<p><strong>ಸುರಪುರ: </strong>ನಗರದ ಉದ್ಯಮಿ ಜೈನ್ ಸಮುದಾಯದ ಭರತಕುಮಾರ ಜೈನ್ ಮತ್ತು ಗುಣವಂತಿ ದಂಪತಿಯ ಪುತ್ರಿ 24 ವರ್ಷದ ಯುವತಿ ಮೋನಿಕಾ ಜೈನ್ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.</p>.<p>ಈಗಾಗಲೇ ಸನ್ಯಾಸಾಶ್ರಮದ ವಿಧಿ ವಿಧಾನಗಳು ನಡೆದಿವೆ. ಜನವರಿ 11 ರಂದು ನಗರದ ಕುಂತುನಾಥ ಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ಸಕರತ್ವ ಪೂಜೆ, ಅರಿಷಿಣ, ತೊಟ್ಟಿಲೋತ್ಸವ ಜರುಗಲಿದೆ.</p>.<p>ಸಂಜೆ ದೀಕ್ಷಾರ್ಥಿಗೆ ಮನೆಯಿಂದ ದೇವಸ್ಥಾನದವರೆಗೆ ಕುದುರೆ ಮೇಲೆ ಮೆರವಣಿಗೆ ನಂತರ ದೇವಸ್ಥಾನದಲ್ಲಿ ಮೋನಿಕಾಳಿಂದ ದೇವರಿಗೆ ವಿಶೇಷ ಪೂಜೆ, ಆರತಿ ನಡೆಯಲಿದೆ.</p>.<p>ಜನವರಿ 12 ರಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೀಕ್ಷಾರ್ಥಿಯ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರಂಗಲಾಗಿಯೋ ತಾಂಡಿ ನಂತರ ದೀಕ್ಷಾರ್ಥಿ ಭಿಕ್ಷೆ ಕಾರ್ಯಕ್ರಮ, ಸಂಜೆ 7 ಗಂಟೆಗೆ ವಿಜಯ ಸಮಾರೋಪಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.</p>.<p>ಫೆಬ್ರುವರಿ 1 ರಂದು ರಾಜಸ್ಥಾನದ ಜಾಲೂರು ಜಿಲ್ಲೆಯ ಬಾಕ್ರಾರೋಡ್ ತೀರ್ಥ ಎಂಬಲ್ಲಿ ಆಚಾರ್ಯ ಜಯಾನಂದ ಸೂರೇಶ್ವರಾಜಿ ಮತ್ತು ಮಣಿ ಪ್ರಭಾಶ್ರೀಜಿ ಅವರಿಂದ ದೀಕ್ಷಾ ಕಾರ್ಯ ಜರುಗಲಿದೆ.</p>.<p>ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡಿರುವ ಮೋನಿಕಾಳಿಗೆ ಅಜ್ಜಿ, ತಾಯಿ ಗುಣವಂತಿ, ತಂದೆ ಭರತಕುಮಾರ, ಅಣ್ಣ ಮೋಹಿತ್ ಇದ್ದಾರೆ.</p>.<p>ವ್ಯಾಸಂಗದಲ್ಲಿ ಮುಂದುವರಿಯಲು ಆಸಕ್ತಿ ತೋರದೆ, ಐಹಿಕ ಭೋಗವನ್ನು ತಿರಸ್ಕರಿಸಿ ಆಧ್ಯಾತ್ಮ ಕ್ಷೇತ್ರದ ಕಡೆ ಒಲವು ಬೆಳೆಸಿಕೊಂಡಿದ್ದಾರೆ.</p>.<p>ಸತತ ಎರಡು ವರ್ಷಗಳಿಂದ ಪ್ರತಿ ದಿನ ಯೋಗ, ಧ್ಯಾನ, ಆಧ್ಯಾತ್ಮ ಗ್ರಂಥಗಳ ಪಠಣ ದಿನಕ್ಕೆ 8 ರಿಂದ 10 ಗಂಟೆ ಜೈನ್ ಧರ್ಮದ ಆಗಮ ಶಾಸ್ತ್ರ ಹಾಗೂ ಗ್ರಂಥಗಳ ಪಠಣದಲ್ಲಿ ತೊಡಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ನಗರದ ಉದ್ಯಮಿ ಜೈನ್ ಸಮುದಾಯದ ಭರತಕುಮಾರ ಜೈನ್ ಮತ್ತು ಗುಣವಂತಿ ದಂಪತಿಯ ಪುತ್ರಿ 24 ವರ್ಷದ ಯುವತಿ ಮೋನಿಕಾ ಜೈನ್ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.