<p><strong>ಕಕ್ಕೇರಾ</strong>: ತಿಂಥಣಿಯ ಮೌನೇಶ್ವರ ಜಾತ್ರೆ ಅಂಗವಾಗಿ ಸುರಪುರದ ಕಾಳಿಕಾದೇವಿ ದೇವಸ್ಥಾನದಿಂದ ಕಾಳಿಕಾದೇವಿ ಹಾಗೂ ಸೂಗೂರೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿ ತಿಂಥಣಿ ಗ್ರಾಮಕ್ಕೆ ಆಗಮಿಸಿದೆ.</p>.<p>ಗ್ರಾಮಸ್ಥರು ವಾದ್ಯಮೇಳದೊಂದಿಗೆ ಸಡಗರ-ಸಂಭ್ರಮದಿಂದ ಪಲ್ಲಕ್ಕಿಯನ್ನು ಬರಮಾಡಿಕೊಂಡರು. ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಹೋಗಲಾಯಿತು. ಅಲ್ಲಿಂದ ಮೌನೇಶ್ವರ ಪಲ್ಲಕ್ಕಿ ಜತೆ ಗಂಗಾಸ್ನಾನಕ್ಕೆ ತೆರಳಿ ರಾತ್ರಿ ದೇವಸ್ಥಾನ ಪ್ರವೇಶ ಮಾಡಿದವು. </p>.<p>ಮೌನೇಶ್ವರರ ಹಿನ್ನೆಲೆ: ತಿಂಥಣಿ ಮೌನೇಶ್ವರರು 16ನೇ ಶತಮಾನದಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯಕ್ಕಾಗಿ ಅನೇಕ ಪವಾಡ, ಲೀಲೆ ಮಾಡಿದವರು. ದೇಶದ್ಯಾಂತ ಸಂಚರಿಸಿ, ವಚನಗಳಿಂದ ಲೋಕದ ಅಂಕು-ಡೊಂಕು ತಿದ್ದುವ ಮೂಲಕ ಹಿಂದೂ-ಮುಸ್ಲಿಮರಿಗೆ ದೇವರು ಒಬ್ಬನೇ ಎಂದು ತೋರಿಸಿದ ಮಹಾಪುರುಷ.</p>.<p>ವಿಜಯಪುರದ ಅಲಿ ಆದಿಲಶಾಹಿ ಮೌನೇಶ್ವರರ ಪವಾಡದಿಂದ ಆಶ್ಚರ್ಯಚಕಿತನಾಗಿದ್ದ. ಹಿಂದೂ-ಮುಸ್ಲಿಮರ ಸಾಮರಸ್ಯದ ಕುರುಹುಗಳಾಗಿ ಹಸಿರು ಧ್ವಜ, ದೇವಸ್ಥಾನದ ಒಳಗೆ ಹಿಂದೂವಾಸ್ತು ವಿನ್ಯಾಸ, ಹೊರಗೆ ದರ್ಗಾ ರೂಪದ ಮಿಶ್ರಶೈಲಿಯ ವಿನ್ಯಾಸವಿರುವುದನ್ನು ಕಾಣಬಹುದು. ದೇವಸ್ಥಾನದಲ್ಲಿ ಇಂದಿಗೂ ಚಪ್ಗೊಡಲಿ, ಹೂಜಿ, ಪಾದುಕೆಗಳು ಪೂಜೆಗೊಳ್ಳುತ್ತಿವೆ.</p>.<p>ಮೌನೇಶ್ವರರು ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಪವಾಡ, ಲೀಲೆ ಮಾಡುತ್ತಾ ವರವಿಯಿಂದ ಕೃಷ್ಣಾ ನದಿಯ ದಂಡೆಯ ಮೇಲೆ ಇರುವ ತಿಂಥಣಿಯ ಅಗ್ರಹಾರಕ್ಕೆ ಬಂದು ನೆಲೆಸುತ್ತಾರೆ.</p>.<p>ದಶಮಿಯಂದು ಸುರಪುರ ಕಾಳಿಕಾದೇವಿ ದೇವಸ್ಥಾನದಿಂದ ಬೆಳ್ಳಿಪಲ್ಲಕ್ಕಿ ತಿಂಥಣಿಗೆ ಬಂದಾಗ ಜಾತ್ರಾ ಕಾರ್ಯಕ್ರಮಗಳು ಪ್ರಾರಂಭವಾಗಿ ಸಾವಿರಾರು ಪುರವಂತರು ತಮ್ಮ ಸೇವೆ ಸಲ್ಲಿಸುತ್ತಾರೆ. </p>.<p>ಮಾಘ ಶುದ್ಧ ದಶಮಿಯಿಂದ ಹುಣ್ಣಿಮೆವರೆಗೆ ಜರುಗುವ ಮಹಾಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ಮೌನೇಶ್ವರರ ದರ್ಶನ ಪಡೆಯುತ್ತಾರೆ. </p>.<div><blockquote>ತಿಂಥಣಿ ಮೌನೇಶ್ವರ ಜಾತ್ರೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಜರಲಿದ್ದು ಲಕ್ಷಾಂತರ ಭಕ್ತರು ಆಗಮಿಸಿ ಮೌನೇಶ್ವರ ದರ್ಶನ ಪಡೆದುಕೊಳ್ಳುತ್ತಾರೆ </blockquote><span class="attribution">ಸಂಜೀವನಾಯಕ ತಿಂಥಣಿ ಸ್ಥಳೀಯ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ</strong>: ತಿಂಥಣಿಯ ಮೌನೇಶ್ವರ ಜಾತ್ರೆ ಅಂಗವಾಗಿ ಸುರಪುರದ ಕಾಳಿಕಾದೇವಿ ದೇವಸ್ಥಾನದಿಂದ ಕಾಳಿಕಾದೇವಿ ಹಾಗೂ ಸೂಗೂರೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿ ತಿಂಥಣಿ ಗ್ರಾಮಕ್ಕೆ ಆಗಮಿಸಿದೆ.