<p><strong>ಯಾದಗಿರಿ</strong>: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ನಗರದಲ್ಲಿ ವಿವಿಧ ತರಕಾರಿ ದರ ಹೆಚ್ಚಳವಾಗಿದೆ.</p>.<p>ಕಳೆದ ಎರಡ್ಮೂರು ವಾರಗಳಿಂದ ತರಕಾರಿ ದರ ಹೆಚ್ಚಳವಾಗಿರಲಿಲ್ಲ. ಟೊಮೆಟೊ, ಈರುಳ್ಳಿ ಬೆಲೆ ಅತಿ ಕಡಿಮೆಯಾಗಿತ್ತು. ಆದರೆ, ಈ ವಾರ ಈ ತರಕಾರಿಗಳ ದರ ಏರಿಕೆಯಾಗಿದೆ.</p>.<p>ಮಳೆ ಕಾರಣ ಟೊಮೆಟೊ, ಈರುಳ್ಳಿ ದರ ಜಾಸ್ತಿಯಾಗಿದೆ. ಒಂದು ಕೆಜಿ ಶುಂಠಿ ₹60, ಬೆಳ್ಳೋಳ್ಳಿ ಎರಡು ಗಾತ್ರದಿದ್ದು, ₹100ರಿಂದ 120 ದರವಿದೆ.</p>.<p><strong>ಎಲ್ಲ ತರಕಾರಿ ದರ ಹೆಚ್ಚಳ: </strong>ಎಲ್ಲ ವಿಧಧ ತರಕಾರಿ ದರ ₹10ರಿಂದ ₹20 ದರ ಹೆಚ್ಚಳವಾಗಿದೆ. ಸೊಪ್ಪುಗಳ ದರ ಮಾತ್ರ ಯಥಾಸ್ಥಿತಿ ಮುಂದುವರಿದಿದೆ.</p>.<p>ನಗರದ ರೈಲ್ವೆ ಸ್ಟೇಷನ್ ರಸ್ತೆ, ಮಹಾತ್ಮ ಗಾಂಧಿ ಮಾರುಕಟ್ಟೆ, ವನಕೇರಿ ಬಡಾವಣೆ ಮಾರುಕಟ್ಟೆ ಸೇರಿದಂತೆ ತಳ್ಳುಗಾಡಿ ಮತ್ತು ಮನೆ ಮನೆಗೆ ತರುವ ಪುಟ್ಟಿ ತರಕಾರಿ ದರವೂ ಹೆಚ್ಚಳವಾಗಿದೆ.</p>.<p>ಹವಾಮಾನ ವೈಪರೀತ್ಯ ಕಾರಣದಿಂದ ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಲ್ಲದೇ ತುಂತುರು ಮಳೆ ಕೂಡ ಆಗುತ್ತಿದೆ. ಇದರಿಂದ ತರಕಾರಿ ಬಿಡಿಸಲು ರೈತರಿಗೆ ಸಮಸ್ಯೆ ಆಗಿದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬಾರದ ಕಾರಣ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p>ನಗರಕ್ಕೆ ಗ್ರಾಮಾಂತರ ಭಾಗ, ಶಹಾಪುರ ತಾಲ್ಲೂಕಿನ ದೋರನಹಳ್ಳಿ ಸೇರಿದಂತೆ ವಿವಿಧ ಕಡೆ ತರಕಾರಿ ಆವಕ ಆಗಮಿಸುತ್ತದೆ. ಇಲ್ಲಿಂದ ಬರುವ ತರಕಾರಿ ತಡವಾದರೆ ಮಾತ್ರ ಮಾರುಕಟ್ಟೆಗಳಲ್ಲಿ ದರ ಏರುಪೇರಾಗುತ್ತದೆ.</p>.<p><strong>ಸೊಪ್ಪುಗಳ ದರ: </strong>ಕೆಲ ವಾರಗಳಿಂದ ಸೊಪ್ಪುಗಳ ದರ ಹೆಚ್ಚು ಏರಿಕೆಯಾಗಿಲ್ಲ. ಆದರೆ, ಕೆಲವೊಂದು ಸೊಪ್ಪು ₹20ಕ್ಕೆ ಮೂರು ಕಟ್ಟು ಸೊಪ್ಪು ದರ ನಿಗದಿಯಾಗಿದೆ. ಮೆಂತೆ ಸೊಪ್ಪುಗೆ ಹೆಚ್ಚಿನ ದರವಿದೆ.</p>.