<p><strong>ಸುರಪುರ:</strong> ಮನುಷ್ಯನ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತದಿಂದ ಮನಸ್ಸಿಗೆ ಉಲ್ಲಾಸ-ಆನಂದ ಸಿಗುತ್ತದೆ. ಸಂಗೀತಕ್ಕೆ ಜಾತಿ, ಮತ, ಪಂಥ, ಭೇದಭಾವವಿಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣ ಸುಬೇದಾರ್ ಹೇಳಿದರು.</p>.<p>ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿ ಸಗರನಾಡು ಕಲಾ ವೇದಿಕೆ ರುಕ್ಮಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಪದ ಸಂಗೀತಕ್ಕೆ ಜನರ ಮನಸ್ಸನ್ನು ಹಿಡಿದಿಡುವ ಶಕ್ತಿ ಇದೆ. ಜನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿದ್ದು, ಉಳಿಸಿ ಬೆಳೆಸುವ ಕೆಲಸವಾಗಬೇಕು<br />ಎಂದರು.</p>.<p>ಕೇದಾರನಾಥ ಶಾಸ್ತ್ರಿ ಯಾಳಗಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು.</p>.<p>ಶ್ರೀಪಾದ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವಶರಣಯ್ಯಸ್ವಾಮಿ ತಂಡದಿಂದ ಶಾಸ್ತ್ರೀಯ ಸಂಗೀತ, ಮಲ್ಲಯ್ಯಸ್ವಾಮಿ ತಂಡದಿಂದ ತತ್ವ ಪದಗಳು, ಕೆಂಭಾವಿ ಸೋಮನಾಥ ಯಾಳಗಿ ತಂಡದಿಂದ ಜನಪದ ಗೀತೆಗಳ ಕಾರ್ಯಕ್ರಮ<br />ನಡೆಯಿತು.</p>.<p>ಪ್ರಾಣೇಶ ಕುಲಕರ್ಣಿ ತಂಡದಿಂದ ದಾಸವಾಣಿ, ವಿಜಯಲಕ್ಷ್ಮೀ ಯಾದವ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು. ಮೋಹನ ಮಾಳದಕರ, ಸುರೇಶ ಅಂಬೂರೆ, ಚಂದ್ರಹಾಸ ಮಿಟ್ಟಾ, ಮಾನು ಜಗದೀಶ, ರಮೇಶ ಕುಲಕರ್ಣಿ, ಉಮೇಶ ಯಾದವ, ಮಹಾಂತೇಶ ಶಹಾಪುರಕರ, ಲಕ್ಷ್ಮಣ ಆದೋನಿ ಸಂಗೀತ ಸೇವೆ<br />ನೀಡಿದರು.</p>.<p>ಕಲಾವಿದರಾದ ಲಕ್ಷ್ಮಣ ಗುತ್ತೇದಾರ, ಉಷಾ ಕುಲಕರ್ಣಿ, ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ವೇದಿಕೆಯಲ್ಲಿದ್ದರು. ಶಿವುಕುಮಾರ ಮಸ್ಕಿ, ವೆಂಕಟೇಶ ಕುಲಕರ್ಣಿ ಕಾಮನಟಗಿ, ಶಶಿಕಾಂತ ರೆಡ್ಡಿ ಬಾಚಿಮಟ್ಟಿ, ರವಿಕುಮಾರ ಗುತ್ತೇದಾರ್, ಪ್ರಕಾಶ ಕುಲಕರ್ಣಿಗೆ ಸನ್ಮಾನಿಸಲಾಯಿತು. ರಾಘವೇಂದ್ರ ಭಕ್ರಿ ಇದ್ದರು.</p>.<p>ಎಚ್.