ಈ ಕುರಿತು ಹೇಳಿಕೆ ನೀಡಿರುವ ಅವರು, ‘ಅತಿಯಾದ ರಸಗೊಬ್ಬರ ಬಳಕೆಯ ಬಗ್ಗೆ ಬೇಸಾಯ ಶಾಸ್ತ್ರದ ತಜ್ಞ, ಮಣ್ಣಿನ ಫಲವತ್ತತೆ ಹಾಳಾಗುತ್ತಿರುವ ಬಗ್ಗೆ ಮಣ್ಣು ಪರೀಕ್ಷೆ ತಜ್ಞ, ಕೀಟನಾಶ ಶಾಸ್ತ್ರ ತಜ್ಞ, ಆರ್ಥಿಕ ನಷ್ಟದ ಬಗ್ಗೆ ಆರ್ಥಿಕ ತಜ್ಞ, ನೀರಿನ ಬಳಕೆ ಮಾಡುತ್ತಿರುವ ಬಗ್ಗೆ ಕೃಷಿ ಎಂಜಿನಿಯರ್ ತಜ್ಞರ ಒಳಗೊಂಡ ಸಮಗ್ರವಾದ ತಂಡವನ್ನು ರಚಿಸಿ ಮಾಹಿತಿ ಕಲೆ ಹಾಕುವುದು ತುರ್ತು ಕೆಲಸವಾಗಬೇಕು’ ಎಂದು ಅವರು ತಿಳಿಸಿದರು.