<p>ಮೆಂತೆ ಸೊಪ್ಪು ದೊಡ್ಡ ಗಾತ್ರದು ₹20–25, ಪಾಲಕ್ ಸೊಪ್ಪು ಒಂದು ಕಟ್ಟು ₹5, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಒಂದು ಕಟ್ಟು ₹ 20ಗೆ ಮೂರು ಸೊಪ್ಪು, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಸೊಪ್ಪು ಒಂದು ಕಟ್ಟು ₹20–25 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಇದೆ. ಮಳೆ ಆಗಾಗ ಸುರಿಯುತ್ತಿರುವ ಕಾರಣ ಸೊಪ್ಪುಗಳ ಬೆಲೆ ಹೆಚ್ಚಳವಾಗಿಲ್ಲ.</p>.<p><strong>ಹಣ್ಣುಗಳ ದರ; </strong>ಸದ್ಯ ಮಾರುಕಟ್ಟೆಯಲ್ಲಿ ಸೇಬು ಹಣ್ಣು ಕಡಿಮೆ ದರವಿದ್ದು, ಹೆಚ್ಚು ಆವಕ ಇದೆ. ದೊಡ್ಡ ಗಾತ್ರದ್ದು ₹100 ನಾಲ್ಕು, ಚಿಕ್ಕ ಗಾತ್ರದು ₹20 ದರ ಇದೆ. ಪಚ್ಚೆ ಬಾಳೆಹಣ್ಣು ₹40 ಡಜನ್, ಏಲಕ್ಕಿ ಬಾಳೆ ₹50 ಕೆಜಿ ಇದೆ. ಪೇರಲ ₹40 ಕೆಜಿ, ದಾಳಿಂಬೆ ₹160ರಿಂದ 180 ಕೆಜಿ ಇದೆ.</p>.<p>***</p>.<p><strong>ಪಟ್ಟಿ: ತರಕಾರಿ ದರ(ಪ್ರತಿ ಕೆ.ಜಿಗೆ ₹ಗಳಲ್ಲಿ)</strong><br />ಟೊಮೆಟೊ; 30-35<br />ಬದನೆಕಾಯಿ;55–60<br />ಬೆಂಡೆಕಾಯಿ; 60–50<br />ದೊಣ್ಣೆಮೆಣಸಿನಕಾಯಿ; 40–50<br />ಆಲೂಗಡ್ಡೆ; 30-35<br />ಈರುಳ್ಳಿ; 30–25<br />ಎಲೆಕೋಸು; 40–35<br />ಹೂಕೋಸು; 60–50<br />ಚವಳೆಕಾಯಿ; 65–70<br />ಬೀನ್ಸ್; 70–60<br />ಗಜ್ಜರಿ; 70-80<br />ಸೌತೆಕಾಯಿ; 60–50<br />ಮೂಲಂಗಿ; 40-35<br />ಮೆಣಸಿನಕಾಯಿ; 40-45<br />ಸೋರೆಕಾಯಿ; 25–30<br />ಬಿಟ್ರೂಟ್; 60-55<br />ಹೀರೆಕಾಯಿ; 60-70<br />ಹಾಗಲಕಾಯಿ; 50-55<br />ತೊಂಡೆಕಾಯಿ; 55-50<br />ಅವರೆಕಾಯಿ; 50–45</p>.<p>***</p>.<p>ತರಕಾರಿ ಆವಕ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದ ನಮಗೂ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ₹5ರಿಂದ 10 ದರ ಏರಿಕೆ ಅನಿವಾರ್ಯವಾಗಿದೆ.<br /><em><strong>-ಅಕ್ಬರ್, ತರಕಾರಿ ವ್ಯಾಪಾರಿ</strong></em></p>.<p>***</p>.<p>ಮಳೆ ಕಾರಣದಿಂದ ತರಕಾರಿ ಬಂದಿಲ್ಲ. ಹೀಗಾಗಿ ಎಲ್ಲ ವಿವಿಧ ತರಕಾರಿ ದರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿದ್ದು, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.