<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆಗೆ ಗಾಯವಾಗುವ ಜತೆಗೆ ಅಪಾರ ಗಿಡ-ಮರಗಳು ಧರೆಗುಳಿದಿವೆ.</p><p>ಪಟ್ಟಣದ ಹೊರವಲಯದ ಗುರುಮಠಕಲ್-ಹೈದರಾಬಾದ್ ರಸ್ತೆಯಲ್ಲಿ ಮರಗಳು ಉರುಳಿದ ಹಿನ್ನಲೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಜೆಸಿಬಿ ಮೂಲಕ ಮರಗಳನ್ನು ತೆರವು ಮಾಡಲಾಯಿತು.</p><p>ಚಪೆಟ್ಲಾ, ಯದ್ಲಾಪುರ, ದಂತಾಪುರ, ಎಂ.ಟಿ.ಪಲ್ಲಿ, ಗ್ರಾಮಗಳಲ್ಲಿ ಮರಗಳು ಉರುಳಿರುವುದಾಗಿ ಆಯಾ ಗ್ರಾಮಸ್ಥರು ಮಾಹಿತಿ ನೀಡಿದರು.</p><p>ಕಂದಕೂರ ಹೊರವಲಯದ ಗಣಪುರ ಕ್ರಾಸ್ ಹತ್ತಿರ ಮರಗಳು ರಸ್ತೆಗುರುಳಿದ್ದು, ತೆರವು ಕಾರ್ಯ ಜರುಗಿದೆ.</p><p>ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಾಳಿಯ ರಭಸಕ್ಕೆ ಮರಗಳು ಉರುಳಿವೆ. ಕಾಕಲವಾರ ಕ್ರಾಸ್ ಹತ್ತಿರ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬುಲೆರೋ ಪಿಕಪ್ ವಾಹನಗಳ ಮೇಲೆ ರಸ್ತೆ ಬದಿಯ ಮರಗಳು ಉರುಳಿದ್ದು, ವಾಹನ ಜಖಂಗೊಂಡಿದೆ.</p><p>ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಸಿದ್ದಮ್ಮ ಅಯ್ಯಪ್ಪ ಅವರಿಗೆ ಮನೆ ಮೇಲಿನ ಪತ್ರಾಸ್ ಬಿದ್ದು ಕೈಗೆ ಬಲವಾದ ಗಾಯವಾಗಿದ್ದು, ಗುರುಮಠಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.</p><p>ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ಥ: </p><p>ಭಾನುವಾರ ಸುರಿದ ಮಳೆ ಮತ್ತು ಭಾರಿ ಗಾಳಿಗೆ ತಾಲ್ಲೂಕಿನ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದಿವೆ. </p><p>ಮರಗಳು ಉರುಳಿದ ಪರಿಣಾಮ ವಿದ್ಯುತ್ ಸರಬರಾಜು ತಂತಿಗಳು ತುಂಡಾಗಿದ್ದು, ಜೆಸ್ಕಾಂ ಸಿಬ್ಬಂದಿ ಸದ್ಯ ಸಂಪರ್ಕ ಜಾಲದಲ್ಲಾದ ಸಮಸ್ಯೆಯನ್ನು ಗುರುತಿಸುತ್ತಿದ್ದು, ದುರಸ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p><p>//ಬಾಕ್ಸ್//</p><p><strong>ಗಾಳಿಸಹಿತ ಮಳೆಗೆ ಬಾಲಕಿ ಸಾವು</strong></p><p>ಗುರುಮಠಕಲ್: ಪಟ್ಟಣದ ಉಪ್ಪಾರಗಡ್ಡಾ ಬಡಾವಣೆಯ ನಿವಾಸಿ ತಿಮ್ಮಪ್ಪ ಯಾದವ ಅವರ ಪುತ್ರಿ ಮಾನಸಿ (4) ಗಾಳಿಯ ರಭಸಕ್ಕೆ ಪತ್ರಾಸ್ ಮೇಲಿಟ್ಟ ಪೇಚಿಂಗ್ ಕಲ್ಲು ತಲೆ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.</p><p>ಪಟ್ಟಣದ ಹೊರವಲಯದ ತಮ್ಮ ಜಮೀನಿನಲ್ಲಿದ್ದ ಪತ್ರಾಸ್ ಮೇಲ್ಛಾವಣಿಯ ಕಟ್ಟಡದಲ್ಲಿದ್ದಾಗ ಗಾಳಿ ಸಹಿತ ಮಳೆ ಆರಂಭವಾಗಿದೆ. ಗಾಳಿಯ ರಭಸಕ್ಕೆ ಪತ್ರಾಸ್ ಹಾರಾಡಿದಾಗ, ಪತ್ರಾಸ್ ಮೇಲಿಟ್ಟಿದ್ದ ಪೇಚಿಂಗ್ ಕಲ್ಲು ಬಿದ್ದಿದೆ. ಆ ವೇಳೆಗೆ ಕೋಣೆಯಿಂದ ಹೊರಗೆ ಹೋಗಿದ್ದ ಬಾಲಕಿ ಮಾನಸಿ ತಲೆ ಮೇಲೆ ಕಲ್ಲು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.</p><p>ಮೃತ ಬಾಲಕಿ ಮನೆಗೆ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಹಾಗೂ ಕಂದಾಯ ಸಿಬ್ಬಂದಿ ಭೆಟಿ ನೀಡಿ, ಪರಿಶೀಲಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆಗೆ ಗಾಯವಾಗುವ ಜತೆಗೆ ಅಪಾರ ಗಿಡ-ಮರಗಳು ಧರೆಗುಳಿದಿವೆ.