<p><strong>ಯರಗೋಳ:</strong> ಯಡ್ಡಳ್ಳಿ-ಹೊನಗೇರಾ ಮಧ್ಯದಲ್ಲಿರುವ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಸೋಮವಾರ ಶಾಸಕ ಶರಣಗೌಡ ಕಂದಕೂರ ವೀಕ್ಷಣೆ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗುಣಮಟ್ಟದ ಕಾಮಗಾರಿ ಕಾಪಾಡಿಕೊಂಡು ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>2019ನೇ ವರ್ಷದಲ್ಲಿ ಯಡ್ಡಳ್ಳಿ, ಗೊಂದಡಗಿ, ಕೌಳೂರು, ಕಂದಕೂರ್ ಮತ್ತು ಕಾಳಬೆಳಗುಂದಿಗೆ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿವೆ. ಈಗಾಗಲೇ ಯಡ್ಡಳ್ಳಿ ಮತ್ತು ಗೊಂದಡಗಿ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಂದಕೂರ, ಕಾಳಬೆಳಗುಂದಿ ಹಾಗೂ ಕೌಳೂರು ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.</p>.<p>ಗಾಜರಕೋಟ ಗ್ರಾಮದಲ್ಲಿ 33-ಕೆ.ವಿ.ಎ ವಿದ್ಯುತ್ ಉಪಕೇಂದ್ರವಿದ್ದು, ಅದನ್ನು 110-ಕೆ.ವಿ.ಎ ಗೆ ಉನ್ನತೀಕರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದು, ಬರುವ ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡರೇ ಮುಂದಿನ 25-30 ವರ್ಷಗಳ ಕಾಲ ವಿದ್ಯುತ್ ಅಭಾವವಿ ಇರುವುದಿಲ್ ಎಂದು ತಿಳಿಸಿದರು.</p>.<p>ಅಧಿಕಾರಿಗಳಾದ ರಾಜೇಶ ಹಿಪ್ಪರಿಗಿ, ಬಸಂತಕುಮಾರ, ಗುತ್ತಿಗೆದಾರರಾದ ದಯಾನಂದ, ಹತ್ತಿಕುಣ ಪಂಚಾಯ್ತಿ ಗ್ರಾಮೀಣಾಧಿಕಾರಿ ವಿಜಯಲಕ್ಷ್ಮೀ ಮತ್ತು ಹೊನಗೇರಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮದ ಮುಖಂಡರಾದ ಭೋಜಣ್ಣಗೌಡ ಯಡ್ಡಳ್ಳಿ, ಈಶಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ:</strong> ಯಡ್ಡಳ್ಳಿ-ಹೊನಗೇರಾ ಮಧ್ಯದಲ್ಲಿರುವ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಸೋಮವಾರ ಶಾಸಕ ಶರಣಗೌಡ ಕಂದಕೂರ ವೀಕ್ಷಣೆ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗುಣಮಟ್ಟದ ಕಾಮಗಾರಿ ಕಾಪಾಡಿಕೊಂಡು ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>2019ನೇ ವರ್ಷದಲ್ಲಿ ಯಡ್ಡಳ್ಳಿ, ಗೊಂದಡಗಿ, ಕೌಳೂರು, ಕಂದಕೂರ್ ಮತ್ತು ಕಾಳಬೆಳಗುಂದಿಗೆ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿವೆ. ಈಗಾಗಲೇ ಯಡ್ಡಳ್ಳಿ ಮತ್ತು ಗೊಂದಡಗಿ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಂದಕೂರ, ಕಾಳಬೆಳಗುಂದಿ ಹಾಗೂ ಕೌಳೂರು ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.</p>.<p>ಗಾಜರಕೋಟ ಗ್ರಾಮದಲ್ಲಿ 33-ಕೆ.ವಿ.ಎ ವಿದ್ಯುತ್ ಉಪಕೇಂದ್ರವಿದ್ದು, ಅದನ್ನು 110-ಕೆ.ವಿ.ಎ ಗೆ ಉನ್ನತೀಕರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದು, ಬರುವ ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡರೇ ಮುಂದಿನ 25-30 ವರ್ಷಗಳ ಕಾಲ ವಿದ್ಯುತ್ ಅಭಾವವಿ ಇರುವುದಿಲ್ ಎಂದು ತಿಳಿಸಿದರು.</p>.<p>ಅಧಿಕಾರಿಗಳಾದ ರಾಜೇಶ ಹಿಪ್ಪರಿಗಿ, ಬಸಂತಕುಮಾರ, ಗುತ್ತಿಗೆದಾರರಾದ ದಯಾನಂದ, ಹತ್ತಿಕುಣ ಪಂಚಾಯ್ತಿ ಗ್ರಾಮೀಣಾಧಿಕಾರಿ ವಿಜಯಲಕ್ಷ್ಮೀ ಮತ್ತು ಹೊನಗೇರಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮದ ಮುಖಂಡರಾದ ಭೋಜಣ್ಣಗೌಡ ಯಡ್ಡಳ್ಳಿ, ಈಶಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>