ಕರ್ನಾಟಕ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿವೆ. ಮಾಳನೂರ, ವಜ್ಜಲತಾಂಡಾ, ಶ್ರೀನಿವಾಸಪುರ ಮತ್ತಿತರ ಗ್ರಾಮಗಳಲ್ಲಿ ಇಂತಹ ಕಟ್ಟಡಗಳು ಇದ್ದು ಅವುಗಳನ್ನು ಪೂರ್ಣಗೊಳಿಸಲು ಬಹುತೇಕ ಸದಸ್ಯರು ಒತ್ತಾಯಿಸಿದರು. ರಾಯನಪಾಳಾ ಗ್ರಾಮದಲ್ಲಿ ಇನ್ನೂ ಈ ಕಟ್ಟಡ ನೆಲ ಮಟ್ಟ (ಬೇಸ್ಮೇಟ್)ನಲ್ಲಿಯೇ ಇದೆ ಎಂದು ಕೊಡೇಕಲ್ಲ ಸದಸ್ಯ ಮೋಹನ ಪಾಟೀಲ ಹೇಳಿದರು.