ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ನಿರ್ವಹಣೆಯಿಲ್ಲದೇ ಅಂದಗೆಟ್ಟ ಉದ್ಯಾನಗಳು

ಉದ್ಯಾನ ಜಾಗ ಒತ್ತುವರಿ; ನಿರ್ವಹಣೆ ಮರೆತ ಸ್ಥಳೀಯ ಸಂಸ್ಥೆ ಅಧಿಕಾರಿಗಳು
Published : 5 ಫೆಬ್ರುವರಿ 2024, 7:02 IST
Last Updated : 5 ಫೆಬ್ರುವರಿ 2024, 7:02 IST
ಫಾಲೋ ಮಾಡಿ
Comments
ಯಾದಗಿರಿ ನಗರದ ಕನಕ ವೃತ್ತದ ಬಳಿಯ ಉದ್ಯಾನ ನಿರ್ವಹಣೆ ಇಲ್ಲದೇ ಬಳಲುತ್ತಿರುವುದು
ಯಾದಗಿರಿ ನಗರದ ಕನಕ ವೃತ್ತದ ಬಳಿಯ ಉದ್ಯಾನ ನಿರ್ವಹಣೆ ಇಲ್ಲದೇ ಬಳಲುತ್ತಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಟೇಲರ್ ಸೀಟ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಸುಂದರ ಉದ್ಯಾನ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು
ಜೀವನ ಕಟ್ಟಿಮನಿ ಪೌರಾಯುಕ್ತ ನಗರಸಭೆ ಸುರಪುರ
ಕುಟುಂಬದೊಂದಿಗೆ ಪಿಕ್‌ನಿಕ್ ಹೋಗಲು ವಾಯುವಿಹಾರ ಮಾಡಲು ಮಕ್ಕಳನ್ನು ಆಡಿಸಲು ಆಟಿಕೆಗಳುಳ್ಳ ಸುಸಜ್ಜಿತ ಉದ್ಯಾನ ನಿರ್ಮಾಣದ ಅಗತ್ಯ ಇದೆ
ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಉದ್ಯಾನವನ ಪಕ್ಕದಲ್ಲಿನ ಚರಂಡಿಯಲ್ಲೇ ಹೋಟೆಲ್‌ ತ್ಯಾಜ್ಯ ಸುರಿಯುವುದರಿಂದ ದುರ್ನಾತ ತುಂಬಿದೆ. ವಾಕಿಂಗ್‌ ಅಥವಾ ಮಕ್ಕಳನ್ನು ಆಡಿಸಲು ಕರೆತಂದರೆ ವಾಸನೆಯಿಂದಾಗಿ ನಿಲ್ಲಲಾಗದು
ಮಹಾಲಕ್ಷ್ಮೀ ಗೃಹಿಣಿ ಗುರುಮಠಕಲ್‌
ನಮ್ಮಲ್ಲಿನ ಉದ್ಯಾನಗಳು ಮಳೆಗಾಲದಲ್ಲಿ ಕೆಸರು ಬೇಸಿಗೆಗೆ ಬರಡಾಗಿರುತ್ತವೆ. ಸೂಕ್ತ ನಿರ್ವಹಣೆಯಿಲ್ಲ‍ದ್ದಕ್ಕೆ ಹೀಗೆ. 'ಲೆಕ್ಕಕ್ಕಿವೆ ಆದರೆ ಆಟಕ್ಕಿಲ್ಲ' ನಮ್ಮೂರ ಉದ್ಯಾನಗಳು
ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ ಗುರುಮಠಕಲ್
ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯಾನವನಕ್ಕಾಗಿ ನಿಗದಿಯಾಗಿರುವ ಸ್ಥಳದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಜೊತೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ
ಮಹಾದೇವಿ ಬೇನಾಳಮಠ ರಾಜ್ಯ ರೈತ ಸಂಘದ ರಾಜ್ಯ ಸದಸ್ಯ
