2009-10ನೇ ಸಾಲಿನ ಇಂದಿರಾ ಅವಾಜ್ ಯೋಜನೆಯ ಹೊಸಕೇರಾ ಗ್ರಾ.ಪಂ.ವ್ಯಾಪ್ತಿಯ ರಾಜಾಪುರ(ಬಿ) ಗ್ರಾಮದ ಆಯ್ಕೆಯಾದ ಫಲಾನುಭವಿಯ ತಲಾ ₹ 10 ಸಾವಿರದ ಎರಡು ಚೆಕ್ ಅನ್ನು ಬೇರೊಬ್ಬ ಫಲಾನುಭವಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಅಂದಿನ ಗ್ರಾಮ ಪಂಚಾಯಿತಿ ಸದಸ್ಯೆ ಮರೆಮ್ಮ, ಪಿಡಿಒ ಜ್ಞಾನಮಿತ್ರ ಹಾಗೂ ಕಂಪ್ಯೂಟರ್ ಆಪರೇಟರ್ ಭೀಮಾಶಂಕರ ವಿರುದ್ಧ ಅಂದಿನ ತಾ.ಪಂ.ಇಒ ಭೀಮರಾಯ ಕವಾಲ್ದಾರ ಅವರು 2011 ಡಿಸೆಂಬರ್ 23ರಂದು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.