ಟೇಲರ್ ಸೀಟ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಸುಂದರ ಉದ್ಯಾನ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದುಜೀವನ ಕಟ್ಟಿಮನಿ ಪೌರಾಯುಕ್ತ ನಗರಸಭೆ ಸುರಪುರ
ಕುಟುಂಬದೊಂದಿಗೆ ಪಿಕ್ನಿಕ್ ಹೋಗಲು ವಾಯುವಿಹಾರ ಮಾಡಲು ಮಕ್ಕಳನ್ನು ಆಡಿಸಲು ಆಟಿಕೆಗಳುಳ್ಳ ಸುಸಜ್ಜಿತ ಉದ್ಯಾನ ನಿರ್ಮಾಣದ ಅಗತ್ಯ ಇದೆಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಉದ್ಯಾನವನ ಪಕ್ಕದಲ್ಲಿನ ಚರಂಡಿಯಲ್ಲೇ ಹೋಟೆಲ್ ತ್ಯಾಜ್ಯ ಸುರಿಯುವುದರಿಂದ ದುರ್ನಾತ ತುಂಬಿದೆ. ವಾಕಿಂಗ್ ಅಥವಾ ಮಕ್ಕಳನ್ನು ಆಡಿಸಲು ಕರೆತಂದರೆ ವಾಸನೆಯಿಂದಾಗಿ ನಿಲ್ಲಲಾಗದುಮಹಾಲಕ್ಷ್ಮೀ ಗೃಹಿಣಿ ಗುರುಮಠಕಲ್
ನಮ್ಮಲ್ಲಿನ ಉದ್ಯಾನಗಳು ಮಳೆಗಾಲದಲ್ಲಿ ಕೆಸರು ಬೇಸಿಗೆಗೆ ಬರಡಾಗಿರುತ್ತವೆ. ಸೂಕ್ತ ನಿರ್ವಹಣೆಯಿಲ್ಲದ್ದಕ್ಕೆ ಹೀಗೆ. 'ಲೆಕ್ಕಕ್ಕಿವೆ ಆದರೆ ಆಟಕ್ಕಿಲ್ಲ' ನಮ್ಮೂರ ಉದ್ಯಾನಗಳುಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ ಗುರುಮಠಕಲ್
ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯಾನವನಕ್ಕಾಗಿ ನಿಗದಿಯಾಗಿರುವ ಸ್ಥಳದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಜೊತೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆಮಹಾದೇವಿ ಬೇನಾಳಮಠ ರಾಜ್ಯ ರೈತ ಸಂಘದ ರಾಜ್ಯ ಸದಸ್ಯ
ವಿವಿಧ ವಾರ್ಡ್ನ ಹೊಸ ಲೇಔಟ್ಗಳಲ್ಲಿ ಉದ್ಯಾನಕ್ಕಾಗಿ ಸ್ಥಳ ಕಾಯ್ದಿರಿಸಲಾಗುತ್ತದೆ. ಅವುಗಳಲ್ಲಿ ಲಭ್ಯವಿರುವ ಸ್ಥಳವನ್ನು ಅಧಿಕಾರಿಗಳು ತಂತಿ ಬೇಲಿ ಹಾಕಿ ಸೂಕ್ತ ರಕ್ಷಣೆ ಮಾಡಬೇಕುಬಸವರಾಜ ಮೇಲಿನಮನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.