ಕೆಂಭಾವಿ: ಸಮೀಪದ ನಗನೂರ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತರೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ದೇವಪ್ಪ ರಂಗಾ (45) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ.
ಅವರು 8 ಎಕರೆ ಜಮೀನು ಹೊಂದಿದ್ದಾರೆ. ನಗನೂರು ಕೆಜಿಬಿ ಬ್ಯಾಂಕಿನಲ್ಲಿ ₹45 ಸಾವಿರ ಹಾಗೂ ಖಾಸಗಿಯಾಗಿ ₹3 ಲಕ್ಷ ಸಾಲ ಮಾಡಿದ್ದಾರೆ ಎನ್ನಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಸ್ಥಳಕ್ಕೆ ಎಎಸ್ಐ ನಿಂಗಪ್ಪ ಭೇಟಿ ನೀಡಿದ್ದರು.