ಕೊಳ್ಳೂರ ಸೇತುವೆ ನದಿ ತಟದಿಂದ ಕೆಳಗಡೆಯಿದೆ. ತುಸು ಹೆಚ್ಚಿನ ನೀರು ಬಂದರೆ ಮುಳುಗಡೆಯಾಗುವುದು ನಾವು ಪ್ರತಿ ಬಾರಿ ಕಾಣುತ್ತೇವೆ. ಆದರೆ ಗೇಟ್ ಎತ್ತರಿಸುವ ಬಗ್ಗೆ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪ್ರವಾಹದ ಸಂದರ್ಭದಲ್ಲಿ ಭೇಟಿ ನೀಡುವುದು ಕಾಯಕವಾಗಿದೆ. ಸಮಸ್ಯೆ ಪರಿಹಾರಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಕೃಷ್ಣಾ ನದಿ ದಂಡೆಯ ಜನತೆ ಆರೋಪಿಸಿದ್ದಾರೆ.