<p><strong>ಸುರಪುರ: </strong>ನರಸಿಂಹಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.</p>.<p>ರಥವನ್ನು ಹೂ, ತಳಿರುಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪ್ರಾಂಗಣದ ಸುತ್ತಲೂ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ, ಚಿಕ್ಕ ಚಿಕ್ಕ ಮಾವಿನ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಮಂಗಳಾರುತಿ, ನೈವೇದ್ಯ ಜರುಗಿದವು. ಪಂಡಿತ ಹರೇರಾಮಾಚಾರ್ಯ ಪಾಲ್ಮೂರ ಅವರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ ನಡೆಯಿತು. ನಂತರ ಅನ್ನಸಂತರ್ಪಣೆ ಜರುಗಿತು.</p>.<p>ಪ್ರಧಾನ ಅರ್ಚಕರಾದ ಡಾ. ಬಿ.ಆರ್. ಜಾಗೀರದಾರ ಮಾತನಾಡಿ, ‘3 ಶತಮಾನಗಳಿಂದ ನಮ್ಮ ಮನೆತನದವರು ನಿರಂತರವಾಗಿ ಜಯಂತಿ ಆಚರಿಸುತ್ತಿದ್ದೇವೆ. ಲಕ್ಷ್ಮೀ ನರಸಿಂಹಸ್ವಾಮಿ ಉದ್ಭವ ಮೂರ್ತಿಯಾಗಿದ್ದು ಕೇಳಿದ ವರವನ್ನು ಕೊಡುವ ಸ್ವಾಮಿಯಾಗಿದ್ದಾರೆ’ ಎಂದರು.</p>.<p>ಅರ್ಚಕ ಜಯತೀರ್ಥ ಜಾಗೀರದಾರ, ಶ್ರೀನಿವಾಸಾಚಾರ್ಯ ಗುಡಿ, ರಾಘವೇಂದ್ರಾಚಾರ್ಯ ಗುಡಿ, ಕೇಶವ ಗುಡಿ, ವೆಂಕಟೇಶ ಭಕ್ರಿ, ನಾಗರಾಜ ಪಾಲ್ಮೂರ, ರಾಘವೇಂದ್ರ ಭಕ್ರಿ, ರಾಘವೇಂದ್ರ ಬಾಡಿಯಾಳ, ರಾಜಾ ಮುಕುಂದನಾಯಕ, ಶ್ರೀನಿವಾಸ ದರಬಾರಿ, ಅರವಿಂದಕುಮಾರ, ಗುರುರಾಜ , ನರಸಿಂಹ ಭಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ನರಸಿಂಹಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.</p>.<p>ರಥವನ್ನು ಹೂ, ತಳಿರುಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪ್ರಾಂಗಣದ ಸುತ್ತಲೂ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ, ಚಿಕ್ಕ ಚಿಕ್ಕ ಮಾವಿನ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಮಂಗಳಾರುತಿ, ನೈವೇದ್ಯ ಜರುಗಿದವು. ಪಂಡಿತ ಹರೇರಾಮಾಚಾರ್ಯ ಪಾಲ್ಮೂರ ಅವರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ ನಡೆಯಿತು. ನಂತರ ಅನ್ನಸಂತರ್ಪಣೆ ಜರುಗಿತು.</p>.<p>ಪ್ರಧಾನ ಅರ್ಚಕರಾದ ಡಾ. ಬಿ.ಆರ್. ಜಾಗೀರದಾರ ಮಾತನಾಡಿ, ‘3 ಶತಮಾನಗಳಿಂದ ನಮ್ಮ ಮನೆತನದವರು ನಿರಂತರವಾಗಿ ಜಯಂತಿ ಆಚರಿಸುತ್ತಿದ್ದೇವೆ. ಲಕ್ಷ್ಮೀ ನರಸಿಂಹಸ್ವಾಮಿ ಉದ್ಭವ ಮೂರ್ತಿಯಾಗಿದ್ದು ಕೇಳಿದ ವರವನ್ನು ಕೊಡುವ ಸ್ವಾಮಿಯಾಗಿದ್ದಾರೆ’ ಎಂದರು.</p>.<p>ಅರ್ಚಕ ಜಯತೀರ್ಥ ಜಾಗೀರದಾರ, ಶ್ರೀನಿವಾಸಾಚಾರ್ಯ ಗುಡಿ, ರಾಘವೇಂದ್ರಾಚಾರ್ಯ ಗುಡಿ, ಕೇಶವ ಗುಡಿ, ವೆಂಕಟೇಶ ಭಕ್ರಿ, ನಾಗರಾಜ ಪಾಲ್ಮೂರ, ರಾಘವೇಂದ್ರ ಭಕ್ರಿ, ರಾಘವೇಂದ್ರ ಬಾಡಿಯಾಳ, ರಾಜಾ ಮುಕುಂದನಾಯಕ, ಶ್ರೀನಿವಾಸ ದರಬಾರಿ, ಅರವಿಂದಕುಮಾರ, ಗುರುರಾಜ , ನರಸಿಂಹ ಭಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>