<p><strong>ಗುರುಮಠಕಲ್ (ಯಾದಗಿರಿ): </strong>ಮನೆಯಲ್ಲಿ ಪತಿ, ಅತ್ತೆ, ಮಾವ ಹಾಗೂ ಮೈದುನರ ಕಿರುಕುಳ ತಾಳಲಾರದೆ ಸೀಮೆಎಣ್ಣೆಯಿಂದ ಸುಟ್ಟುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಜರುಗಿದೆ.</p>.<p>ಮೃತರನ್ನು ಪಟ್ಟಣದ ಕಂದೂರುಗೇರಿ ಬಡಾವಣೆಯ ಭಾರತಮ್ಮ ಉರುಫ್ ರಜಿತಾ (27) ಎಂದು ಗುರುತಿಸಲಾಗಿದೆ.</p>.<p>ನೆರೆಯ ತೆಲಂಗಾಣದ ಅಂಗಡಿ ರಾವುಲಪಲ್ಲಿ ಗ್ರಾಮದ ಭಾರತಮ್ಮ ಹಾಗೂ ಪಟ್ಟಣದ ಬೀರಪ್ಪ ಕುರುಬರು ಅವರಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗೆ ಮೂವರು ಪುತ್ರಿಯರಿದ್ದಾರೆ.</p>.<p>'ಬರೀ ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ' ಎಂದು ಪತಿ ಬೀರಪ್ಪ, ಅತ್ತೆ ಸಾವಿತ್ರಮ್ಮ, ಮಾವ ಗ್ಯಾಂಗ್ ನಾಗಪ್ಪ ಹಾಗೂ ಮೈದುನ ಸೇರಿ ರಜಿತಾರಿಗೆ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರವೂ ಜಗಳವಾಗಿದ್ದು, ಸೀಮೆ ಎಣ್ಣೆ ಸುರಿದುಕೊಂಡು ರಜಿತಾ ಸುಟ್ಟುಕೊಂಡಿದ್ದಾಳೆ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವಾಗಲೇ ರಜಿತಾ ಮೃತಪಟ್ಟಿದ್ದಾರೆ.</p>.<p>'ಅಕ್ಕ ರಜಿತಾಳಿಗೆ ಮೂವರು ಪುತ್ರಿಯರಿದ್ದಾರೆ. ಗಂಡು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯಲ್ಲಿ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರ ರಾತ್ರಿಯೂ ಕಿರುಕುಳ ನೀಡಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ' ಎಂದು ಮೃತಳ ಸಹೋದರ ಲಕ್ಷ್ಮೀಕಾಂತ ಕಂಡ್ರೆಪಲ್ಲಿ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ): </strong>ಮನೆಯಲ್ಲಿ ಪತಿ, ಅತ್ತೆ, ಮಾವ ಹಾಗೂ ಮೈದುನರ ಕಿರುಕುಳ ತಾಳಲಾರದೆ ಸೀಮೆಎಣ್ಣೆಯಿಂದ ಸುಟ್ಟುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಜರುಗಿದೆ.</p>.<p>ಮೃತರನ್ನು ಪಟ್ಟಣದ ಕಂದೂರುಗೇರಿ ಬಡಾವಣೆಯ ಭಾರತಮ್ಮ ಉರುಫ್ ರಜಿತಾ (27) ಎಂದು ಗುರುತಿಸಲಾಗಿದೆ.</p>.<p>ನೆರೆಯ ತೆಲಂಗಾಣದ ಅಂಗಡಿ ರಾವುಲಪಲ್ಲಿ ಗ್ರಾಮದ ಭಾರತಮ್ಮ ಹಾಗೂ ಪಟ್ಟಣದ ಬೀರಪ್ಪ ಕುರುಬರು ಅವರಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗೆ ಮೂವರು ಪುತ್ರಿಯರಿದ್ದಾರೆ.</p>.<p>'ಬರೀ ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ' ಎಂದು ಪತಿ ಬೀರಪ್ಪ, ಅತ್ತೆ ಸಾವಿತ್ರಮ್ಮ, ಮಾವ ಗ್ಯಾಂಗ್ ನಾಗಪ್ಪ ಹಾಗೂ ಮೈದುನ ಸೇರಿ ರಜಿತಾರಿಗೆ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರವೂ ಜಗಳವಾಗಿದ್ದು, ಸೀಮೆ ಎಣ್ಣೆ ಸುರಿದುಕೊಂಡು ರಜಿತಾ ಸುಟ್ಟುಕೊಂಡಿದ್ದಾಳೆ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವಾಗಲೇ ರಜಿತಾ ಮೃತಪಟ್ಟಿದ್ದಾರೆ.</p>.<p>'ಅಕ್ಕ ರಜಿತಾಳಿಗೆ ಮೂವರು ಪುತ್ರಿಯರಿದ್ದಾರೆ. ಗಂಡು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯಲ್ಲಿ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರ ರಾತ್ರಿಯೂ ಕಿರುಕುಳ ನೀಡಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ' ಎಂದು ಮೃತಳ ಸಹೋದರ ಲಕ್ಷ್ಮೀಕಾಂತ ಕಂಡ್ರೆಪಲ್ಲಿ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>