ಸ್ವಾತಂತ್ರ್ಯ ಹೋರಾಟಗಾರ ಕೋಲೂರು ಮಲ್ಲಪ್ಪ ಅವರ ಸ್ಮಾರಕ ನಿರ್ಮಾಣಕ್ಕಾಗಿ 2017–18 ಸಾಲಿನಲ್ಲಿ ₹2 ಕೋಟಿ ಬಿಡುಗಡೆಯಾಗಿತ್ತು. ಈಗ ₹89 ಲಕ್ಷ ಬಡ್ಡಿ ಆಗಿದೆ. ಸ್ಮಾರಕಕ್ಕಾಗಿ 15–20 ಸ್ಥಳ ಪರಿಶೀಲನೆ ಮಾಡಲಾಗಿದೆ
ಉತ್ತರದೇವಿ ಮಠಪತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ
ಕೋಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣ ನನೆಗುದಿಗೆ ಬಿದ್ದಿದೆ. ಅನುದಾನ ಸದ್ಬಳಕೆ ಆಗಬೇಕು. ಸಮಾಧಿ ಸ್ಥಳ ಮಾತ್ರ ಮಲ್ಲಪ್ಪ ಅಭಿಮಾನಿಗಳಿಂದ ಅಭಿವೃದ್ಧಿಯಾಗಿದೆ
ಹಣಮಂತರಾಯಗೌಡ ಮಾಲಿಪಾಟೀಲ ಕೋಲೂರು ಮಲ್ಲಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ
ಹೈ.ಕ ವಿಮೋಚನೆಗೆ ಸುರಪುರದ ಹಲವಾರು ಹೋರಾಟಗಾರರು ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದಾರೆ. ಅವರ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು
ತಮ್ಮಣ್ಣ ಬಾರಿ (ಬಸಪ್ಪ ಬಾರಿ ಅವರ ಪುತ್ರ)
ಹೈ.ಕ ಮುಕ್ತಿ ಸಂಘರ್ಷ ಆರಂಭವಾದದ್ದೇ ಸುರಪುರದಿಂದ. ಈ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಪಠ್ಯ ಪುಸ್ತಕದಲ್ಲಿ ಇಲ್ಲಿನ ಹೋರಾಟಗಾರರ ಕುರಿತು ಮಾಹಿತಿ ಸೇರ್ಪಡೆ ಮಾಡಬೇಕು