<br /><em><strong>-ಭಾಗಣ್ಣ ಅಲ್ಲಿಪುರ, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ನಗರದಲ್ಲಿ ವಿವಿಧ ತರಕಾರಿ ದರ ಹೆಚ್ಚಳವಾಗಿದೆ.</p>.<p>ಕಳೆದ ಎರಡ್ಮೂರು ವಾರಗಳಿಂದ ತರಕಾರಿ ದರ ಹೆಚ್ಚಳವಾಗಿರಲಿಲ್ಲ. ಟೊಮೆಟೊ, ಈರುಳ್ಳಿ ಬೆಲೆ ಅತಿ ಕಡಿಮೆಯಾಗಿತ್ತು. ಆದರೆ, ಈ ವಾರ ಈ ತರಕಾರಿಗಳ ದರ ಏರಿಕೆಯಾಗಿದೆ.</p>.<p>ಮಳೆ ಕಾರಣ ಟೊಮೆಟೊ, ಈರುಳ್ಳಿ ದರ ಜಾಸ್ತಿಯಾಗಿದೆ. ಒಂದು ಕೆಜಿ ಶುಂಠಿ ₹60, ಬೆಳ್ಳೋಳ್ಳಿ ಎರಡು ಗಾತ್ರದಿದ್ದು, ₹100ರಿಂದ 120 ದರವಿದೆ.</p>.<p><strong>ಎಲ್ಲ ತರಕಾರಿ ದರ ಹೆಚ್ಚಳ: </strong>ಎಲ್ಲ ವಿಧಧ ತರಕಾರಿ ದರ ₹10ರಿಂದ ₹20 ದರ ಹೆಚ್ಚಳವಾಗಿದೆ. ಸೊಪ್ಪುಗಳ ದರ ಮಾತ್ರ ಯಥಾಸ್ಥಿತಿ ಮುಂದುವರಿದಿದೆ.</p>.<p>ನಗರದ ರೈಲ್ವೆ ಸ್ಟೇಷನ್ ರಸ್ತೆ, ಮಹಾತ್ಮ ಗಾಂಧಿ ಮಾರುಕಟ್ಟೆ, ವನಕೇರಿ ಬಡಾವಣೆ ಮಾರುಕಟ್ಟೆ ಸೇರಿದಂತೆ ತಳ್ಳುಗಾಡಿ ಮತ್ತು ಮನೆ ಮನೆಗೆ ತರುವ ಪುಟ್ಟಿ ತರಕಾರಿ ದರವೂ ಹೆಚ್ಚಳವಾಗಿದೆ.</p>.<p>ಹವಾಮಾನ ವೈಪರೀತ್ಯ ಕಾರಣದಿಂದ ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಲ್ಲದೇ ತುಂತುರು ಮಳೆ ಕೂಡ ಆಗುತ್ತಿದೆ. ಇದರಿಂದ ತರಕಾರಿ ಬಿಡಿಸಲು ರೈತರಿಗೆ ಸಮಸ್ಯೆ ಆಗಿದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬಾರದ ಕಾರಣ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p>ನಗರಕ್ಕೆ ಗ್ರಾಮಾಂತರ ಭಾಗ, ಶಹಾಪುರ ತಾಲ್ಲೂಕಿನ ದೋರನಹಳ್ಳಿ ಸೇರಿದಂತೆ ವಿವಿಧ ಕಡೆ ತರಕಾರಿ ಆವಕ ಆಗಮಿಸುತ್ತದೆ. ಇಲ್ಲಿಂದ ಬರುವ ತರಕಾರಿ ತಡವಾದರೆ ಮಾತ್ರ ಮಾರುಕಟ್ಟೆಗಳಲ್ಲಿ ದರ ಏರುಪೇರಾಗುತ್ತದೆ.</p>.<p><strong>ಸೊಪ್ಪುಗಳ ದರ: </strong>ಕೆಲ ವಾರಗಳಿಂದ ಸೊಪ್ಪುಗಳ ದರ ಹೆಚ್ಚು ಏರಿಕೆಯಾಗಿಲ್ಲ. ಆದರೆ, ಕೆಲವೊಂದು ಸೊಪ್ಪು ₹20ಕ್ಕೆ ಮೂರು ಕಟ್ಟು ಸೊಪ್ಪು ದರ ನಿಗದಿಯಾಗಿದೆ. ಮೆಂತೆ ಸೊಪ್ಪುಗೆ ಹೆಚ್ಚಿನ ದರವಿದೆ.</p>.<p>ಮೆಂತೆ ಸೊಪ್ಪು ದೊಡ್ಡ ಗಾತ್ರದು ₹20–25, ಪಾಲಕ್ ಸೊಪ್ಪು ಒಂದು ಕಟ್ಟು ₹5, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಒಂದು ಕಟ್ಟು ₹ 20ಗೆ ಮೂರು ಸೊಪ್ಪು, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಸೊಪ್ಪು ಒಂದು ಕಟ್ಟು ₹20–25 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಇದೆ. ಮಳೆ ಆಗಾಗ ಸುರಿಯುತ್ತಿರುವ ಕಾರಣ ಸೊಪ್ಪುಗಳ ಬೆಲೆ ಹೆಚ್ಚಳವಾಗಿಲ್ಲ.