<p><strong>ಯಾದಗಿರಿ</strong>: ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸುರಪುರ ವಿಭಾಗದ ಡಿವೈಎಸ್ಪಿ ಅವರು ನೀಡಿದ್ದ ವರದಿ ಆಧರಿಸಿ ಎಎಸ್ಐಗಳಾದ ನಿಂಗಪ್ಪ, ಬಲರಾಮ, ಕಾನ್ಸ್ಟೆಬಲ್ಗಳಾದ ತಾಯಣ್ಣ ಮತ್ತು ಲಕ್ಷ್ಮಣ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿವೆ.</p>.<p>ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಟಿಪ್ಪರ್ಗಳನ್ನು ದೇವಿಕೇರಾ ಕ್ರಾಸ್ ಸಮೀಪ ತಡೆಯದೆ ಬಿಟ್ಟು ಕಳುಹಿಸಿರುವುದು ಇಲಾಖೆ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿವೆ.</p>.<p>ಅಕ್ರಮ ಸಂಬಂಧ ವಶಕ್ಕೆ ಪಡೆದಿರುವ ವಾಹನಗಳ ನೋಂದಣಿ ರದ್ದತಿಗಾಗಿ ಯಾದಗಿರಿ ಹಾಗೂ ಕಲಬುರಗಿ ಆರ್ಟಿಒ ಕಚೇರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ 3-4 ವಾಹನಗಳ ನೋಂದಣಿ ರದ್ದಾಗಿದೆ ಎಂದು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸುರಪುರ ವಿಭಾಗದ ಡಿವೈಎಸ್ಪಿ ಅವರು ನೀಡಿದ್ದ ವರದಿ ಆಧರಿಸಿ ಎಎಸ್ಐಗಳಾದ ನಿಂಗಪ್ಪ, ಬಲರಾಮ, ಕಾನ್ಸ್ಟೆಬಲ್ಗಳಾದ ತಾಯಣ್ಣ ಮತ್ತು ಲಕ್ಷ್ಮಣ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿವೆ.</p>.<p>ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಟಿಪ್ಪರ್ಗಳನ್ನು ದೇವಿಕೇರಾ ಕ್ರಾಸ್ ಸಮೀಪ ತಡೆಯದೆ ಬಿಟ್ಟು ಕಳುಹಿಸಿರುವುದು ಇಲಾಖೆ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿವೆ.</p>.<p>ಅಕ್ರಮ ಸಂಬಂಧ ವಶಕ್ಕೆ ಪಡೆದಿರುವ ವಾಹನಗಳ ನೋಂದಣಿ ರದ್ದತಿಗಾಗಿ ಯಾದಗಿರಿ ಹಾಗೂ ಕಲಬುರಗಿ ಆರ್ಟಿಒ ಕಚೇರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ 3-4 ವಾಹನಗಳ ನೋಂದಣಿ ರದ್ದಾಗಿದೆ ಎಂದು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>