ಹಿಂಗಂತ ಹೇಳಿದವರು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್. ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅವರು,‘ಕಚೇರಿ, ಸಭೆ–ಸಮಾರಂಭ ಸೇರಿದಂತೆ ಎಲ್ಲಿಗೇ ಹೋದರೂ ಮೊದಲು ಅಂತರ ಪಾಲಿಸುತ್ತೇನೆ. ಕಡ್ಡಾಯವಾಗಿ ಮಾಸ್ಕ್ ಧರಿಸುತ್ತೇನೆ. ಆಗಾಗ ಸ್ಯಾನಿಟೈಸರ್ ಬಳಸುತ್ತೇನೆ. ಈ ಮೂರು ಸೂತ್ರಗಳನ್ನು ಜಿಲ್ಲೆಯ ಜನತೆಯೂ ಪಾಲಿಸಬೇಕು ಎಂದು ಕೋರುತ್ತೇನೆ ಎಂದು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.