ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 2011ರಲ್ಲಿ ಕಡೇಚೂರು–ಬಾಡಿಯಾಳ, ಶೆಟ್ಟಿಹಳ್ಳಿಯಲ್ಲಿನ ರೈತರಿಂದ ಸುಮಾರು 3,232.22 ಎಕರೆ ಭೂಮಿಯನ್ನು ಕೈಗಾರಿಕಾಅಭಿವೃದ್ಧಿ ಮಂಡಳಿಯು ಸ್ವಾಧೀನ ಪಡಿಸಿಕೊಂಡಿತ್ತು. ಇದೀಗ ಹೆಚ್ಚುವರಿಯಾಗಿ ಮತ್ತೆ 3,300 ಎಕರೆ ಭೂಮಿ ಪಡೆಯಲು ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಈ ನಡೆಗೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣವನ್ನು ಬೇಕಾದರೂ ನೀಡುತ್ತೇವೆ, ಆದರೆ, ಒಂದಿಂಚೂಭೂಮಿ ಮಾತ್ರ ಕೈಗಾರಿಕೆಗಳನ್ನು ಸ್ಥಾಪಿಸಲು ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.