ಜಮೀನಿನಲ್ಲಿ ನೀರು ನಿಲ್ಲುವುದರಿಂದ ಹತ್ತಿ ಬೆಳೆ ಕೆಂಬಣ್ಣಕ್ಕೆ ತಿರುಗಿ, ಸಸಿ ಸಾಯುತ್ತವೆ. ಮೊದಲು ಸಾಧ್ಯವಾದಷ್ಟು ನೀರು ಹೊರಹೋಗುವ ವ್ಯವಸ್ಥೆ ಮಾಡಬೇಕು. ನಂತರ ಒಂದು ಎಕೆರೆಗೆ ನೈಟ್ರೋಜನ್, ಪಾಸ್ಪರಸ್, ಪೊಟ್ಯಾಶಿಯಂ (19:19:19) 1 ಕೆಜಿ ಹಾಗೂ ಮೆಗ್ನೀಶಿಯಂಸಲ್ಫೇಟ್ 1 ಕೆಜಿ ಮಿಶ್ರಣ ತಯಾರಿಸಿಕೊಂಡು ಮೂರು ದಿನಗಳಲ್ಲಿ ಎರಡು ಬಾರಿ ಸಸಿಗಳಿಗೆ ಸಿಂಪಡಿಸಿದರೆ ಸಸಿಗೆ ಶಕ್ತಿ ಸಿಗುತ್ತದೆ.