ಅಂತಿಮ ದರ್ಶನ: ಶಾಸಕರ ನಿವಾಸದಲ್ಲಿ ಶನಿವಾರ ಸಂಜೆಯಿಂದ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಅರಸು ಮನೆತನದ ಡಾ. ರಾಜಾ ಕೃಷ್ಣಪ್ಪ ನಾಯಕ, ರಾಜಾ ಲಕ್ಷ್ಮಿನಾರಾಯಣ ನಾಯಕ, ದೇವಪುರ ಜಡೇಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯರು, ಯಾದಗಿರಿಯ ಮಾಜಿ ಶಾಸಕ ಡಾ. ವೀರಬಸಂತ ರೆಡ್ಡಿ ಮುದ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಡಿವೈಎಸ್ಪಿ ಡಾ. ದೇವರಾಜ್, ತಹಶೀಲ್ದಾರಾದ ಸುಬ್ಬಣ್ಣ ಜಮಖಂಡಿ, ಅಶೋಕ ಸುರಪುರಕರ್, ರಾಜಕೀಯ ಮುಖಂಡರಾದ ಡಾ. ಸುರೇಶ ಸಜ್ಜನ್, ಬಸವರಾಜಸ್ವಾಮಿ ಸ್ಥಾವರಮಠ, ಎಚ್.ಸಿ. ಪಾಟೀಲ್, ಯಲ್ಲಪ್ಪ ಕುರಕುಂದಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು, ಗಣ್ಯರು, ಶಾಸಕರ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.