‘ಆರೋಪಿಗಳು ಯಾದಗಿರಿ, ಬಾಗಲಕೋಟೆ, ಬಳ್ಳಾರಿ, ಸವದತ್ತಿ ಸೇರಿದಂತೆ ವಿವಿಧ ಕಡೆ ಕಳವು ಮಾಡುತ್ತಿದ್ದರು. ಕಾರಿನ ಬಾಗಿಲು ಬಳಿಯ ಸ್ಕ್ರೂ ತೆಗೆದು ಕಳವು ಮಾಡಿದ್ದ ಮೊಬೈಲ್ಗಳನ್ನು ಅಲ್ಲಿ ಸಂಗ್ರಹಿಸಿ ಹೈದರಾಬಾದ್ನಲ್ಲಿ ಮಾರಾಟ ಮಾಡುತ್ತಿದ್ದರು. ಜನಸಂದಣಿ ಸ್ಥಳದಲ್ಲಿ ಸಣ್ಣ ಮಕ್ಕಳನ್ನುಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸುತ್ತಿದ್ದರು. ನಂತರ ₹500, ₹1,000 ನೀಡುತ್ತಿದ್ದರು’ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.