<p><strong>ಸುರಪುರ:</strong> ‘ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಮೆಚ್ಚಿನ ಶರಣರಲ್ಲಿ ಚೆನ್ನಯ್ಯ ಒಬ್ಬರು’ ಎಂದು ದೀವಳಗುಡ್ಡದ ಮಾದಾರ ಚೆನ್ನಯ್ಯ ಯುವಕ ಸಂಘದ ಅಧ್ಯಕ್ಷ ಚಂದಪ್ಪ ದೊಡ್ಮನಿ ಹೇಳಿದರು.</p>.<p>ದೀವಳಗುಡ್ಡದ ಮಾದಾರ ಚೆನ್ನಯ್ಯ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯನವರ ಜಯಂತಿ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಚೆನ್ನಯ್ಯನವರು ಅನನ್ಯ ವಚನಕಾರರು. ಬಸವಣ್ಣನವರು ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ ಎಂದು ಚೆನ್ನಯ್ಯನವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು’ ಎಂದು<br />ವಿವರಿಸಿದರು.</p>.<p>‘ಬಸವಣ್ಣ ತಮ್ಮ ವಚನದಲ್ಲಿ ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮಾದಾರ ಚೆನ್ನಯ್ಯನ ಮನೆ ಅಂಬಲಿಯನ್ನುಂಡು ಬೆಳೆದೆನೆಂದು ಹೇಳುತ್ತಾರೆ’ ಎಂದು ತಿಳಿಸಿದರು.</p>.<p>‘ಅಂತಹ ಚೆನ್ನಯ್ಯ ನಮ್ಮ ಕುಲತಿಲಕ. ಅವರನ್ನು ನಾವು ನಿತ್ಯವೂ ಸ್ಮರಿಸಬೇಕು. ಬಸವಾದಿ ಶರಣರ ವಚನಗಳನ್ನು ನಿತ್ಯ ಓದಿ ಅವುಗಳನ್ನು ನಮ್ಮ ಬದುಕಿನಲ್ಲಿಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದರು.</p>.<p>ಭಾಗಪ್ಪ ತೊಳೆನವರ್, ಭೀಮಪ್ಪ ತೊಳೆನವರ್, ಚಂದ್ರಕಾಂತ ಕಟ್ಟಿಮನಿ, ಬಸವರಾಜ ಅಗ್ನಿ, ಪರಶುರಾಮ ಕಟ್ಟಿಮನಿ, ಮಾನಪ್ಪ ಬುಡ್ಡ, ಮಲ್ಲಪ್ಪ ತೊಳೆನವರ್, ಭೀಮಣ್ಣ ದೊಡ್ಮನಿ, ಚಂದಪ್ಪ ಹಿರಗೋಟ್,<br />ಭೀಮಪ್ಪ ಬುಡ್ಡ, ಮಲ್ಲಪ್ಪ ಕಟ್ಟಿಮನಿ, ಅಂಬ್ರೇಶ ಅಕ್ಕರಕಿ ಸತ್ಯಂಪೇಟೆ, ದುರ್ಗಪ್ಪ ಹಿರಗೋಟ್ ಭಾಗವಹಿಸಿದ್ದರು. ರಾಜು ತೊಳೆನವರ್ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಮೆಚ್ಚಿನ ಶರಣರಲ್ಲಿ ಚೆನ್ನಯ್ಯ ಒಬ್ಬರು’ ಎಂದು ದೀವಳಗುಡ್ಡದ ಮಾದಾರ ಚೆನ್ನಯ್ಯ ಯುವಕ ಸಂಘದ ಅಧ್ಯಕ್ಷ ಚಂದಪ್ಪ ದೊಡ್ಮನಿ ಹೇಳಿದರು.</p>.<p>ದೀವಳಗುಡ್ಡದ ಮಾದಾರ ಚೆನ್ನಯ್ಯ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯನವರ ಜಯಂತಿ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಚೆನ್ನಯ್ಯನವರು ಅನನ್ಯ ವಚನಕಾರರು. ಬಸವಣ್ಣನವರು ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ ಎಂದು ಚೆನ್ನಯ್ಯನವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು’ ಎಂದು<br />ವಿವರಿಸಿದರು.</p>.<p>‘ಬಸವಣ್ಣ ತಮ್ಮ ವಚನದಲ್ಲಿ ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮಾದಾರ ಚೆನ್ನಯ್ಯನ ಮನೆ ಅಂಬಲಿಯನ್ನುಂಡು ಬೆಳೆದೆನೆಂದು ಹೇಳುತ್ತಾರೆ’ ಎಂದು ತಿಳಿಸಿದರು.</p>.<p>‘ಅಂತಹ ಚೆನ್ನಯ್ಯ ನಮ್ಮ ಕುಲತಿಲಕ. ಅವರನ್ನು ನಾವು ನಿತ್ಯವೂ ಸ್ಮರಿಸಬೇಕು. ಬಸವಾದಿ ಶರಣರ ವಚನಗಳನ್ನು ನಿತ್ಯ ಓದಿ ಅವುಗಳನ್ನು ನಮ್ಮ ಬದುಕಿನಲ್ಲಿಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದರು.</p>.<p>ಭಾಗಪ್ಪ ತೊಳೆನವರ್, ಭೀಮಪ್ಪ ತೊಳೆನವರ್, ಚಂದ್ರಕಾಂತ ಕಟ್ಟಿಮನಿ, ಬಸವರಾಜ ಅಗ್ನಿ, ಪರಶುರಾಮ ಕಟ್ಟಿಮನಿ, ಮಾನಪ್ಪ ಬುಡ್ಡ, ಮಲ್ಲಪ್ಪ ತೊಳೆನವರ್, ಭೀಮಣ್ಣ ದೊಡ್ಮನಿ, ಚಂದಪ್ಪ ಹಿರಗೋಟ್,<br />ಭೀಮಪ್ಪ ಬುಡ್ಡ, ಮಲ್ಲಪ್ಪ ಕಟ್ಟಿಮನಿ, ಅಂಬ್ರೇಶ ಅಕ್ಕರಕಿ ಸತ್ಯಂಪೇಟೆ, ದುರ್ಗಪ್ಪ ಹಿರಗೋಟ್ ಭಾಗವಹಿಸಿದ್ದರು. ರಾಜು ತೊಳೆನವರ್ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>