ಪತ್ರೆ ಇದೆ ವೈದ್ಯರಿಲ್ಲ. ಅಲ್ಲದೆ ಈಗ ಮುಂಗಾರು ಆರಂಭವಾಗಿದೆ. ಬಿತ್ತನೆಯ ಕಾರ್ಯ ಶುರುವಾಗಲಿದೆ. ಎತ್ತಿನ ಮೇಲೆ ಎಲ್ಲವು ಅವಲಂಬಿತವಾಗಿದೆ. ತಕ್ಷಣ ಲಸಿಕೆ ನೀಡಬೇಕು ಎಂದು ಗ್ರಾಮದ ಮುಖಂಡ ಅಶೋಕರಾವ ಮಲ್ಲಾಬಾದಿ ಜಿಲ್ಲ ಪಶು ವೈದ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.