3.50 ಲಕ್ಷ ಕ್ಯುಸೆಕ್ ನೀರು: ಆಲಮಟ್ಟಿ ಜಲಾಶಯಕ್ಕೆ 3.50 ಲಕ್ಷ ಕ್ಯುಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಇದರಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಶನಿವಾರ ಬೆಳಿಗ್ಗೆ 11ಕ್ಕೆ 3.50 ಲಕ್ಷ ಕ್ಯುಸೆಕ್ ಗೆ ಏರಿಕೆಯಾಗಲಿದೆ. ಇದರಿಂದ ನದಿ ಅಕ್ಕಪಕ್ಕದ ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗಲಿದೆ.