ನಾರಾಯಣಪುರ: ವಿಜಯಪುರ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ನಡೆಲಿರುವ ಅಮೋಘ ಸಿದ್ದೇಶ್ವರರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಲು, ಸ್ಥಳೀಯ ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ 11 ಜನ ಯುವಕರು ಶನಿವಾರದಿಂದ ಪಾದಯಾತ್ರೆಯನ್ನು ಆರಂಭಿಸಿದರು.
ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ನ.23 ರಂದು ಜರಗುವ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಸೇರಿದಂತೆ ಭಂಡಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪಾದಯಾತ್ರಿ ಸಿದ್ದು ಕಮಲಾಪುರ ಮಾತನಾಡಿ ಕಳೆದ 9 ವರ್ಷಗಳಿಂದ ಪಾದಯಾತ್ರೆಯ ಮೂಲಕ ಅರಕೇರಾ ಜಾತ್ರೆಗೆ ತೆರಳಲಾಗುತ್ತಿದೆ ಎಂದು ತಿಳಿಸಿದರು.