ಆರೋಪಿ ಶರಣಪ್ಪ ಈರಣ್ಣ ಹುಲಿಗೆಮ್ಮ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ರಾಜಿ ಪಂಚಾಯಿತಿ ನಡೆಸಲು ಬುಧವಾರ ಹುಲಿಗೆಮ್ಮ ತಂದೆ ಸಿದ್ರಾಮಪ್ಪ ಮುರಾಳ ಸೇರಿದಂತೆ ಸಂಬಂಧಿಕರಾದ ನಾಗಪ್ಪ ಚನ್ನಪ್ಪ ಹಗರಗೊಂಡ, ಶರಣಪ್ಪ ಸರೂರ್, ಮುತ್ತಪ್ಪ ಮುರಾಳ ಅವರು ಪಂಚಾಯಿತಿಗೆ ಬಂದಿದ್ದರು. ಅವರನ್ನು ಮಾತನಾಡುವ ನೆಪದಲ್ಲಿ ಕೋಣೆಯಲ್ಲಿ ಕೂಡಿ ಹಾಕಿ ಬಾಗಿಲು ಕೀಲಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ನಾಲ್ವರು ತೀವ್ರ ಗಾಯಗೊಂಡು ಸಾವು–ನೋವಿನ ಮಧ್ಯೆ ನರಳಾಡುತ್ತಿದ್ದರು.