ಅಲ್ಲದೆ, ಕಾಲುವೆಗೆ ನೀರು ಬಂದ ತಕ್ಷಣ ಕೃಷಿ ಚಟುವಕೆಗಳು ಗರಿಗೆದರುತ್ತವೆ. ಈಗಾಗಲೇ ಕೆಲವು ಕಡೆ ನಾಟಿ ಮಾಡಿದ ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಬೆಳೆಗೆ ಹೆಚ್ಚು ಲಾಭವಾಗಲಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್ ಅವರು ಕಾಲುವೆ ದುರಸ್ತಿ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾಲುವೆ ನೀರು ಅವಲಂಬಿತ ರೈತರು ಮನವಿ ಮಾಡಿದ್ದಾರೆ.