ವಿವಿಧ ವಾರ್ಡ್‌ನ ಹೊಸ ಲೇಔಟ್‌ಗಳಲ್ಲಿ ಉದ್ಯಾನಕ್ಕಾಗಿ ಸ್ಥಳ ಕಾಯ್ದಿರಿಸಲಾಗುತ್ತದೆ. ಅವುಗಳಲ್ಲಿ ಲಭ್ಯವಿರುವ ಸ್ಥಳವನ್ನು ಅಧಿಕಾರಿಗಳು ತಂತಿ ಬೇಲಿ ಹಾಕಿ ಸೂಕ್ತ ರಕ್ಷಣೆ ಮಾಡಬೇಕು
ಬಸವರಾಜ ಮೇಲಿನಮನಿ ನಿವಾಸಿ
ಉದ್ಯಾನ ಸಾರ್ವಜನಿಕರ ಆಸ್ತಿ
ಶಹಾಪುರ: ಆಯಾ ಬಡಾವಣೆಯಲ್ಲಿ ಲೇ ಔಟ್ ನಕ್ಷೆ ಸಿದ್ಧಪಡಿಸುವಾಗ ಉದ್ಯಾನ ಜಾಗಕ್ಕಾಗಿ ಮೀಸಲಿಟ್ಟ ಜಾಗವು ಅದು ಸಾರ್ವಜನಿಕ ಆಸ್ತಿಯಾಗಿರುತ್ತದೆ. ಯಾವುದೇ ಕಾರಣಕ್ಕೂ ಅಲ್ಲಿ ಯಾವುದೇ ಕಟ್ಟಡ ದೇಗುಲ ಮಸೀದಿ ನಿರ್ಮಿಸುವಂತಿಲ್ಲ. ಉದ್ಯಾಗ ಜಾಗ ಸಂರಕ್ಷಣೆ ಕಾಯ್ದೆ ಜಾರಿಯಲ್ಲಿ ಇದೆ. ಹೆಚ್ಚಿನ ಜನರಿಗೆ ಇದರ ಅರಿವು ಇಲ್ಲ ಎನ್ನುತ್ತಾರೆ ವಕೀಲ ಯೂಸೂಫ್ ಸಿದ್ದಕಿ. ಉದ್ಯಾನ ಜಾಗವನ್ನು ಮಾರಾಟ ಇಲ್ಲವೆ ಪರಭಾರೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಲೇ ಔಟ್ ನಕ್ಷೆಯನ್ನು ಅಲ್ಲಿನ ನಿವಾಸಿಗರು ಪಡೆದುಕೊಂಡು ಕಾನೂನು ಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟರುವ ಉದ್ಯಾನ ಜಾಗವನ್ನು ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ಅವರು ನೀಡುತ್ತಾರೆ.
ಸುರಪುರದ ಮಹಿಬೂಬ ಸುಬಾನಿ ದರ್ಗಾ ಏರಿಯಾ ಬಡಾವಣೆಯಲ್ಲಿರುವ ಉದ್ಯಾನದ ನಿರ್ವಹಣೆ ಇಲ್ಲ
ಸುರಪುರದ ಮಹಿಬೂಬ ಸುಬಾನಿ ದರ್ಗಾ ಏರಿಯಾ ಬಡಾವಣೆಯಲ್ಲಿರುವ ಉದ್ಯಾನದ ನಿರ್ವಹಣೆ ಇಲ್ಲ
ನಿರ್ವಹಣೆ ಕೊರತೆ
ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ 15 ಉದ್ಯಾನಗಳಿವೆ. ಅದರಲ್ಲಿ 9 ಉದ್ಯಾನಗಳು ಪರವಾಗಿಲ್ಲ ಎಂಬಂತೆ ಜೀವಂತವಾಗಿವೆ. ಉಳಿದ 6 ಉದ್ಯಾನಗಳು ಲೆಕ್ಕಕ್ಕೆ ಇಲ್ಲ. ಕೆಲ ಉದ್ಯಾನಗಳಲ್ಲಿ ಕೊಳವೆಬಾವಿ ಹಾಕಿಸಿಲ್ಲ. ಒಟ್ಟು 23 ಲೇಔಟ್‌ಗಳು ಇವೆ. ನಿಯಮದ ಪ್ರಕಾರ ಅಲ್ಲಿ ಉದ್ಯಾನಕ್ಕೆ ಸ್ಥಳ ಬಿಡಲಾಗಿದೆ. ಬಹುತೇಕ ಕಡೆ ಉದ್ಯಾನ ಮಾಡಿಲ್ಲ. ಅರಣ್ಯ ಇಲಾಖೆಯ ಎಬಿಸಿಡಿ ಉದ್ಯಾನ ಉತ್ತಮ ನಿರ್ವಹಣೆ ಹೊಂದಿದ್ದು ಮಕ್ಕಳು ಆಟವಾಡಲು ಆಟಿಕೆಗಳು ಪಿಕ್‌ನಿಕ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT