<p><strong>ಯಾದಗಿರಿ: </strong>ವಿಬಿಆರ್ ಮುದ್ನಾಳ ಆಸ್ಪತ್ರೆಯಲ್ಲಿ ಸಿಪಾಕಾ ಸಂಸ್ಥೆ ಸಹಯೋಗದಲ್ಲಿ ಮೇ 21ರಂದು ಐಸಿಯು ಕೇರ್ ಸೆಂಟರ್ ಉದ್ಘಾಟನೆ ನೆರವೇರಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.</p>.<p>ಅಂದು ಬೆಳಿಗ್ಗೆ 10 ಗಂಟೆಗೆ ಸಿಪಾಕಾ ಸಂಸ್ಥೆಯ ಎಂಡಿ ಡಾ.ರಾಜಾ ಅಮರನಾಥ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ಥಳೀಯ ಹಾಗೂ ಶಹಾಪುರ ಶಾಸಕರು ಭಾಗವಹಿಸಲಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ವಿಬಿಆರ್ ಅಗತ್ಯ ಸೇವೆ ಒದಗಿಸಿದೆ. ಆದರೆ, ಐಸಿಯು ಕೊರತೆ ಎದುರಾಗಿತ್ತು. ಯಾದಗಿರಿಯಲ್ಲಿ ಐಸಿಯು ಸೌಲಭ್ಯ ಸರಿದೂಗಿಸಲು ಗ್ರಾಮೀಣ ಭಾಗದಲ್ಲಿ ಐಸಿಯು ಸೇವೆ ಒದಗಿಸಿರುವ ಸಿಪಾಕಾ ಎನ್ನುವ ಸಂಸ್ಥೆಯೊಂದಿಗೆ ಸಹಯೋಗದಲ್ಲಿ ವಿಬಿಆರ್ನಲ್ಲಿ10 ಐಸಿಯು ಬೆಡ್ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.</p>.<p>ಹೈದರಾಬಾದ್ , ಬೆಂಗಳೂರು ನಂಥ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಐಸಿಯು ಚಾರ್ಜ್ ದಿನವೊಂದಕ್ಕೆ ₹1ಲಕ್ಷ ಮಾಡುತ್ತಾರೆ. ಆದರೆ, ಯಾದಗಿರಿಯ ವಿಬಿಆರ್ನಲ್ಲಿ ₹10 ರಿಂದ 20 ಸಾವಿರವರೆಗೆ ಮಾತ್ರ ಮಾಡಲಾಗುವುದು. ಜೊತೆಗೆ ಅಗತ್ಯ ಸೇವೆ ಒದಗಿಸಲಾಗುವುದು. ಮಾನವೀಯತೆಯ ಆಧಾರದ ಮೇಲೆ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.</p>.<p>ಡಾ.ಪಲ್ಲಾ ಅಭಿಷೇಕರೆಡ್ಡಿ, ಡಾ ಬಸವರಾಜ್, ಡಾ ಸುನೀಲ್, ಡಾ.ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ವಿಬಿಆರ್ ಮುದ್ನಾಳ ಆಸ್ಪತ್ರೆಯಲ್ಲಿ ಸಿಪಾಕಾ ಸಂಸ್ಥೆ ಸಹಯೋಗದಲ್ಲಿ ಮೇ 21ರಂದು ಐಸಿಯು ಕೇರ್ ಸೆಂಟರ್ ಉದ್ಘಾಟನೆ ನೆರವೇರಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.</p>.<p>ಅಂದು ಬೆಳಿಗ್ಗೆ 10 ಗಂಟೆಗೆ ಸಿಪಾಕಾ ಸಂಸ್ಥೆಯ ಎಂಡಿ ಡಾ.ರಾಜಾ ಅಮರನಾಥ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ಥಳೀಯ ಹಾಗೂ ಶಹಾಪುರ ಶಾಸಕರು ಭಾಗವಹಿಸಲಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ವಿಬಿಆರ್ ಅಗತ್ಯ ಸೇವೆ ಒದಗಿಸಿದೆ. ಆದರೆ, ಐಸಿಯು ಕೊರತೆ ಎದುರಾಗಿತ್ತು. ಯಾದಗಿರಿಯಲ್ಲಿ ಐಸಿಯು ಸೌಲಭ್ಯ ಸರಿದೂಗಿಸಲು ಗ್ರಾಮೀಣ ಭಾಗದಲ್ಲಿ ಐಸಿಯು ಸೇವೆ ಒದಗಿಸಿರುವ ಸಿಪಾಕಾ ಎನ್ನುವ ಸಂಸ್ಥೆಯೊಂದಿಗೆ ಸಹಯೋಗದಲ್ಲಿ ವಿಬಿಆರ್ನಲ್ಲಿ10 ಐಸಿಯು ಬೆಡ್ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.</p>.<p>ಹೈದರಾಬಾದ್ , ಬೆಂಗಳೂರು ನಂಥ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಐಸಿಯು ಚಾರ್ಜ್ ದಿನವೊಂದಕ್ಕೆ ₹1ಲಕ್ಷ ಮಾಡುತ್ತಾರೆ. ಆದರೆ, ಯಾದಗಿರಿಯ ವಿಬಿಆರ್ನಲ್ಲಿ ₹10 ರಿಂದ 20 ಸಾವಿರವರೆಗೆ ಮಾತ್ರ ಮಾಡಲಾಗುವುದು. ಜೊತೆಗೆ ಅಗತ್ಯ ಸೇವೆ ಒದಗಿಸಲಾಗುವುದು. ಮಾನವೀಯತೆಯ ಆಧಾರದ ಮೇಲೆ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.</p>.<p>ಡಾ.ಪಲ್ಲಾ ಅಭಿಷೇಕರೆಡ್ಡಿ, ಡಾ ಬಸವರಾಜ್, ಡಾ ಸುನೀಲ್, ಡಾ.ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>