</p>.<p>ಗ್ರಾಮಸ್ಥರು ವಾದ್ಯಮೇಳದೊಂದಿಗೆ ಸಡಗರ-ಸಂಭ್ರಮದಿಂದ ಪಲ್ಲಕ್ಕಿಯನ್ನು ಬರಮಾಡಿಕೊಂಡರು. ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಹೋಗಲಾಯಿತು. ಅಲ್ಲಿಂದ ಮೌನೇಶ್ವರ ಪಲ್ಲಕ್ಕಿ ಜತೆ ಗಂಗಾಸ್ನಾನಕ್ಕೆ ತೆರಳಿ ರಾತ್ರಿ ದೇವಸ್ಥಾನ ಪ್ರವೇಶ ಮಾಡಿದವು. </p>.<p>ಮೌನೇಶ್ವರರ ಹಿನ್ನೆಲೆ: ತಿಂಥಣಿ ಮೌನೇಶ್ವರರು 16ನೇ ಶತಮಾನದಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯಕ್ಕಾಗಿ ಅನೇಕ ಪವಾಡ, ಲೀಲೆ ಮಾಡಿದವರು. ದೇಶದ್ಯಾಂತ ಸಂಚರಿಸಿ, ವಚನಗಳಿಂದ ಲೋಕದ ಅಂಕು-ಡೊಂಕು ತಿದ್ದುವ ಮೂಲಕ ಹಿಂದೂ-ಮುಸ್ಲಿಮರಿಗೆ ದೇವರು ಒಬ್ಬನೇ ಎಂದು ತೋರಿಸಿದ ಮಹಾಪುರುಷ.</p>.<p>ವಿಜಯಪುರದ ಅಲಿ ಆದಿಲಶಾಹಿ ಮೌನೇಶ್ವರರ ಪವಾಡದಿಂದ ಆಶ್ಚರ್ಯಚಕಿತನಾಗಿದ್ದ. ಹಿಂದೂ-ಮುಸ್ಲಿಮರ ಸಾಮರಸ್ಯದ ಕುರುಹುಗಳಾಗಿ ಹಸಿರು ಧ್ವಜ, ದೇವಸ್ಥಾನದ ಒಳಗೆ ಹಿಂದೂವಾಸ್ತು ವಿನ್ಯಾಸ, ಹೊರಗೆ ದರ್ಗಾ ರೂಪದ ಮಿಶ್ರಶೈಲಿಯ ವಿನ್ಯಾಸವಿರುವುದನ್ನು ಕಾಣಬಹುದು. ದೇವಸ್ಥಾನದಲ್ಲಿ ಇಂದಿಗೂ ಚಪ್ಗೊಡಲಿ, ಹೂಜಿ, ಪಾದುಕೆಗಳು ಪೂಜೆಗೊಳ್ಳುತ್ತಿವೆ.</p>.<p>ಮೌನೇಶ್ವರರು ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಪವಾಡ, ಲೀಲೆ ಮಾಡುತ್ತಾ ವರವಿಯಿಂದ ಕೃಷ್ಣಾ ನದಿಯ ದಂಡೆಯ ಮೇಲೆ ಇರುವ ತಿಂಥಣಿಯ ಅಗ್ರಹಾರಕ್ಕೆ ಬಂದು ನೆಲೆಸುತ್ತಾರೆ.</p>.<p>ದಶಮಿಯಂದು ಸುರಪುರ ಕಾಳಿಕಾದೇವಿ ದೇವಸ್ಥಾನದಿಂದ ಬೆಳ್ಳಿಪಲ್ಲಕ್ಕಿ ತಿಂಥಣಿಗೆ ಬಂದಾಗ ಜಾತ್ರಾ ಕಾರ್ಯಕ್ರಮಗಳು ಪ್ರಾರಂಭವಾಗಿ ಸಾವಿರಾರು ಪುರವಂತರು ತಮ್ಮ ಸೇವೆ ಸಲ್ಲಿಸುತ್ತಾರೆ. </p>.<p>ಮಾಘ ಶುದ್ಧ ದಶಮಿಯಿಂದ ಹುಣ್ಣಿಮೆವರೆಗೆ ಜರುಗುವ ಮಹಾಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ಮೌನೇಶ್ವರರ ದರ್ಶನ ಪಡೆಯುತ್ತಾರೆ. </p>.<div><blockquote>ತಿಂಥಣಿ ಮೌನೇಶ್ವರ ಜಾತ್ರೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಜರಲಿದ್ದು ಲಕ್ಷಾಂತರ ಭಕ್ತರು ಆಗಮಿಸಿ ಮೌನೇಶ್ವರ ದರ್ಶನ ಪಡೆದುಕೊಳ್ಳುತ್ತಾರೆ </blockquote><span class="attribution">ಸಂಜೀವನಾಯಕ ತಿಂಥಣಿ ಸ್ಥಳೀಯ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>