ರಾಠೋಡ ನಿರೂಪಿಸಿದರು. ರಮೇಶ ಕುಲಕರ್ಣಿ ಸ್ವಾಗತಿಸಿದರು. ಮಲ್ಲಪ್ಪ ಹೂಗಾರ ವಂದಿಸಿದರು. ಸಂಗೀತ ಕಾರ್ಯಕ್ರಮ ನೆರೆದವರು ಮನಸೂರೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ಮನುಷ್ಯನ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತದಿಂದ ಮನಸ್ಸಿಗೆ ಉಲ್ಲಾಸ-ಆನಂದ ಸಿಗುತ್ತದೆ. ಸಂಗೀತಕ್ಕೆ ಜಾತಿ, ಮತ, ಪಂಥ, ಭೇದಭಾವವಿಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣ ಸುಬೇದಾರ್ ಹೇಳಿದರು.</p>.<p>ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿ ಸಗರನಾಡು ಕಲಾ ವೇದಿಕೆ ರುಕ್ಮಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಪದ ಸಂಗೀತಕ್ಕೆ ಜನರ ಮನಸ್ಸನ್ನು ಹಿಡಿದಿಡುವ ಶಕ್ತಿ ಇದೆ. ಜನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿದ್ದು, ಉಳಿಸಿ ಬೆಳೆಸುವ ಕೆಲಸವಾಗಬೇಕು<br />ಎಂದರು.</p>.<p>ಕೇದಾರನಾಥ ಶಾಸ್ತ್ರಿ ಯಾಳಗಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು.</p>.<p>ಶ್ರೀಪಾದ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವಶರಣಯ್ಯಸ್ವಾಮಿ ತಂಡದಿಂದ ಶಾಸ್ತ್ರೀಯ ಸಂಗೀತ, ಮಲ್ಲಯ್ಯಸ್ವಾಮಿ ತಂಡದಿಂದ ತತ್ವ ಪದಗಳು, ಕೆಂಭಾವಿ ಸೋಮನಾಥ ಯಾಳಗಿ ತಂಡದಿಂದ ಜನಪದ ಗೀತೆಗಳ ಕಾರ್ಯಕ್ರಮ<br />ನಡೆಯಿತು.</p>.<p>ಪ್ರಾಣೇಶ ಕುಲಕರ್ಣಿ ತಂಡದಿಂದ ದಾಸವಾಣಿ, ವಿಜಯಲಕ್ಷ್ಮೀ ಯಾದವ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು. ಮೋಹನ ಮಾಳದಕರ, ಸುರೇಶ ಅಂಬೂರೆ, ಚಂದ್ರಹಾಸ ಮಿಟ್ಟಾ, ಮಾನು ಜಗದೀಶ, ರಮೇಶ ಕುಲಕರ್ಣಿ, ಉಮೇಶ ಯಾದವ, ಮಹಾಂತೇಶ ಶಹಾಪುರಕರ, ಲಕ್ಷ್ಮಣ ಆದೋನಿ ಸಂಗೀತ ಸೇವೆ<br />ನೀಡಿದರು.</p>.<p>ಕಲಾವಿದರಾದ ಲಕ್ಷ್ಮಣ ಗುತ್ತೇದಾರ, ಉಷಾ ಕುಲಕರ್ಣಿ, ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ವೇದಿಕೆಯಲ್ಲಿದ್ದರು. ಶಿವುಕುಮಾರ ಮಸ್ಕಿ, ವೆಂಕಟೇಶ ಕುಲಕರ್ಣಿ ಕಾಮನಟಗಿ, ಶಶಿಕಾಂತ ರೆಡ್ಡಿ ಬಾಚಿಮಟ್ಟಿ, ರವಿಕುಮಾರ ಗುತ್ತೇದಾರ್, ಪ್ರಕಾಶ ಕುಲಕರ್ಣಿಗೆ ಸನ್ಮಾನಿಸಲಾಯಿತು. ರಾಘವೇಂದ್ರ ಭಕ್ರಿ ಇದ್ದರು.</p>.<p>ಎಚ್.ರಾಠೋಡ ನಿರೂಪಿಸಿದರು. ರಮೇಶ ಕುಲಕರ್ಣಿ ಸ್ವಾಗತಿಸಿದರು. ಮಲ್ಲಪ್ಪ ಹೂಗಾರ ವಂದಿಸಿದರು. ಸಂಗೀತ ಕಾರ್ಯಕ್ರಮ ನೆರೆದವರು ಮನಸೂರೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>