</p>.<p><strong>ಹಣ್ಣುಗಳ ದರ; </strong>ಸದ್ಯ ಮಾರುಕಟ್ಟೆಯಲ್ಲಿ ಸೇಬು ಹಣ್ಣು ಕಡಿಮೆ ದರವಿದ್ದು, ಹೆಚ್ಚು ಆವಕ ಇದೆ. ದೊಡ್ಡ ಗಾತ್ರದ್ದು ₹100 ನಾಲ್ಕು, ಚಿಕ್ಕ ಗಾತ್ರದು ₹20 ದರ ಇದೆ. ಪಚ್ಚೆ ಬಾಳೆಹಣ್ಣು ₹40 ಡಜನ್, ಏಲಕ್ಕಿ ಬಾಳೆ ₹50 ಕೆಜಿ ಇದೆ. ಪೇರಲ ₹40 ಕೆಜಿ, ದಾಳಿಂಬೆ ₹160ರಿಂದ 180 ಕೆಜಿ ಇದೆ.</p>.<p>***</p>.<p><strong>ಪಟ್ಟಿ: ತರಕಾರಿ ದರ(ಪ್ರತಿ ಕೆ.ಜಿಗೆ ₹ಗಳಲ್ಲಿ)</strong><br />ಟೊಮೆಟೊ; 30-35<br />ಬದನೆಕಾಯಿ;55–60<br />ಬೆಂಡೆಕಾಯಿ; 60–50<br />ದೊಣ್ಣೆಮೆಣಸಿನಕಾಯಿ; 40–50<br />ಆಲೂಗಡ್ಡೆ; 30-35<br />ಈರುಳ್ಳಿ; 30–25<br />ಎಲೆಕೋಸು; 40–35<br />ಹೂಕೋಸು; 60–50<br />ಚವಳೆಕಾಯಿ; 65–70<br />ಬೀನ್ಸ್; 70–60<br />ಗಜ್ಜರಿ; 70-80<br />ಸೌತೆಕಾಯಿ; 60–50<br />ಮೂಲಂಗಿ; 40-35<br />ಮೆಣಸಿನಕಾಯಿ; 40-45<br />ಸೋರೆಕಾಯಿ; 25–30<br />ಬಿಟ್ರೂಟ್; 60-55<br />ಹೀರೆಕಾಯಿ; 60-70<br />ಹಾಗಲಕಾಯಿ; 50-55<br />ತೊಂಡೆಕಾಯಿ; 55-50<br />ಅವರೆಕಾಯಿ; 50–45</p>.<p>***</p>.<p>ತರಕಾರಿ ಆವಕ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದ ನಮಗೂ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ₹5ರಿಂದ 10 ದರ ಏರಿಕೆ ಅನಿವಾರ್ಯವಾಗಿದೆ.<br /><em><strong>-ಅಕ್ಬರ್, ತರಕಾರಿ ವ್ಯಾಪಾರಿ</strong></em></p>.<p>***</p>.<p>ಮಳೆ ಕಾರಣದಿಂದ ತರಕಾರಿ ಬಂದಿಲ್ಲ. ಹೀಗಾಗಿ ಎಲ್ಲ ವಿವಿಧ ತರಕಾರಿ ದರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿದ್ದು, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.<br /><em><strong>-ಭಾಗಣ್ಣ ಅಲ್ಲಿಪುರ, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>