</p><p>ಪಟ್ಟಣದ ಹೊರವಲಯದ ಗುರುಮಠಕಲ್-ಹೈದರಾಬಾದ್ ರಸ್ತೆಯಲ್ಲಿ ಮರಗಳು ಉರುಳಿದ ಹಿನ್ನಲೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಜೆಸಿಬಿ ಮೂಲಕ ಮರಗಳನ್ನು ತೆರವು ಮಾಡಲಾಯಿತು.</p><p>ಚಪೆಟ್ಲಾ, ಯದ್ಲಾಪುರ, ದಂತಾಪುರ, ಎಂ.ಟಿ.ಪಲ್ಲಿ, ಗ್ರಾಮಗಳಲ್ಲಿ ಮರಗಳು ಉರುಳಿರುವುದಾಗಿ ಆಯಾ ಗ್ರಾಮಸ್ಥರು ಮಾಹಿತಿ ನೀಡಿದರು.</p><p>ಕಂದಕೂರ ಹೊರವಲಯದ ಗಣಪುರ ಕ್ರಾಸ್ ಹತ್ತಿರ ಮರಗಳು ರಸ್ತೆಗುರುಳಿದ್ದು, ತೆರವು ಕಾರ್ಯ ಜರುಗಿದೆ.</p><p>ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಾಳಿಯ ರಭಸಕ್ಕೆ ಮರಗಳು ಉರುಳಿವೆ. ಕಾಕಲವಾರ ಕ್ರಾಸ್ ಹತ್ತಿರ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬುಲೆರೋ ಪಿಕಪ್ ವಾಹನಗಳ ಮೇಲೆ ರಸ್ತೆ ಬದಿಯ ಮರಗಳು ಉರುಳಿದ್ದು, ವಾಹನ ಜಖಂಗೊಂಡಿದೆ.</p><p>ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಸಿದ್ದಮ್ಮ ಅಯ್ಯಪ್ಪ ಅವರಿಗೆ ಮನೆ ಮೇಲಿನ ಪತ್ರಾಸ್ ಬಿದ್ದು ಕೈಗೆ ಬಲವಾದ ಗಾಯವಾಗಿದ್ದು, ಗುರುಮಠಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.</p><p>ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ಥ: </p><p>ಭಾನುವಾರ ಸುರಿದ ಮಳೆ ಮತ್ತು ಭಾರಿ ಗಾಳಿಗೆ ತಾಲ್ಲೂಕಿನ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದಿವೆ. </p><p>ಮರಗಳು ಉರುಳಿದ ಪರಿಣಾಮ ವಿದ್ಯುತ್ ಸರಬರಾಜು ತಂತಿಗಳು ತುಂಡಾಗಿದ್ದು, ಜೆಸ್ಕಾಂ ಸಿಬ್ಬಂದಿ ಸದ್ಯ ಸಂಪರ್ಕ ಜಾಲದಲ್ಲಾದ ಸಮಸ್ಯೆಯನ್ನು ಗುರುತಿಸುತ್ತಿದ್ದು, ದುರಸ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p><p>//ಬಾಕ್ಸ್//</p><p><strong>ಗಾಳಿಸಹಿತ ಮಳೆಗೆ ಬಾಲಕಿ ಸಾವು</strong></p><p>ಗುರುಮಠಕಲ್: ಪಟ್ಟಣದ ಉಪ್ಪಾರಗಡ್ಡಾ ಬಡಾವಣೆಯ ನಿವಾಸಿ ತಿಮ್ಮಪ್ಪ ಯಾದವ ಅವರ ಪುತ್ರಿ ಮಾನಸಿ (4) ಗಾಳಿಯ ರಭಸಕ್ಕೆ ಪತ್ರಾಸ್ ಮೇಲಿಟ್ಟ ಪೇಚಿಂಗ್ ಕಲ್ಲು ತಲೆ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.</p><p>ಪಟ್ಟಣದ ಹೊರವಲಯದ ತಮ್ಮ ಜಮೀನಿನಲ್ಲಿದ್ದ ಪತ್ರಾಸ್ ಮೇಲ್ಛಾವಣಿಯ ಕಟ್ಟಡದಲ್ಲಿದ್ದಾಗ ಗಾಳಿ ಸಹಿತ ಮಳೆ ಆರಂಭವಾಗಿದೆ. ಗಾಳಿಯ ರಭಸಕ್ಕೆ ಪತ್ರಾಸ್ ಹಾರಾಡಿದಾಗ, ಪತ್ರಾಸ್ ಮೇಲಿಟ್ಟಿದ್ದ ಪೇಚಿಂಗ್ ಕಲ್ಲು ಬಿದ್ದಿದೆ. ಆ ವೇಳೆಗೆ ಕೋಣೆಯಿಂದ ಹೊರಗೆ ಹೋಗಿದ್ದ ಬಾಲಕಿ ಮಾನಸಿ ತಲೆ ಮೇಲೆ ಕಲ್ಲು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.</p><p>ಮೃತ ಬಾಲಕಿ ಮನೆಗೆ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಹಾಗೂ ಕಂದಾಯ ಸಿಬ್ಬಂದಿ ಭೆಟಿ ನೀಡಿ, ಪರಿಶೀಲಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>