<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong> ಸೈದಾಪುರ ಹೋಬಳಿ ವ್ಯಾಪ್ತಿಯ ಕಡೇಚೂರು ಗ್ರಾಮಕ್ಕೆ ಬಸ್ಗಳು ಬಾರದ ಕಾರಣ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೂರು ಕಿ.ಮೀ ನಡೆಯಬೇಕಾದಪರಿಸ್ಥಿತಿಯಿದೆ.</p>.<p>ಕಡೇಚೂರಿನಿಂದ ಪಟ್ಟಣದ ವಿದ್ಯಾವರ್ಧಕ ಪೌಢಶಾಲೆ, ಕಾಲೇಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳುಹೋಗುತ್ತಾರೆ.</p>.<p>‘ಕೊರೊನಾ ಲಾಕ್ಡೌನ್ಗೂ ಮುನ್ನ ಬರುತ್ತಿದ್ದ ಬಸ್ಗಳು ಈಗ ಗ್ರಾಮಗಳಿಗೆ ಬರುತ್ತಿಲ್ಲ. ಬಹುತೇಕ ಎಲ್ಲಾ ಬಸ್ಗಳು ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿ ಮೂಲಕವೇ ಸಂಚರಿಸುತ್ತವೆ. ಇದರಿಂದ ನಾವು ರಾಜ್ಯ ಹೆದ್ದಾರಿಯವರೆಗೆ ನಡೆದುಕೊಂಡು ಹೋಗಬೇಕಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.</p>.<p>‘ಬಸ್ಗಳು ಸಕಾಲಕ್ಕೆ ಸಿಗದ ಕಾರಣ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಬಸ್ಪಾಸ್ ಇದ್ದರೂ ಕೆಲ ಬಸ್ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವಂತೆ ನಿರ್ವಾಹಕರು ಸೂಚಿಸುತ್ತಾರೆ’ ಎಂದರು.</p>.<p>‘ಕಡೇಚೂರು ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬಸ್ ನಿಲುಗಡೆ ಆಗದ ಕಾರಣ ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಿದೆ. ಗ್ರಾಮಕ್ಕೆ ಬಸ್ ಬರುವಂತೆ ಮಾಡಿ, ಪ್ರಯಾಣಿರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕಡೇಚೂರು ನಿವಾಸಿ ವೀರೇಶ ಸಾಹುಕಾರ ಆವಂಟಿ ಅವರು ಒತ್ತಾಯಿಸಿದರು.</p>.<p>***</p>.<p>ಬಸ್ ಬಾರದ ಕಾರಣ ನಾವು ಪ್ರತಿದಿನ ಕೆಐಎಡಿಬಿ ಕ್ರಾಸ್ವರೆಗೆ ನಡೆದುಕೊಂಡು ಹೋಗಬೇಕಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ.<br />-<em><strong>ಅನಿಲ, ವಿದ್ಯಾರ್ಥಿ ಕಡೇಚೂರು</strong></em></p>.<p>***</p>.<p>ಗ್ರಾಮದ ಪುರುಷರು ನಡೆದುಕೊಂಡು ಹೋಗಿ ಬಸ್ ಹಿಡಿಯುತ್ತಾರೆ. ಆದರೆ, ವಿದ್ಯಾರ್ಥಿನಿಯರಿಗೆ 3 ಕಿ.ಮೀ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ<em>.<br /><strong>-ಶಿರೀಷಾ, ವಿದ್ಯಾರ್ಥಿನಿ ಕಡೇಚೂರು</strong></em></p>.<p>***</p>.<p>ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ರಾಜ್ಯ ಹೆದ್ದಾರಿಯನ್ನು ತಡೆದು ಹೋರಾಟ ಮಾಡಬೇಕಿದೆ.<br />-<strong><em>ವಿರೇಶ ಸಜ್ಜನ್, ಯುವ ಮುಖಂಡ ಕಡೇಚೂರು</em></strong></p>.<p>***</p>.<p>ಕಡೇಚೂರು ಗ್ರಾಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಸೋಮವಾರದಿಂದ ಗ್ರಾಮದ ಒಳಗಡೆ ಬಸ್ ಸೌಲಭ್ಯಕ್ಕೆ ಆದೇಶ ಮಾಡುತ್ತೇನೆ.