<p>ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ದರ ಮಳೆ ಕಾರಣದಿಂದ ದರ ಏರಿಳಿಕೆಯಾಗುತ್ತಿದೆ. ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ.</p>.<p>ನುಗ್ಗೆಕಾಯಿ ಕೆ.ಜಿಗೆ ₹60, ಶುಂಠಿ ₹60, ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣು ₹5, ಚಿಕ್ಕ ಗಾತ್ರದ 4ಕ್ಕೆ ₹10 ದರ ಇದೆ. ಬೆಳ್ಳೊಳ್ಳಿ ₹60 ಕೇಜಿ ಇದೆ.</p>.<p>ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಗಾಗ ಮಳೆ ಸುರಿಯುತ್ತಿದ್ದು, ರೈತರು ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರದಲ್ಲಿ ಏರಿಳಿತವಾಗುತ್ತಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ.</p>.<p>ಸ್ಥಳೀಯ ಮಟ್ಟದಲ್ಲಿ ತರಕಾರಿ ಲಭ್ಯವಿದ್ದರೂ ಮಾರುಕಟ್ಟೆಗಳಿಗೆ ಆವಕ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ದರ ಏರಿಳಿಕೆಗೆ ಕಾರಣವಾಗಿದೆ. ಟೊಮೆಟೊ, ಸೋರೆಕಾಯಿ ಮಾತ್ರ ಅತಿ ಕಡಿಮೆ ದರದಲ್ಲಿ ಸಿಗುತ್ತಿವೆ. ಉಳಿದಂತೆ ಬೇರೆ ತರಕಾರಿ ದರದಲ್ಲಿ ಹೆಚ್ಚಳವಿದೆ.</p>.<p>ಮಳೆಯಿಂದ ಹಾಳು: ಮಳೆಯಿಂದ ಸೊಪ್ಪುಗಳು ಹಾಳಾಗುತ್ತಿವೆ. ನೀರಿನಾಂಶ ಹೆಚ್ಚಾಗಿ ಸೊಪ್ಪುಗಳು ಕೆಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ ಜಮೀನಿನಿಂದ ತರುವುದನ್ನು ಕಡಿಮೆ ಮಾಡಿದ್ದಾರೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಸ್ಥಾನ ಪಡೆದಿದೆ.ಕುದಿಸಿದ ಒಂದು ಮೆಕ್ಕೆಜೋಳಕ್ಕೆ ₹20 ಇದ್ದರೆ ಮೂರು ತೆಗೆದುಕೊಂಡರೆ ₹50ಗೆ ಸಿಗುತ್ತಿದೆ.</p>.<p>ಸೊಪ್ಪುಗಳ ದರ: ಪಾಲಕ್ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹10, ಸಬ್ಬಸಗಿ ₹10, ರಾಜಗಿರಿ ಸೊಪ್ಪು ₹10, ಮೆಂತ್ಯೆ ₹25 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p>ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣ ಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಬಾಳೆ ಹಣ್ಣು ಡಜನ್ ₹40, ಮಾವಿನ ಹಣ್ಣು ₹40ರಿಂದ 50 ಕೆ.ಜಿ. ಇದೆ. ಕಾಯಿ ₹60 ಕೆ.ಜಿ. ಇದೆ.</p>.<p>****</p>.<p>ತರಕಾರಿ ದರ (₹ ಕೆ.ಜಿಗಳಲ್ಲಿ)</p>.