</p>.<p>ಈಗಾಗಲೇ ಸನ್ಯಾಸಾಶ್ರಮದ ವಿಧಿ ವಿಧಾನಗಳು ನಡೆದಿವೆ. ಜನವರಿ 11 ರಂದು ನಗರದ ಕುಂತುನಾಥ ಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ಸಕರತ್ವ ಪೂಜೆ, ಅರಿಷಿಣ, ತೊಟ್ಟಿಲೋತ್ಸವ ಜರುಗಲಿದೆ.</p>.<p>ಸಂಜೆ ದೀಕ್ಷಾರ್ಥಿಗೆ ಮನೆಯಿಂದ ದೇವಸ್ಥಾನದವರೆಗೆ ಕುದುರೆ ಮೇಲೆ ಮೆರವಣಿಗೆ ನಂತರ ದೇವಸ್ಥಾನದಲ್ಲಿ ಮೋನಿಕಾಳಿಂದ ದೇವರಿಗೆ ವಿಶೇಷ ಪೂಜೆ, ಆರತಿ ನಡೆಯಲಿದೆ.</p>.<p>ಜನವರಿ 12 ರಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೀಕ್ಷಾರ್ಥಿಯ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರಂಗಲಾಗಿಯೋ ತಾಂಡಿ ನಂತರ ದೀಕ್ಷಾರ್ಥಿ ಭಿಕ್ಷೆ ಕಾರ್ಯಕ್ರಮ, ಸಂಜೆ 7 ಗಂಟೆಗೆ ವಿಜಯ ಸಮಾರೋಪಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.</p>.<p>ಫೆಬ್ರುವರಿ 1 ರಂದು ರಾಜಸ್ಥಾನದ ಜಾಲೂರು ಜಿಲ್ಲೆಯ ಬಾಕ್ರಾರೋಡ್ ತೀರ್ಥ ಎಂಬಲ್ಲಿ ಆಚಾರ್ಯ ಜಯಾನಂದ ಸೂರೇಶ್ವರಾಜಿ ಮತ್ತು ಮಣಿ ಪ್ರಭಾಶ್ರೀಜಿ ಅವರಿಂದ ದೀಕ್ಷಾ ಕಾರ್ಯ ಜರುಗಲಿದೆ.</p>.<p>ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡಿರುವ ಮೋನಿಕಾಳಿಗೆ ಅಜ್ಜಿ, ತಾಯಿ ಗುಣವಂತಿ, ತಂದೆ ಭರತಕುಮಾರ, ಅಣ್ಣ ಮೋಹಿತ್ ಇದ್ದಾರೆ.</p>.<p>ವ್ಯಾಸಂಗದಲ್ಲಿ ಮುಂದುವರಿಯಲು ಆಸಕ್ತಿ ತೋರದೆ, ಐಹಿಕ ಭೋಗವನ್ನು ತಿರಸ್ಕರಿಸಿ ಆಧ್ಯಾತ್ಮ ಕ್ಷೇತ್ರದ ಕಡೆ ಒಲವು ಬೆಳೆಸಿಕೊಂಡಿದ್ದಾರೆ.</p>.<p>ಸತತ ಎರಡು ವರ್ಷಗಳಿಂದ ಪ್ರತಿ ದಿನ ಯೋಗ, ಧ್ಯಾನ, ಆಧ್ಯಾತ್ಮ ಗ್ರಂಥಗಳ ಪಠಣ ದಿನಕ್ಕೆ 8 ರಿಂದ 10 ಗಂಟೆ ಜೈನ್ ಧರ್ಮದ ಆಗಮ ಶಾಸ್ತ್ರ ಹಾಗೂ ಗ್ರಂಥಗಳ ಪಠಣದಲ್ಲಿ ತೊಡಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>