<p>ಯರಗೋಳ: ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಬುಧವಾರ ಕರ್ಪ್ಯೂ ಸಂಪೂರ್ಣ ಯಶಸ್ವಿಯಾಗಿದೆ. ಹಾಲು, ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೂ ತೆರೆದಿದ್ದವು.</p>.<p>ಗ್ರಾಮ ಪಂಚಾಯಿತಿ, ಪೊಲೀಸ್, ಗ್ರಾಮ ಲೆಕ್ಕಿಗ ಮತ್ತು ಸಹಾಯಕರು ಬಟ್ಟೆ, ಮೊಬೈಲ್, ಗ್ಯಾರೇಜ್, ಪಾನಶಾಪ್, ಕಬ್ಬಿಣ, ಮಾಂಸ, ಹೋಟೆಲ್ಗಳ ಬಾಗಿಲು ಮುಚ್ಚಿಸಿದರು. ಮೆಡಿಕಲ್, ಆಸ್ಪತ್ರೆಗಳು ತೆರೆದಿದ್ದವು. ಗುಂಪಾಗಿ ಸೇರುತ್ತಿದ್ದ ಜನರನ್ನು ಚದುರಿಸಲಾಯಿತು.</p>.<p>ಆಟೊ, ಬೈಕ್, ಕ್ರೂಸರ್ ಸಂಚಾರ ನಿಲ್ಲಿಸಲಾಗಿತ್ತು. ಬಸ್ಗಳು ಸಂಚರಿಸಿದವು. ಸಾರ್ವಜನಿಕರು ಹಲವು ಗ್ರಾಮಗಳಲ್ಲಿ ಬಂದ್ಗೆ ಬೆಂಬಲಿಸಿರುವುದು ಕಂಡುಬಂತು.</p>.<p>ಮದುವೆ, ತೊಟ್ಟಿಲು, ದೇವರು ಸಮಾರಂಭದಲ್ಲಿ ಜನರು ಕಾಣಿಸಿಕೊಂಡರು. ಮುಖಕ್ಕೆ ಮಾಸ್ಕ್ ಹಾಕುವುದನ್ನು ಜನ ಮರೆತಿದ್ದರು. ಕೃಷಿ ಮತ್ತು ಕಟ್ಟಡ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದರು.</p>.<p>ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕಂಚಗಾರಳ್ಳಿ, ಗುಲಗುಂಜಿ, ವೆಂಕಟೇಶ ನಗರ, ಕಂಚಗಾರಳ್ಳಿ, ಖಾನಳ್ಳಿ, ಅರಿಕೇರಾ ಬಿ., ಕ್ಯಾಸಪ್ಪನಳ್ಳಿ, ಬಸವಂತಪುರ, ಹೆಡಗಿಮದ್ರಾ, ಅಬ್ಬೆತುಮಕೂರು, ಮುದ್ನಾಳ, ಚಾಮನಳ್ಳಿ, ಬಂದಳ್ಳಿ, ಯಡ್ಡಳ್ಳಿ, ಬೆಳಗೇರಾ, ಹೊನಗೇರಾ, ಕಟ್ಟಿಗೆ ಶಾಹಾಪುರ, ಮೋಟ್ನಳ್ಳಿ ಗ್ರಾಮಗಳಲ್ಲಿ ಕರ್ಪ್ಯೂ ವಾತಾವರಣವಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯರಗೋಳ: ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಬುಧವಾರ ಕರ್ಪ್ಯೂ ಸಂಪೂರ್ಣ ಯಶಸ್ವಿಯಾಗಿದೆ. ಹಾಲು, ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೂ ತೆರೆದಿದ್ದವು.</p>.<p>ಗ್ರಾಮ ಪಂಚಾಯಿತಿ, ಪೊಲೀಸ್, ಗ್ರಾಮ ಲೆಕ್ಕಿಗ ಮತ್ತು ಸಹಾಯಕರು ಬಟ್ಟೆ, ಮೊಬೈಲ್, ಗ್ಯಾರೇಜ್, ಪಾನಶಾಪ್, ಕಬ್ಬಿಣ, ಮಾಂಸ, ಹೋಟೆಲ್ಗಳ ಬಾಗಿಲು ಮುಚ್ಚಿಸಿದರು. ಮೆಡಿಕಲ್, ಆಸ್ಪತ್ರೆಗಳು ತೆರೆದಿದ್ದವು. ಗುಂಪಾಗಿ ಸೇರುತ್ತಿದ್ದ ಜನರನ್ನು ಚದುರಿಸಲಾಯಿತು.</p>.<p>ಆಟೊ, ಬೈಕ್, ಕ್ರೂಸರ್ ಸಂಚಾರ ನಿಲ್ಲಿಸಲಾಗಿತ್ತು. ಬಸ್ಗಳು ಸಂಚರಿಸಿದವು. ಸಾರ್ವಜನಿಕರು ಹಲವು ಗ್ರಾಮಗಳಲ್ಲಿ ಬಂದ್ಗೆ ಬೆಂಬಲಿಸಿರುವುದು ಕಂಡುಬಂತು.</p>.<p>ಮದುವೆ, ತೊಟ್ಟಿಲು, ದೇವರು ಸಮಾರಂಭದಲ್ಲಿ ಜನರು ಕಾಣಿಸಿಕೊಂಡರು. ಮುಖಕ್ಕೆ ಮಾಸ್ಕ್ ಹಾಕುವುದನ್ನು ಜನ ಮರೆತಿದ್ದರು. ಕೃಷಿ ಮತ್ತು ಕಟ್ಟಡ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದರು.</p>.<p>ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕಂಚಗಾರಳ್ಳಿ, ಗುಲಗುಂಜಿ, ವೆಂಕಟೇಶ ನಗರ, ಕಂಚಗಾರಳ್ಳಿ, ಖಾನಳ್ಳಿ, ಅರಿಕೇರಾ ಬಿ., ಕ್ಯಾಸಪ್ಪನಳ್ಳಿ, ಬಸವಂತಪುರ, ಹೆಡಗಿಮದ್ರಾ, ಅಬ್ಬೆತುಮಕೂರು, ಮುದ್ನಾಳ, ಚಾಮನಳ್ಳಿ, ಬಂದಳ್ಳಿ, ಯಡ್ಡಳ್ಳಿ, ಬೆಳಗೇರಾ, ಹೊನಗೇರಾ, ಕಟ್ಟಿಗೆ ಶಾಹಾಪುರ, ಮೋಟ್ನಳ್ಳಿ ಗ್ರಾಮಗಳಲ್ಲಿ ಕರ್ಪ್ಯೂ ವಾತಾವರಣವಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>