<p>ಟೊಮೆಟೊ;20-15<br />ಬದನೆಕಾಯಿ;50-45<br />ಬೆಂಡೆಕಾಯಿ;40-35<br />ದೊಣ್ಣೆಮೆಣಸಿನಕಾಯಿ;50;45<br />ಆಲೂಗಡ್ಡೆ;20-25<br />ಈರುಳ್ಳಿ;30-25<br />ಎಲೆಕೋಸು;30–25<br />ಹೂಕೋಸು;60-55<br />ಚವಳೆಕಾಯಿ;35–40<br />ಬೀನ್ಸ್; 60-55<br />ಗಜ್ಜರಿ;60-55<br />ಸೌತೆಕಾಯಿ;30-25<br />ಮೂಲಂಗಿ;30-35<br />ಮೆಣಸಿನಕಾಯಿ;40-35<br />ಸೋರೆಕಾಯಿ;15–10<br />ಬಿಟ್ ರೂಟ್;40-45<br />ಹೀರೆಕಾಯಿ;40-45<br />ಹಾಗಲಕಾಯಿ;40-35<br />ತೊಂಡೆಕಾಯಿ;30-35<br />ಅವರೆಕಾಯಿ;60–55</p>.<p>***</p>.<p>ಮಾರುಕಟ್ಟೆಗೆ ಈ ಮೊದಲು 10 ಕ್ಯಾನ್ ತರುತ್ತಿದ್ದ ರೈತರು ಈಗ ಕೇವಲ 5 ಕ್ಯಾನ್ ತರುತ್ತಿದ್ದಾರೆ. ಇದರಿಂದಲೂ ತಕರಾರಿ ಆವಕ ಕಡಿಮೆಯಾಗಿದ್ದು, ದರ ಸಮರಕ್ಕೆ ಕಾರಣವಾಗಿದೆ<br />ಅಬ್ದುಲ್ ಅಮೀದ್, ತರಕಾರಿ ವ್ಯಾಪಾರಿ</p>.<p>***</p>.<p>ರೈತರು ಮಾರುಕಟ್ಟೆಗೆ ತರಕಾರಿ ತರುತ್ತಿಲ್ಲ ಎಂದು ಹೆಚ್ಚಿನ ದರ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿದೆ. ಅಲ್ಲದೇ ಮನೆ ಮನೆಗೆ ಮಹಿಳೆಯರು ತರುವ ಪುಟ್ಟಿ ತರಕಾರಿಯೂ ಹೆಚ್ಚಿನ ದರವಿದೆ ಎಂದು ಕೆಲ ಸೊಪ್ಪುಗಳನ್ನು ತರುತ್ತಿಲ್ಲ<br />ಅನಿತಾ ರಾಜೇಶ, ಗೃಹಿಣಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ದರ ಮಳೆ ಕಾರಣದಿಂದ ದರ ಏರಿಳಿಕೆಯಾಗುತ್ತಿದೆ. ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ.</p>.<p>ನುಗ್ಗೆಕಾಯಿ ಕೆ.ಜಿಗೆ ₹60, ಶುಂಠಿ ₹60, ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣು ₹5, ಚಿಕ್ಕ ಗಾತ್ರದ 4ಕ್ಕೆ ₹10 ದರ ಇದೆ. ಬೆಳ್ಳೊಳ್ಳಿ ₹60 ಕೇಜಿ ಇದೆ.</p>.<p>ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಗಾಗ ಮಳೆ ಸುರಿಯುತ್ತಿದ್ದು, ರೈತರು ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರದಲ್ಲಿ ಏರಿಳಿತವಾಗುತ್ತಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ.</p>.<p>ಸ್ಥಳೀಯ ಮಟ್ಟದಲ್ಲಿ ತರಕಾರಿ ಲಭ್ಯವಿದ್ದರೂ ಮಾರುಕಟ್ಟೆಗಳಿಗೆ ಆವಕ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ದರ ಏರಿಳಿಕೆಗೆ ಕಾರಣವಾಗಿದೆ. ಟೊಮೆಟೊ, ಸೋರೆಕಾಯಿ ಮಾತ್ರ ಅತಿ ಕಡಿಮೆ ದರದಲ್ಲಿ ಸಿಗುತ್ತಿವೆ. ಉಳಿದಂತೆ ಬೇರೆ ತರಕಾರಿ ದರದಲ್ಲಿ ಹೆಚ್ಚಳವಿದೆ.</p>.