<p><strong>ಯರಗೋಳ (ಯಾದಗಿರಿ ಜಿಲ್ಲೆ)</strong>: ರಸ್ತೆ ಮೇಲೆ ಪ್ರಾಣಿ, ಪಕ್ಷಿ ಮೃತಪಟ್ಟಿದ್ದು ಕಂಡರೆ ಕರಣ್ ಚವಾಣ್ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅವುಗಳ ಅಂತ್ಯಕ್ರಿಯೆಗೆ ಮುಂದಾಗುತ್ತಾರೆ. ನೃತ್ಯ ಮತ್ತು ಫುಟ್ಬಾಲ್ ಪಟು ಆಗಿರುವ ಅವರು ಸಂಕಷ್ಟದಲ್ಲಿರುವ ಪ್ರಾಣಿಗಳ ರಕ್ಷಕರೂ ಆಗಿದ್ದಾರೆ.</p>.<p>ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ಶಿವನಗರ ತಾಂಡಾದ 23 ವರ್ಷದ ಯುವಕ ಕರಣ ಚವಾಣ್ ಅವರು ಯರಗೋಳದಲ್ಲಿ ಶಾಲಾ ಶಿಕ್ಷಣವನ್ನು ಮತ್ತು ಯಾದಗಿರಿಯ ಮಲ್ಲಿಕಾ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿದ್ದಾರೆ.</p>.<p>ಮುಂಬೈನ ಸರ್ಕಾರೇತರ ಸಂಸ್ಥೆ ಆಸ್ಕರ್ ಫೌಂಡೇಷನ್ನಿಂದ ಫುಟ್ಬಾಲ್ ತರಬೇತಿ ಪಡೆದು, ಅದೇ ಸಂಸ್ಥೆಯಲ್ಲಿ ತರಬೇತುದಾರರು ಆಗಿದ್ದಾರೆ. ಯಾದಗಿರಿ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳ 500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಫುಟ್ಬಾಲ್ ತರಬೇತಿ ನೀಡುತ್ತಿದ್ದಾರೆ. ಯಾದಗಿರಿಯಲ್ಲಿ ನೃತ್ಯ ತರಬೇತಿ ಶಾಲೆ ತೆರೆದಿದ್ದಾರೆ.</p>.<p>180ಕ್ಕೂ ಹೆಚ್ಚು ಕಡೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಯಿ, ಹಂದಿ, ಬೆಕ್ಕು, ಹಾವು, ಕಾಗೆ, ಎಮ್ಮೆ, ಆಕಳು, ಅಳಿಲು, ಮುಂಗುಸಿಗಳನ್ನು ಸ್ಥಳದಿಂದ ತೆರವುಗೊಳಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.</p>.<p>ಗುಲಬರ್ಗಾ ವಿಶ್ವವಿದ್ಯಾಲಯ ಫುಟ್ಬಾಲ್ ತಂಡದ ಸದಸ್ಯರಾಗಿ ಅಲ್ಲದೇ ಡ್ರೀಮ್ ಫೌಂಡೇಶನ್ ಮುಂಬೈ ‘ರಗ್ಬಿ’ ತಂಡದ ಪ್ರತಿನಿಧಿಯಾಗಿ ಅವರು ವಿವಿಧ ರಾಜ್ಯಗಳಲ್ಲಿ ಆಟವಾಡಿದ್ದಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಆಸ್ಕರ್ ಸಂಸ್ಥೆಯ ನೆರವಿನಿಂದ 1,500 ಜನರಿಗೆ ಆಹಾರ ಸಾಮಗ್ರಿ ಪೊಟ್ಟಣ ವಿತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ (ಯಾದಗಿರಿ ಜಿಲ್ಲೆ)</strong>: ರಸ್ತೆ ಮೇಲೆ ಪ್ರಾಣಿ, ಪಕ್ಷಿ ಮೃತಪಟ್ಟಿದ್ದು ಕಂಡರೆ ಕರಣ್ ಚವಾಣ್ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅವುಗಳ ಅಂತ್ಯಕ್ರಿಯೆಗೆ ಮುಂದಾಗುತ್ತಾರೆ. ನೃತ್ಯ ಮತ್ತು ಫುಟ್ಬಾಲ್ ಪಟು ಆಗಿರುವ ಅವರು ಸಂಕಷ್ಟದಲ್ಲಿರುವ ಪ್ರಾಣಿಗಳ ರಕ್ಷಕರೂ ಆಗಿದ್ದಾರೆ.</p>.<p>ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ಶಿವನಗರ ತಾಂಡಾದ 23 ವರ್ಷದ ಯುವಕ ಕರಣ ಚವಾಣ್ ಅವರು ಯರಗೋಳದಲ್ಲಿ ಶಾಲಾ ಶಿಕ್ಷಣವನ್ನು ಮತ್ತು ಯಾದಗಿರಿಯ ಮಲ್ಲಿಕಾ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿದ್ದಾರೆ.</p>.<p>ಮುಂಬೈನ ಸರ್ಕಾರೇತರ ಸಂಸ್ಥೆ ಆಸ್ಕರ್ ಫೌಂಡೇಷನ್ನಿಂದ ಫುಟ್ಬಾಲ್ ತರಬೇತಿ ಪಡೆದು, ಅದೇ ಸಂಸ್ಥೆಯಲ್ಲಿ ತರಬೇತುದಾರರು ಆಗಿದ್ದಾರೆ. ಯಾದಗಿರಿ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳ 500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಫುಟ್ಬಾಲ್ ತರಬೇತಿ ನೀಡುತ್ತಿದ್ದಾರೆ. ಯಾದಗಿರಿಯಲ್ಲಿ ನೃತ್ಯ ತರಬೇತಿ ಶಾಲೆ ತೆರೆದಿದ್ದಾರೆ.</p>.<p>180ಕ್ಕೂ ಹೆಚ್ಚು ಕಡೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಯಿ, ಹಂದಿ, ಬೆಕ್ಕು, ಹಾವು, ಕಾಗೆ, ಎಮ್ಮೆ, ಆಕಳು, ಅಳಿಲು, ಮುಂಗುಸಿಗಳನ್ನು ಸ್ಥಳದಿಂದ ತೆರವುಗೊಳಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.</p>.<p>ಗುಲಬರ್ಗಾ ವಿಶ್ವವಿದ್ಯಾಲಯ ಫುಟ್ಬಾಲ್ ತಂಡದ ಸದಸ್ಯರಾಗಿ ಅಲ್ಲದೇ ಡ್ರೀಮ್ ಫೌಂಡೇಶನ್ ಮುಂಬೈ ‘ರಗ್ಬಿ’ ತಂಡದ ಪ್ರತಿನಿಧಿಯಾಗಿ ಅವರು ವಿವಿಧ ರಾಜ್ಯಗಳಲ್ಲಿ ಆಟವಾಡಿದ್ದಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಆಸ್ಕರ್ ಸಂಸ್ಥೆಯ ನೆರವಿನಿಂದ 1,500 ಜನರಿಗೆ ಆಹಾರ ಸಾಮಗ್ರಿ ಪೊಟ್ಟಣ ವಿತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>