ಶಹಾಪುರ (ಯಾದಗಿರಿ): ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಸಿಡಿಲು ಬಡಿದು ಕುರಿಗಾಹಿ ಮತ್ತು ಏಳು ಕುರಿಗಳು ಮೃತಪಟ್ಟಿವೆ.
ಗೋವಿಂದಪ್ಪ ಬಸಲಿಂಗಪ್ಪ (26) ಮೃತ ವ್ಯಕ್ತಿ. ಸಿಡಿಲಿನ ಹೊಡೆತಕ್ಕೆ ಏಳು ಕುರಿಗಳು ಮೃತಪಟ್ಟಿದ್ದು, 10 ಕುರಿಗಳು ಗಾಯಗೊಂಡಿವೆ. ಕುರಿಹಟ್ಟಿಯಲ್ಲಿ 200 ಕುರಿಗಳು ಇದ್ದವು.
ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.