<p>ಮಳೆಯಿಂದ ಹಾಳು: ಮಳೆಯಿಂದ ಸೊಪ್ಪುಗಳು ಹಾಳಾಗುತ್ತಿವೆ. ನೀರಿನಾಂಶ ಹೆಚ್ಚಾಗಿ ಸೊಪ್ಪುಗಳು ಕೆಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ ಜಮೀನಿನಿಂದ ತರುವುದನ್ನು ಕಡಿಮೆ ಮಾಡಿದ್ದಾರೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಸ್ಥಾನ ಪಡೆದಿದೆ.ಕುದಿಸಿದ ಒಂದು ಮೆಕ್ಕೆಜೋಳಕ್ಕೆ ₹20 ಇದ್ದರೆ ಮೂರು ತೆಗೆದುಕೊಂಡರೆ ₹50ಗೆ ಸಿಗುತ್ತಿದೆ.</p>.<p>ಸೊಪ್ಪುಗಳ ದರ: ಪಾಲಕ್ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹10, ಸಬ್ಬಸಗಿ ₹10, ರಾಜಗಿರಿ ಸೊಪ್ಪು ₹10, ಮೆಂತ್ಯೆ ₹25 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p>ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣ ಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಬಾಳೆ ಹಣ್ಣು ಡಜನ್ ₹40, ಮಾವಿನ ಹಣ್ಣು ₹40ರಿಂದ 50 ಕೆ.ಜಿ. ಇದೆ. ಕಾಯಿ ₹60 ಕೆ.ಜಿ. ಇದೆ.</p>.<p>****</p>.<p>ತರಕಾರಿ ದರ (₹ ಕೆ.ಜಿಗಳಲ್ಲಿ)</p>.<p>ಟೊಮೆಟೊ;20-15<br />ಬದನೆಕಾಯಿ;50-45<br />ಬೆಂಡೆಕಾಯಿ;40-35<br />ದೊಣ್ಣೆಮೆಣಸಿನಕಾಯಿ;50;45<br />ಆಲೂಗಡ್ಡೆ;20-25<br />ಈರುಳ್ಳಿ;30-25<br />ಎಲೆಕೋಸು;30–25<br />ಹೂಕೋಸು;60-55<br />ಚವಳೆಕಾಯಿ;35–40<br />ಬೀನ್ಸ್; 60-55<br />ಗಜ್ಜರಿ;60-55<br />ಸೌತೆಕಾಯಿ;30-25<br />ಮೂಲಂಗಿ;30-35<br />ಮೆಣಸಿನಕಾಯಿ;40-35<br />ಸೋರೆಕಾಯಿ;15–10<br />ಬಿಟ್ ರೂಟ್;40-45<br />ಹೀರೆಕಾಯಿ;40-45<br />ಹಾಗಲಕಾಯಿ;40-35<br />ತೊಂಡೆಕಾಯಿ;30-35<br />ಅವರೆಕಾಯಿ;60–55</p>.<p>***</p>.<p>ಮಾರುಕಟ್ಟೆಗೆ ಈ ಮೊದಲು 10 ಕ್ಯಾನ್ ತರುತ್ತಿದ್ದ ರೈತರು ಈಗ ಕೇವಲ 5 ಕ್ಯಾನ್ ತರುತ್ತಿದ್ದಾರೆ. ಇದರಿಂದಲೂ ತಕರಾರಿ ಆವಕ ಕಡಿಮೆಯಾಗಿದ್ದು, ದರ ಸಮರಕ್ಕೆ ಕಾರಣವಾಗಿದೆ<br />ಅಬ್ದುಲ್ ಅಮೀದ್, ತರಕಾರಿ ವ್ಯಾಪಾರಿ</p>.<p>***</p>.<p>ರೈತರು ಮಾರುಕಟ್ಟೆಗೆ ತರಕಾರಿ ತರುತ್ತಿಲ್ಲ ಎಂದು ಹೆಚ್ಚಿನ ದರ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿದೆ. ಅಲ್ಲದೇ ಮನೆ ಮನೆಗೆ ಮಹಿಳೆಯರು ತರುವ ಪುಟ್ಟಿ ತರಕಾರಿಯೂ ಹೆಚ್ಚಿನ ದರವಿದೆ ಎಂದು ಕೆಲ ಸೊಪ್ಪುಗಳನ್ನು ತರುತ್ತಿಲ್ಲ<br />ಅನಿತಾ ರಾಜೇಶ, ಗೃಹಿಣಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>