<br /><em><strong>-ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಇಕೆಆರ್ಟಿಸಿ ಯಾದಗಿರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong> ಸೈದಾಪುರ ಹೋಬಳಿ ವ್ಯಾಪ್ತಿಯ ಕಡೇಚೂರು ಗ್ರಾಮಕ್ಕೆ ಬಸ್ಗಳು ಬಾರದ ಕಾರಣ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೂರು ಕಿ.ಮೀ ನಡೆಯಬೇಕಾದಪರಿಸ್ಥಿತಿಯಿದೆ.</p>.<p>ಕಡೇಚೂರಿನಿಂದ ಪಟ್ಟಣದ ವಿದ್ಯಾವರ್ಧಕ ಪೌಢಶಾಲೆ, ಕಾಲೇಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳುಹೋಗುತ್ತಾರೆ.</p>.<p>‘ಕೊರೊನಾ ಲಾಕ್ಡೌನ್ಗೂ ಮುನ್ನ ಬರುತ್ತಿದ್ದ ಬಸ್ಗಳು ಈಗ ಗ್ರಾಮಗಳಿಗೆ ಬರುತ್ತಿಲ್ಲ. ಬಹುತೇಕ ಎಲ್ಲಾ ಬಸ್ಗಳು ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿ ಮೂಲಕವೇ ಸಂಚರಿಸುತ್ತವೆ. ಇದರಿಂದ ನಾವು ರಾಜ್ಯ ಹೆದ್ದಾರಿಯವರೆಗೆ ನಡೆದುಕೊಂಡು ಹೋಗಬೇಕಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.</p>.<p>‘ಬಸ್ಗಳು ಸಕಾಲಕ್ಕೆ ಸಿಗದ ಕಾರಣ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಬಸ್ಪಾಸ್ ಇದ್ದರೂ ಕೆಲ ಬಸ್ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವಂತೆ ನಿರ್ವಾಹಕರು ಸೂಚಿಸುತ್ತಾರೆ’ ಎಂದರು.</p>.<p>‘ಕಡೇಚೂರು ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬಸ್ ನಿಲುಗಡೆ ಆಗದ ಕಾರಣ ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಿದೆ. ಗ್ರಾಮಕ್ಕೆ ಬಸ್ ಬರುವಂತೆ ಮಾಡಿ, ಪ್ರಯಾಣಿರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕಡೇಚೂರು ನಿವಾಸಿ ವೀರೇಶ ಸಾಹುಕಾರ ಆವಂಟಿ ಅವರು ಒತ್ತಾಯಿಸಿದರು.</p>.<p>***</p>.<p>ಬಸ್ ಬಾರದ ಕಾರಣ ನಾವು ಪ್ರತಿದಿನ ಕೆಐಎಡಿಬಿ ಕ್ರಾಸ್ವರೆಗೆ ನಡೆದುಕೊಂಡು ಹೋಗಬೇಕಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ.<br />-<em><strong>ಅನಿಲ, ವಿದ್ಯಾರ್ಥಿ ಕಡೇಚೂರು</strong></em></p>.<p>***</p>.<p>ಗ್ರಾಮದ ಪುರುಷರು ನಡೆದುಕೊಂಡು ಹೋಗಿ ಬಸ್ ಹಿಡಿಯುತ್ತಾರೆ. ಆದರೆ, ವಿದ್ಯಾರ್ಥಿನಿಯರಿಗೆ 3 ಕಿ.ಮೀ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ<em>.<br /><strong>-ಶಿರೀಷಾ, ವಿದ್ಯಾರ್ಥಿನಿ ಕಡೇಚೂರು</strong></em></p>.<p>***</p>.<p>ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ರಾಜ್ಯ ಹೆದ್ದಾರಿಯನ್ನು ತಡೆದು ಹೋರಾಟ ಮಾಡಬೇಕಿದೆ.<br />-<strong><em>ವಿರೇಶ ಸಜ್ಜನ್, ಯುವ ಮುಖಂಡ ಕಡೇಚೂರು</em></strong></p>.<p>***</p>.<p>ಕಡೇಚೂರು ಗ್ರಾಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಸೋಮವಾರದಿಂದ ಗ್ರಾಮದ ಒಳಗಡೆ ಬಸ್ ಸೌಲಭ್ಯಕ್ಕೆ ಆದೇಶ ಮಾಡುತ್ತೇನೆ.<br /><em><strong>-ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಇಕೆಆರ್ಟಿಸಿ ಯಾದಗಿರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>